Kannada Astrology: ನೀವು ಹೆಚ್ಚು ಕಷ್ಟ ಪಡದೆ, ಆದಷ್ಟು ಬೇಗ ಕೋಟ್ಯಧಿಪತಿಯಾಗಬೇಕು ಎಂದರೆ, ಬೇರೆ ಏನು ಬೇಡ, ಈ ಚಿಕ್ಕ ಕೆಲಸ ಮಾಡಿ ಸಾಕು.
ಜೀವನದಲ್ಲಿ ಎಲ್ಲರೂ ಕಷ್ಟಪಡುವುದು ಹಣ ಸಂಪಾದನೆ ಮಾಡುವ ಸಲುವಾಗಿ, ಕೆಲವರು ಎಷ್ಟೇ ಕಷ್ಟಪಟ್ಟರು ಹೆಚ್ಚು ಹಣ ಸಂಪಾದನೆ ಮಾಡಲು ಆಗುವುದಿಲ್ಲ. ಆದರೆ ಇನ್ನೂ ಕೆಲವರು ಏನು ಕಷ್ಟಪಡೆದೆಯೇ ಹಣ ಅವರಿಗೆ ಹೆಚ್ಚಾಗಿ ಸಿಗುತ್ತಲೇ ಹೋಗುತ್ತದೆ. ಇದಕ್ಕೆ ಕಾರಣ ವಾಸ್ತು ಸಮಸ್ಯೆ ಕೂಡ ಇರಬಹುದು. ನಿಮ್ಮ ಹಣದ ಸಮಸ್ಯೆಗಳು ಕಡಿಮೆಯಾಗಿ, ಹೆಚ್ಚು ಕಷ್ಟಪಡದೆಯೇ ಹೆಚ್ಚು ಹಣ ನಿಮಗೆ ಸಿಗಬೇಕು ನೀವು ಕೋಟ್ಯಾಧಿಪತಿ ಆಗಬೇಕು ಎನ್ನುವುದಾದರೆ, ಇಂದು ನಾವು ತಿಳಿಸುವ ಕೆಲವು ಚಿಕ್ಕ ಕೆಲಸಗಳನ್ನು ಮಾಡಿ..
*ನಿಮ್ಮ ಮನೆಯಲ್ಲಿ ಹಣದ ವಿಷಯದಲ್ಲಿ ಯಾವುದೇ ಕೊರತೆ ಉಂಟಾಗಬಾರದು ಎನ್ನುವುದಾದರೆ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಮ್ಮ ಮನೆಯ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ಇರುವುದರಿಂದ ತುಳಸಿ ಗಿಡಕ್ಕೆ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.
*ಪ್ರತಿದಿನ ಬೆಳಗ್ಗೆ ಎದ್ದ ನಂತರ, ನಿಮ್ಮ ಅಂಗೈಯನ್ನು ನೋಡಿ, ನಂತರ ಕೆಳಗೆ ಕಾಲಿಡುವ ಮೊದಲು ಭೂಮಿತಾಯಿಗೆ ನಮಸ್ಕರಿಸಿ, ಹೀಗೆ ಮಾಡುವುದರಿಂದ, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿರುತ್ತಾರೆ, ಜೊತೆಗೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ..
