ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಪ್ರೇಕ್ಷಕರಿಗೆ ಸದ್ದಿಲ್ಲದೆ ಬಂತು ಶಾಕಿಂಗ್ ನ್ಯೂಸ್, ಇದ್ದಕ್ಕಿದ್ದ ಹಾಗೆ ಈಗ್ಯಾಕೆ ಮಾಡಿದ್ರು??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ಗಿಂತ ಹೆಚ್ಚಾಗಿ ಕಿರುತೆರೆ ಕ್ಷೇತ್ರ ದೊಡ್ಡದಾಗಿ ಬೆಳೆಯುತ್ತದೆ. ಸರಿಸಮಾನಾಗಿ ಕ್ವಾಲಿಟಿ ಧಾರವಾಹಿ ಹಾಗೂ ಮನರಂಜನಾತ್ಮಕ ಎನಿಸುವ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೂಡ ಪ್ರೇಕ್ಷಕರಿಗೆ ಪ್ರಸಾರವನ್ನು ಪ್ರಾರಂಭಿಸಿದೆ. ಕಿರುತೆರೆ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ ಎನ್ನುವ ಮಾತ್ರಕ್ಕೆ ಎಲ್ಲಾ ಕಾರ್ಯಕ್ರಮಗಳು ಕೂಡ ಯಶಸ್ವಿಯಾಗಿವೆ ಎಂದು ಅರ್ಥವಲ್ಲ. ಜನರು ಇಷ್ಟಪಡುವಂತಹ ಕಾರ್ಯಕ್ರಮಗಳು ದೀರ್ಘಕಾಲದವರೆಗೆ ಪ್ರಸಾರವನ್ನು ಕಾಣುತ್ತದೆ. ಒಂದು ವೇಳೆ ರೇಟಿಂಗ್ ಕಡಿಮೆಯಾದರೆ ಕೂಡಲೇ ಆ ಕಾರ್ಯಕ್ರಮವನ್ನು ನಿಲ್ಲಿಸುವ ಪ್ರಯತ್ನವನ್ನು ವಾಹಿನಿಯವರು ಮಾಡುತ್ತಾರೆ.

ಇಲ್ಲಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡವಾಹಿನಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಸಾರವನ್ನು ಪ್ರಾರಂಭಿಸಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಕುರಿತಂತೆ. ಈ ಕಾರ್ಯಕ್ರಮದಲ್ಲಿ ವಿಜಯರಾಘವೇಂದ್ರ ಮಯೂರಿ ಹಾಗೂ ಮೇಘನಾ ರಾಜ್ ರವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರೆ ಈ ಕಡೆ ನಿರೂಪಕರಾಗಿ ಅಕುಲ್ ಬಾಲಾಜಿ ಅವರು ಕಾಣಿಸಿಕೊಂಡಿದ್ದಾರೆ.

dancing champion | ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಪ್ರೇಕ್ಷಕರಿಗೆ ಸದ್ದಿಲ್ಲದೆ ಬಂತು ಶಾಕಿಂಗ್ ನ್ಯೂಸ್, ಇದ್ದಕ್ಕಿದ್ದ ಹಾಗೆ ಈಗ್ಯಾಕೆ ಮಾಡಿದ್ರು??
ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಪ್ರೇಕ್ಷಕರಿಗೆ ಸದ್ದಿಲ್ಲದೆ ಬಂತು ಶಾಕಿಂಗ್ ನ್ಯೂಸ್, ಇದ್ದಕ್ಕಿದ್ದ ಹಾಗೆ ಈಗ್ಯಾಕೆ ಮಾಡಿದ್ರು?? 3

ಇನ್ನು ಈ ರಿಯಾಲಿಟಿ ಶೋ ಕಾರ್ಯಕ್ರಮ ಎನ್ನುವುದು ಮೇಘನಾರಾಜ್ ಅವರ ಜೀವನದ ಮಹತ್ವದ ತಿರುವು ಆಗಿತ್ತು. ಯಾಕೆಂದರೆ ಚಿರು ಸರ್ಜಾ ರವರನ್ನು ಕಳೆದುಕೊಂಡ ನಂತರ ಭಾಗವಹಿಸಿದಂತಹ ಮೊದಲ ಕಾರ್ಯಕ್ರಮವಾಗಿತ್ತು. ಹೀಗಾಗಿ ಮೇಘನಾರಾಜ್ ರವರು ಇಲ್ಲಿ ಕೊಂಚ ಮಟ್ಟಿಗೆ ನೋಡಿಕೊಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಯಾಕೆಂದರೆ ಅವರು ಒಂದು ವೇಳೆ ಮೈಮರೆತು ಇಲ್ಲಿ ಯಾವುದೇ ನಿರ್ಧಾರವನ್ನು ಅಥವಾ ಬೇರೆ ರೀತಿಯಲ್ಲಿ ಕಾಣಿಸಿಕೊಂಡರೇ ಜನರು ತಪ್ಪು ತಿಳಿದುಕೊಳ್ಳುತ್ತಿದ್ದರು. ಆದರೆ ಜನರು ಮೇಘನರಾಜ್ ರವರ ವಿಚಾರದಲ್ಲಿ ಹೇಗೆ ಮಾಡಲು ಹೋಗಲಿಲ್ಲ. ಈ ಕಾರ್ಯಕ್ರಮಕ್ಕೆ ಅತಿಥಿ ತೀರ್ಪುಗಾರರಾಗಿ ಬಂದ ಮೊದಲ ವಾರದಲ್ಲಿ ಸಂಪೂರ್ಣ ಸ್ವಾಗತವನ್ನು ಕೋರಿ ಖಾಯಂ ತೀರ್ಪುಗಾರರಾಗಿರುವಂತೆ ಮಾಡಿದರು.

