Biggboss Kannada: ಮನೆಯಲ್ಲಿ ಒಂದಾದ ಪ್ರಶಾಂತ್ – ರೂಪೇಶ್ ರಾಜಣ್ಣ: ಇಷ್ಟು ದಿವಸ ಇದ್ದಂಗೆ ಇವಾಗ ಇಲ್ಲ. ಯಾಕೆ ಗೊತ್ತೇ??

Biggboss Kannada: ಪ್ರಶಾಂತ್ (Prashanth Sambargi) ಬಿಗ್ ಬಾಸ್ ಸೀಸನ್ ಒಂಬತ್ತರಲ್ಲಿ (BBK9) ಸ್ಪರ್ಧಿಗಳಾಗಿರುವ ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ (Roopesh Rajanna) ಅವರು ಮೊದಲು ಒಂದು ರೀತಿಯ ಶತ್ರುಗಳಂತೆ ವರ್ತಿಸುತ್ತಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಜಗಳವಾಡುತ್ತಿದ್ದರು. ವಾದ ಪ್ರತಿವಾದ ತಾರಕಕ್ಕೆ ಏರುತ್ತಿತ್ತು ಎಂದೇ ಹೇಳಬಹುದು. ಎಲ್ಲ ವಿಷಯಗಳಿಗೂ ಜಗಳ ತೆಗೆದು ಮನೆಯಲ್ಲಿ ಇಬ್ಬರು ಕೂಗಾಡುತ್ತಿದ್ದರು. ಒಂದು ಮಟ್ಟಕ್ಕೆ ವೀಕ್ಷಕರಿಗೂ ಕಿರಿಕಿರಿ ಎನಿಸುವಷ್ಟರ ಮಟ್ಟಿಗೆ ಇಬ್ಬರು ಶತ್ರುಗಳಂತೆ ವರ್ತಿಸುತ್ತಿದ್ದರು. ಆದರೆ ಆಶ್ಚರ್ಯ ಎಂಬಂತೆ ಇತ್ತೀಚಿಗೆ ಇಬ್ಬರು ಒಳ್ಳೆಯ ಸ್ನೇಹಿತರಾಗಿ ಬಿಟ್ಟಿದ್ದಾರೆ. ಇದು ಸ್ವತಃ ಸುದೀಪವರಿಗೂ (Sudeep) ಕೂಡ ಆಶ್ಚರ್ಯ ಉಂಟು ಮಾಡಿದೆ. ಸುದೀಪ್ ಅವರು ಇದರ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ನೀವಿಬ್ಬರೂ ಮೊದಲು ಹೇಗಿದ್ದೀರಿ ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇತ್ತೀಚಿಗೆ ನೀವಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೀರಿ. ಒಳ್ಳೆಯ ಸ್ನೇಹಿತರಾಗಿ ವರ್ತಿಸುತ್ತಿದ್ದೀರಿ. ಇದಂತೂ ನಮ್ಮೆಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ ಎಂಬ ರೀತಿಯಲ್ಲಿ ಕಿಚ್ಚ ಸುದೀಪ್ ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ಅವರ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ “ಹೊರಗಡೆ ನಮ್ಮಿಬ್ಬರಿಗೂ ಬೇರೆ ಬೇರೆ ಕಾರಣಗಳಿಗೆ ಭಿನ್ನಾಭಿಪ್ರಾಯವಿತ್ತು. ಕೆಲವು ಬಾರಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ನಾವು ಮನೆ ಒಳಗು ಅದನ್ನೇ ಮುಂದುವರಿಸಿದೆವು. ಆದರೆ ಅದು ತಪ್ಪು ಎಂದು ನನಗೆ ಅರ್ಥವಾಯಿತು. ಪೂರ್ವಗ್ರಹ ಪೀಡಿತರಾಗಿ ಪರಸ್ಪರ ಇಬ್ಬರು ಏನೇ ಹೇಳಿದರೂ ಅದು ತಪ್ಪೆಂದೇ ನಮಗೆ ಅನಿಸುತ್ತಿತ್ತು. ಆದರೆ ನಂತರ ಯೋಚಿಸಿದಾಗ ಇದು ಸರಿಯಲ್ಲ ಎನಿಸಿತು. ಹೀಗಾಗಿ ನಾವು ಇದ್ದಷ್ಟು ದಿನ ಸ್ನೇಹಿತರಾಗಿ ಇರೋಣ ಎಂದು ನಿರ್ಧರಿಸಿದೆವು” ಎಂದು ಪ್ರಶಾಂತ್ ಹೇಳಿದ್ದಾರೆ.ಇದನ್ನು ಓದಿ.. Biggboss Kannada: ಬಿಗ್ ಬಾಸ್ ನಿಂದ ಹೊರಬಂದ ಕೆಲವೇ ವಾರಗಳಲ್ಲಿ ಗಂಭೀರ ಆರೋಪ ಮಾಡಿದ ಸನ್ಯಾ ಐಯ್ಯರ್. ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ??

