Biggboss Kannada: ಇನ್ನು ಮುಂದೆ ಅಸಲಿ ಆತ ಶುರು: ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಸ್ನೇಹ ಬ್ರೇಕ್: ಕೆರಳಿದ ರೂಪೇಶ್ ಮಾಡಿದ್ದೇನು ಗೊತ್ತೆ?

Biggboss Kannada: ರೂಪೇಶ್ ರಾಜಣ್ಣ (Roopesh Rajanna) ಮತ್ತು ಪ್ರಶಾಂತ್ ಸಂಬರಗಿ (Prashanth Sambhargi) ಮತ್ತೆ ಬಿಗ್ ಬಾಸ್ (BBK9) ಮನೆಯಲ್ಲಿ ಕಿತ್ತಾಟ ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ಸಾಕಷ್ಟು ಕಾರಣಗಳಿಗೆ ಇಬ್ಬರ ನಡುವೆ ವೈಮನಸ್ಯವಿತ್ತು. ಹಲವಾರು ಬಾರಿ ಇದು ಪ್ರದರ್ಶನವು ಆಗಿತ್ತು. ಸಾಕಷ್ಟು ಕಾರಣಗಳಿಗೆ ಅವರು ಜಗಳ ಮಾಡಿಕೊಂಡಿದ್ದರು. ಆದರೆ ಕೆಲವು ದಿನಗಳಿಂದ ಅವರು ಒಳ್ಳೆಯ ಸ್ನೇಹಿತರಾಗಿ ಬದಲಾಗಿದ್ದರು. ಈ ಬೆಳವಣಿಗೆ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಇಬ್ಬರೂ ಕೂಡ ತಮ್ಮ ಮನಸ್ತಾಪಗಳನ್ನು ಬಿಟ್ಟು ಒಳ್ಳೆಯ ಸ್ನೇಹಿತರಂತೆ ಮನೆಯಲ್ಲಿ ಕಾಣಿಸುತ್ತಿದ್ದರು. ಆದರೆ ಇದೀಗ ಮತ್ತೆ ಇವರಿಬ್ಬರ ನಡುವೆ ಮನಸ್ತಾಪ ಮೂಡಿದೆ. ಇಬ್ಬರ ಸ್ನೇಹಕ್ಕೂ ಬ್ರೇಕ್ ಬಿದ್ದಿದ್ದು ಇಬ್ಬರೂ ಕೂಡ ದೊಡ್ಡ ಪ್ರತಿವಾದಕ್ಕೆ ಇಳಿದಿದ್ದಾರೆ. ನೆನ್ನೆ ನಡೆದ ಸಂಚಿಕೆಯಲ್ಲಿ ಇವರಿಬ್ಬರ ನಡುವೆ ಜುಗಲ್ ಬಂದಿ ನಡೆದಿದ್ದು, ಇಬ್ಬರು ನೀನು ಯಾವ ಸೀಮೆ ಫ್ರೆಂಡ್ ಎಂದು ಬೈದಾಡಿಕೊಂಡಿದ್ದಾರೆ.

ಮೊದಲಿನಿಂದಲೂ ಜಗಳ, ಕೂಗಾಟಕ್ಕೆ ಫೇಮಸ್ ಆಗಿದ್ದು ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ಜೋಡಿ. ಬಿಗ್ ಬಾಸ್ ಸೀಸನ್ ಶುರುವಾದಾಗಿನಿಂದಲೂ ಹಲವಾರು ಕಾರಣಗಳಿಗಾಗಿ ಇವರಿಬ್ಬರು ಕಿತ್ತಾಡಿಕೊಂಡಿದ್ದಾರೆ. ಆದರೆ ಆ ನಂತರದ ಬೆಳವಣಿಗೆಗಳಿಂದಾಗಿ ಅವರು ತಮ್ಮ ತಪ್ಪಿನ ಅರಿವಾದ ನಂತರ ಎಲ್ಲವನ್ನು ಬಿಟ್ಟು ಒಳ್ಳೆಯ ಸ್ನೇಹಿತರ ಹಾಗೆ ಇರತೊಡಗಿದರು. ಇದರ ಬಗ್ಗೆ ಆಶ್ಚರ್ಯದಿಂದ ಕಿಚ್ಚ ಸುದೀಪ್ ಕೂಡ ಪ್ರಶ್ನಿಸಿದ್ದರು. ಆಗ “ವಿನಾಕಾರಣ ಸುಮ್ಮನೆ ಜಗಳ, ಮನಸ್ತಾಪವನ್ನು ಬಿಟ್ಟು ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಇರೋಣವೆಂದು ನಿರ್ಧರಿಸಿದ್ದೇವೆ” ಎಂದು ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ಹೇಳಿದ್ದರು. ಇದು ಎಲ್ಲರ ಮೆಚ್ಚುಗೆಗೂ ಕಾರಣವಾಗಿತ್ತು. ಆದರೆ ಇವರಿಬ್ಬರ ಸ್ನೇಹ ಶುರುವಾಗಿ ಕೆಲವೇ ದಿನಗಳಲ್ಲಿ ಮತ್ತೆ ಇವರು ಕಿತ್ತಾಡಿಕೊಂಡಿದ್ದಾರೆ. ಈ ಸಂಚಿಕೆ ನೆನ್ನೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದೆ. ಇದನ್ನು ಓದಿ..Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ?

