ಬೈಕ್ ಮಿಸ್ ಮಾಡಿಕೊಂಡ ಅರವಿಂದ್, ಬಿಗ್ ಬಾಸ್ ಪಿನಾಲೆ ಗೆಲ್ಲುವುದು ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್ಬಾಸ್ ಕಾರ್ಯಕ್ರಮ ಮುಗಿದು ಹೋಗಲಿದೆ, ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದ್ದು ಯಾವ ಸ್ಪರ್ಧೆ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಂಡು ಈ ಬಾರಿ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ತಮ್ಮ ತಮ್ಮ ನೆಚ್ಚಿನ ಸ್ಪರ್ಧೆಯ ಕುರಿತು ಪ್ರತಿಯೊಂದು ಕಡೆಯೂ ಚರ್ಚೆಗಳನ್ನು ಆರಂಭಿಸಿದ್ದು ಕೇವಲ ತಮ್ಮಿಷ್ಟದ ಸ್ಪರ್ಧೆಯನ್ನು ಗೆಲ್ಲಿಸುವುದರಲ್ಲಿ ಮಾತ್ರ ನಿರತವಾಗಿರದೇ ಇನ್ನಿತರ ಸ್ಪರ್ಧಿಗಳು ಯಾಕೆ ಗೆಲ್ಲಬಾರದು ಎಂದು ಕೂಡ ಚರ್ಚೆ ನಡೆಸುತ್ತಿದ್ದಾರೆ.‌

ಇನ್ನು ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಯಿಂದ ಕಳೆದವಾರ ಎಲಿಮಿನೇಟ್ ಆಗಿದ್ದ ಚಕ್ರವರ್ತಿ ಚಂದ್ರಚುಡ್ ರವರು ಈ ವಾರ ಶನಿವಾರದ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಕಾಣಿಸಿಕೊಂಡಿದ್ದರು. ಚಕ್ರವರ್ತಿ ಚಂದ್ರಚುಡ್ ರವರನ್ನು ಕರೆಸಿ ಮನೆಯಿಂದ ಹೊರಹೋಗುವ ಸ್ಪರ್ಧಿಗೆ ನಡೆಸುವಂತೆ ಎಲ್ಲಾ ಕಾರ್ಯಕ್ರಮಗಳನ್ನು ಹಾಗೂ ಪ್ರಶ್ನೆಗಳನ್ನು ಕೇಳಿದ ಕಿಚ್ಚ ಸುದೀಪ್ ರವರು ಚಕ್ರವರ್ತಿ ಚಂದ್ರಚೂಡ್ ರವರನ್ನು ಅಂದುಕೊಂಡಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಯಾರು ಗೆಲ್ಲಬಹುದು ಎಂದು ಕೂಡ ಪ್ರಶ್ನೆ ಮಾಡಿದರು.

ಈ ಸಮಯದಲ್ಲಿ ಮಾತನಾಡಿದ ಚಕ್ರವರ್ತಿ ಚಂದ್ರಚುಡ್ ಅವರು ಬಿಗ್ ಬಾಸ್ ಕಿರೀಟವನ್ನು ಗೆಲ್ಲಲು ಪ್ರಶಾಂತ್ ಮೊದಲ ಇನಿಂಗ್ಸ್ನಲ್ಲಿ ಇದ್ದಂತೆ ಇಲ್ಲ ಅವರು ಕೇವಲ ಒಂದು ವರ್ಗದ ಜನರಿಗೆ ಮಾತ್ರ ಇಷ್ಟವಾಗುತ್ತಿದ್ದಾರೆ, ದಿವ್ಯ ಸುರೇಶ್ ರವರು ಅಮಾಯಕಿ ಅವರಿಗೆ ಅಗತ್ಯವಿದ್ದ ಬದಲಾವಣೆ ಈಗ ಬಂದಿದೆ ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ ಆದ್ದರಿಂದ ಆ ಬದಲಾವಣೆ ಏನು ಪ್ರಯೋಜನವನ್ನು ನೀಡಿರಲಿಲ್ಲ ಇನ್ನು ನಾನು ಮೊದಲ ಇನ್ನಿಂಗ್ಸ್ ನಲ್ಲಿ ಹೊರಬಂದಾಗ ಅರವಿಂದ ಗೆಲ್ಲುತ್ತಾರೆ ಎಂದುಕೊಂಡಿದ್ದೆ ಆದರೆ ಎರಡು ಇನ್ನಿಂಗ್ಸ್ ನಲ್ಲಿ ಮನೆಯಿಂದ ಹೊರಹೋದ ಮೇಲೆ ಅರವಿಂದ ಅವರು ಬೈಕ್ ಮಿಸ್ ಮಾಡಿಕೊಂಡಿದ್ದಾರೆ, ಆದ್ದರಿಂದ ಮಂಜು ಪಾವಗಡ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಇವರ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Comments are closed.