![Kannada Astrology: ನೀವು ಹೆಚ್ಚು ಕಷ್ಟ ಪಡದೆ, ಆದಷ್ಟು ಬೇಗ ಕೋಟ್ಯಧಿಪತಿಯಾಗಬೇಕು ಎಂದರೆ, ಬೇರೆ ಏನು ಬೇಡ, ಈ ಚಿಕ್ಕ ಕೆಲಸ ಮಾಡಿ ಸಾಕು. 1 lakshmi krupe 1 | Kannada Astrology: ನೀವು ಹೆಚ್ಚು ಕಷ್ಟ ಪಡದೆ, ಆದಷ್ಟು ಬೇಗ ಕೋಟ್ಯಧಿಪತಿಯಾಗಬೇಕು ಎಂದರೆ, ಬೇರೆ ಏನು ಬೇಡ, ಈ ಚಿಕ್ಕ ಕೆಲಸ ಮಾಡಿ ಸಾಕು.](http://kankaionline.com/wp-content/uploads/2022/11/lakshmi-krupe-1-1024x536.jpg)
*ನೀವು ಮಾಡಬೇಕಿರುವ ಕೆಲಸಗಳು ಪೂರ್ತಿಯಾಗದೆ, ಅರ್ಧಕ್ಕೆ ನಿಂತಿದ್ದರೆ, ನಿಮ್ಮ ಇಷ್ಟಾರ್ಥಗಳು ಇನ್ನು ಈಡೇರದೆ ಇದ್ದರೆ, ಮಂಗಳವಾರ ದಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸುಂದರಕಾಂಡ ಪಠಣೆ ಮಾಡಿ. ಆಂಜನೇಯ ಸ್ವಾಮಿಗೆ ಲಡ್ಡು ಅರ್ಪಿಸಿ. 7 ಸಾರಿ ಪ್ರತಿ ಮಂಗಳವಾರ ಹೀಗೆ ಮಾಡುವುದರಿಂದ, ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ.
*ನಿಮ್ಮ ಮನೆಯಲ್ಲಿ ನೆಮ್ಮದಿ ಸಂತೋಷ ಯಾವಾಗಲೂ ಇರಬೇಕು, ಯಾವುದೇ ಕೊರತೆ ಇರಬಾರದು ಎಂದು ನೀವು ಇಷ್ಟಪಟ್ಟರೆ, ಶುಕ್ರವಾರದ ದಿನ ಉಪವಾಸ ಮಾಡಿ, ಲಕ್ಷ್ಮೀದೇವಿಗೆ ಪೂಜೆ ಮಾಡುವಾಗ, ಕನಕಾಧಾರ ಸ್ತೋತ್ರ ಪಟನೆ ಮಾಡಿ. ಇದರಿಂದ ಲಕ್ಷ್ಮೀದೇವಿ ಸಂತುಷ್ಟರಾಗುತ್ತಾರೆ ಜೊತೆಗೆ, ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ.
*ನಿಮ್ಮ ಮನೆಯಲ್ಲಿ ಕಡಿಮೆ ಸಮಯದಲ್ಲಿ ಹಣ ಗಳಿಸಬೇಕು ಎಂದು ನೀವು ಬಯಸಿದರೆ, ಮನೆಯ ಒಳಗೆ ಕುಳಿತಿರುವ ಲಕ್ಷ್ಮೀದೇವಿಯ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇರಿಸಿ. ಜೊತೆಗೆ ಸಿಪ್ಪೆ ಎಲೆಯ ಮೇಲೆ ಸ್ವಸ್ತಿಕ್ ಚಿಹ್ನೆ ಮಾಡಿ, ಇಡಿ. ಇದರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ. ನಿಮ್ಮ ಮನೆಯಲ್ಲಿ ಐಶ್ವರ್ಯ ಇರುತ್ತದೆ.
*ನೀವು ಮಾಡುವ ಎಲ್ಲಾ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು ಎಂದು ನೀವು ಬಯಸಿದರೆ, ಅರಳಿ ಮರಕ್ಕೆ ಪೂಜೆ ಮಾಡಿ, ಶನಿವಾರದ ದಿನ ಬೆಳಗ್ಗೆ ನೀರನ್ನು ಅರ್ಪಿಸಿ, ಸಂಜೆ ಎಳ್ಳೆಣ್ಣೆಯ ದೀಪ ಹಚ್ಚಿ. ಇದರಿಂದ ನೀವು ಮಾಡುವ ಎಲ್ಲಾ ಕೆಲಸದ ಮೇಲೆ ಲಕ್ಷ್ಮೀದೇವಿಯ ಕೃಪೆ ಇರುತ್ತದೆ. ಜೊತೆಗೆ ಯಶಸ್ಸು ಸಿಗುತ್ತದೆ.
Comments are closed.