bigboss kannada prashanth sambhargi roopesh rajanna | Biggboss Kannada: ಇನ್ನು ಮುಂದೆ ಅಸಲಿ ಆತ ಶುರು: ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಸ್ನೇಹ ಬ್ರೇಕ್: ಕೆರಳಿದ ರೂಪೇಶ್ ಮಾಡಿದ್ದೇನು ಗೊತ್ತೆ?
Biggboss Kannada: ಇನ್ನು ಮುಂದೆ ಅಸಲಿ ಆತ ಶುರು: ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಸ್ನೇಹ ಬ್ರೇಕ್: ಕೆರಳಿದ ರೂಪೇಶ್ ಮಾಡಿದ್ದೇನು ಗೊತ್ತೆ? 2

ಈ ವಾರ ರೂಪೇಶ್ ರಾಜಣ್ಣ ಕ್ಯಾಪ್ಟನ್ ಆಗಿದ್ದರು. ಈ ನಡುವೆ ರಾಜಣ್ಣ ಅವರ ಕ್ಯಾಪ್ಟನ್ ವಿಷಯವಾಗಿ ತಕರಾರು ತೆಗೆದಿರುವ ಪ್ರಶಾಂತ್ ಅವರೊಂದಿಗೆ ವಾದಕ್ಕಿಳಿದಿದ್ದಾರೆ. ಆಗ ರಾಜಣ್ಣ ನೀನು ಯಾವ ಸೀಮೆ ಫ್ರೆಂಡ್ ಎಂದು ಕೇಳುವಷ್ಟರ ಮಟ್ಟಿಗೆ ವಾದ ತಾರಕಕ್ಕೆರಿದೆ. ಪ್ರಶಾಂತ್ ನೀನು ಕ್ಯಾಪ್ಟನ್ ಆಗಿ ಸರ್ವಾಧಿಕಾರಿ ಡಿಕ್ಟೇಟ್ ರೀತಿ ಆಡುತ್ತಿದ್ದೀಯ ಎಂದು ಹೇಳಿದ್ದಾರೆ. ಆಗ ನನಗೆ ಇದನ್ನೆಲ್ಲ ಹೇಳಬೇಡ, ನಾನು ಸರಿಯಾಗಿದ್ದೇನೆ. ನಾನು ಆಡುವುದೇ ಹೀಗೆ ಎಂದು ರಾಜಣ್ಣ ಹೇಳಿದ್ದಾರೆ. ಆಗ ಪ್ರಶಾಂತ್ ನಾನು ಒಬ್ಬ ಫ್ರೆಂಡ್ ಆಗಿ ನಿನಗೆ ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಫ್ರೆಂಡ್ ಆಗಿ ಈಗ ಸಲಹೆ ನೀಡುವುದಲ್ಲ, ನನ್ನ ವಿರುದ್ಧ ಮೂರ್ನಾಲ್ಕು ಜನ ಒಟ್ಟಿಗೆ ಜಗಳವಾಡುತ್ತಿದ್ದಾಗ ನೀನು ಎಲ್ಲಿ ಹೋಗಿದ್ದೆ? ಆ ಫ್ರೆಂಡ್ ಎಲ್ಲಿ ಹೋಗಿದ್ದ? ಎಂದು ಪ್ರಶ್ನಿಸಿದ್ದಾರೆ. ಈಗ ಬಂದು ನನ್ನನ್ನು ಕೇಳುವುದಲ್ಲ, ಎಲ್ಲರೂ ನನ್ನ ವಿರುದ್ಧ ಮಾತನಾಡುತ್ತಿರುವಾಗ ನೀನು ಎಲ್ಲಿ ಹೋಗಿದ್ದೆ? ನೀನು ಯಾವ ಸೀಮೆ ಫ್ರೆಂಡ್. ನನಗೆ ಹೇಳಲು ಬರಬೇಡ ಎಂದೆಲ್ಲ ರೂಪೇಶ್ ರಾಜಣ್ಣ ಕಿಡಿ ಕಾರಿದ್ದಾರೆ. ಇದನ್ನು ಓದಿ.. Kannada News: ಚಿಕ್ಕ ವಯಸ್ಸಿನಲ್ಲಿಯೇ ತೆಲುಗು ಚಿತ್ರರಂಗವನ್ನು ಶೇಕ್ ಮಾಡಿದ್ದ ಕನ್ನಡತಿ ಕೃತಿ ಶೆಟ್ಟಿ ಗೆ ಶಾಕ್ ಮೇಲೆ ಶಾಕ್. ಮತ್ತೊಂದು ಕಹಿ ಸುದ್ದಿ ಏನು ಗೊತ್ತೇ?

Comments are closed.