ಇದರ ವಿರುದ್ಧವಾಗಿ ಜೀ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮ ಪ್ರಾರಂಭವಾಗಿತ್ತಾದರೂ ಕೂಡ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಎದುರು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಕೂಡ ಮಂಕಾಗಿ ಹೋಯಿತು. ಇನ್ನು ಸೃಜನ್ ಲೋಕೇಶ್ ರವರೇ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ನಿರ್ಮಾಪಕರಾಗಿದ್ದರು. ಇಷ್ಟೊಂದು ಚೆನ್ನಾಗಿ ಪ್ರೇಕ್ಷಕರ ಮೆಚ್ಚುಗೆಗೆ ಒಳಗಾಗಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತನ್ನ ಪ್ರಸಾರವನ್ನು ನಿಲ್ಲಿಸಲಿದೆ ಎಂಬ ಬೇಸರದ ಸಂಗತಿ ಹೊರಬಿದ್ದಿದೆ.

ಇತ್ತೀಚೆಗೆ ನೀವು ಕನ್ನಡದ ಅತ್ಯಂತ ದೊಡ್ಡ ಕಿರುತೆರೆ ವಾಹಿನಿ ಯಾಗಿರುವ ಜೀ ಕನ್ನಡ ವಾಹಿನಿಯನ್ನು ಗಮನಿಸಿರಬಹುದು. ಹೌದು ಗೆಳೆಯರೇ ದೊಡ್ಡ ಬಜೆಟ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಿರೂಪಣೆಯಲ್ಲಿ ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಆದರೆ ನಿರೀಕ್ಷಿತ ಯಶಸ್ಸು ಹಾಗೂ ರೇಟಿಂಗ್ ಬರದ ಕಾರಣದಿಂದಾಗಿ ಕೇವಲ 20ನೇ ಸಂಚಿಕೆಗೆ ಈ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಒಂದು ಕಾರ್ಯಕ್ರಮದ ಬದಲು ಈಗಾಗಲೇ ಯಶಸ್ವಿಯಾಗಿರುವ ಡ್ರಾಮಾ ಜೂನಿಯರ್ಸ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳನ್ನು ಮತ್ತೆ ಪ್ರಾರಂಭಿಸಲಾಯಿತು.

dancing champion 2 | ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಪ್ರೇಕ್ಷಕರಿಗೆ ಸದ್ದಿಲ್ಲದೆ ಬಂತು ಶಾಕಿಂಗ್ ನ್ಯೂಸ್, ಇದ್ದಕ್ಕಿದ್ದ ಹಾಗೆ ಈಗ್ಯಾಕೆ ಮಾಡಿದ್ರು??
ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಪ್ರೇಕ್ಷಕರಿಗೆ ಸದ್ದಿಲ್ಲದೆ ಬಂತು ಶಾಕಿಂಗ್ ನ್ಯೂಸ್, ಇದ್ದಕ್ಕಿದ್ದ ಹಾಗೆ ಈಗ್ಯಾಕೆ ಮಾಡಿದ್ರು?? 4

ಅದರಲ್ಲೂ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ರವರನ್ನು ಕರೆತರಲಾಯಿತು. ಈ ಕಡೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಬಿರುದಾಂಕಿತ ಶಿವಣ್ಣನವರನ್ನು ತೀರ್ಪುಗಾರರನ್ನಾಗಿ ಕರೆತರಲಾಯಿತು. ಈಗಾಗಲೇ ಧಾರವಾಹಿ ಕ್ಷೇತ್ರದಲ್ಲಿ ಮುಂದಿದ್ದ ಜೀ ಕನ್ನಡ ವಾಹಿನಿ ಸ್ಟಾರ್ ತೀರ್ಪುಗಾರರನ್ನು ತನ್ನ ಕಾರ್ಯಕ್ರಮಗಳಿಗೆ ಕರೆತರುವ ಮೂಲಕ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಕಲರ್ಸ್ ಕನ್ನಡ ವಾಹಿನಿಯನ್ನು ಹಿಂದಿಕ್ಕಿತು.

ಹೀಗಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಿಂದಾಗಿ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ರೇಟಿಂಗ್ ಕೂಡ ಇತ್ತೀಚಿನ ದಿನಗಳಿಗೆ ಕಡಿಮೆ ಬರುವ ಕಾರಣದಿಂದಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮವನ್ನು ಈಗ ನಿಲ್ಲಿಸುವ ಯೋಚನೆಗೆ ಬಂದಿದ್ದಾರೆ. ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುತ್ತಿರುವುದು ಈಗ ಪ್ರೇಕ್ಷಕರ ಮನಸ್ಸಿಗೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.