biggboss kannada prashanth roopesh | Biggboss Kannada: ಮನೆಯಲ್ಲಿ ಒಂದಾದ ಪ್ರಶಾಂತ್ - ರೂಪೇಶ್ ರಾಜಣ್ಣ: ಇಷ್ಟು ದಿವಸ ಇದ್ದಂಗೆ ಇವಾಗ ಇಲ್ಲ. ಯಾಕೆ ಗೊತ್ತೇ??
Biggboss Kannada: ಮನೆಯಲ್ಲಿ ಒಂದಾದ ಪ್ರಶಾಂತ್ - ರೂಪೇಶ್ ರಾಜಣ್ಣ: ಇಷ್ಟು ದಿವಸ ಇದ್ದಂಗೆ ಇವಾಗ ಇಲ್ಲ. ಯಾಕೆ ಗೊತ್ತೇ?? 2

ಇದರ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ “ನನಗೆ ಯಾವುದೇ ದ್ವೇಷವಿಲ್ಲ. ಪ್ರಶಾಂತವರು ನನ್ನ ಜೊತೆ ಚೆನ್ನಾಗಿ ಇರುತ್ತಾರೆ ಎಂದರೆ ನಾನು ಹಾಗೆ ಇರುತ್ತೇನೆ. ನಾವಿಬ್ಬರೂ ಏಕೆ ಹೀಗೆ ಕಿತ್ತಾಡಬೇಕು. ಅನಗತ್ಯವಾಗಿ ಸುಮ್ಮನೆ ವಾದ ಮಾಡುತ್ತಿದ್ದೇವೆ ಎನಿಸಿತು. ಹಾಗಾಗಿಯೇ ಅದನ್ನೆಲ್ಲ ಬಿಟ್ಟು ಸ್ಪರ್ದಿಗಳಾಗಿ ಇರೋಣ, ಜೊತೆಗೆ ಸ್ನೇಹಿತರಾಗಿರೋಣ ಎಂದು ನಿರ್ಧರಿಸಿದವು. ಹಾಗಾಗಿ ಹಳೆಯ ಮನಸ್ತಾಪ ಬಿಟ್ಟುಬಿಟ್ಟಿದ್ದೇವೆ. ಹೊರಗೆ ನಡೆದಿದ್ದನ್ನೆಲ್ಲಾ ಮರೆತು ಇಲ್ಲಿ ಸ್ಪರ್ಧಿಗಳಾಗಿ ಆಡಬೇಕೆಂದು ನಿರ್ಧರಿಸಿದ್ದೇವೆ. ಅವರು ನನ್ನೊಂದಿಗೆ ಹೇಗೆ ನಡೆದುಕೊಳ್ಳುತ್ತಾರೋ ನಾನು ಅದೇ ರೀತಿ ಪ್ರತಿಕ್ರಿಸುತ್ತೇನೆ. ಈ ಸ್ನೇಹ ಎಲ್ಲಿಯವರೆಗೆ ಇರುತ್ತದೆ ಗೊತ್ತಿಲ್ಲ. ಆದರೆ ಇದ್ದಷ್ಟು ದಿನ ಚೆನ್ನಾಗಿರುತ್ತೆವೆ” ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ. ಇವರ ಮಾತುಗಳಿಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ವಿರುದ್ಧವವೇ ನಿಂತ ಸನ್ಯಾ ಐಯ್ಯರ್. ದಿಡೀರ್ ಎಂದು ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ?? ಕೆಂಡ ಕಾರಿದ್ದು ಯಾಕೆ ಗೊತ್ತೇ?

Comments are closed.