Kannada Astrology: ಯಾರಿಗೂ ಹೇಳದಂತೆ ಬಿಲ್ಪತ್ರೆ ಎಲೆಯನ್ನು ಮನೆಯ ಆ ಜಾಗದಲ್ಲಿ ಒಂದು ವಾರ ಇಡೀ ಸಾಕು, ಲಕ್ಷ್ಮಿ ದೇವಿ ಮನೆಗೆ ಬರುತ್ತಲೇ, ಯಶಸ್ಸು ಖಂಡಿತಾ.

Kannada Astrology: ಧಾರ್ಮಿಕ ನಂಬಿಕೆಗಳ ಪ್ರಕಾರ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮಹಾದೇವ ಶಿವ ಬೇಗನೆ ಪ್ರಸನ್ನನಾಗುತ್ತಾನೆ ಎಂದೇ ಹೇಳಲಾಗುತ್ತದೆ. ಶಿವನಿಗೆ ತನ್ನ ಭಕ್ತರೆಂದರೆ ಅಪಾರ ಪ್ರೀತಿ. ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಶಿವ ಎಲ್ಲ ದೇವರಿಗಿಂತ ಮುಂದು ಎಂದೇ ನಂಬಲಾಗಿದೆ. ಭಕ್ತರಿಗಾಗಿ ಆತ ಯಾವಾಗಲೂ ಪ್ರಸನ್ನನಾಗುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಅದರಲ್ಲೂ ಶಿವನಿಗೆ ಬಿಲ್ವಪತ್ರೆ ಎಂದರೆ ಅಪಾರ ಪ್ರೀತಿ. ಬಿಲ್ವಪತ್ರೆಯನ್ನು ಅತ್ಯಂತ ಭಕ್ತಿಯಿಂದ ಅವನಿಗೆ ಅರ್ಪಿಸಿದರೆ ಸಾಕು ಆತ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದೇ ನಂಬಲಾಗಿದೆ. ಅದರಲ್ಲೂ ಸೋಮವಾರ ಮಡಿ ಮೈಲಿಗೆಯಿಂದ ಸ್ನಾನ ಮಾಡಿ ಶಿವನ ಅಭಿಷೇಕಕ್ಕೆ ಜಲದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವ ಸಂತುಷ್ಟನಾಗುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.

ಮಹಾದೇವ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಮನುಷ್ಯರಿಗೆ ಸಾಕಷ್ಟು ಲಾಭಗಳನ್ನು ತಂದು ಕೊಡುತ್ತದೆ. ಬಿಲ್ವಪತ್ರೆಯನ್ನು ಹೇಗೆ ಬಳಸಬೇಕು? ಎಲ್ಲಿ ಬಳಸಬೇಕು? ಯಾವಾಗ ಬಳಸಬೇಕು? ಎನ್ನುವ ವಿಷಯಗಳನ್ನು ತಿಳಿದುಕೊಂಡರೆ ಸಾಕಷ್ಟು ಅದೃಷ್ಟಗಳನ್ನು ಆ ವ್ಯಕ್ತಿ ಪಡೆಯುತ್ತಾನೆ. ಅಲ್ಲದೆ ಲಕ್ಷ್ಮಿಯು ಆ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಬಿಲ್ವಪತ್ರ ಸಸಿಯನ್ನು ಮನೆಯಲ್ಲಿ ನೆಡುವುದರಿಂದಲೂ ಕೂಡ ಸಾಕಷ್ಟು ಪ್ರಯೋಜನಗಳಿವೆ. ಬಿಲ್ವಪತ್ರೆಯನ್ನು ಮನೆಯ ಮುಂದೆ ನೆಡುವುದರಿಂದಾಗಿ ಬಡತನ ದೂರವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಬಿಲ್ವಪತ್ರೆಯಿಂದಾಗಿ ಮನೆಯಲ್ಲಿರುವ ದಾರಿದ್ರ, ಬಡತನ ದೂರವಾಗಿ ಮನೆಯಲ್ಲಿ ಹಣಕಾಸಿನ ಸೌಲಭ್ಯ ಹೆಚ್ಚಾಗುತ್ತದೆ. ಬಿಲ್ವಪತ್ರೆ ಇರುವ ಮನೆಗಳಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಇದರ ಜೊತೆಗೆ ಮನೆಯಲ್ಲಿರುವ ಎಲ್ಲ ದುಷ್ಟ ಶಕ್ತಿಗಳು ದೂರವಾಗಿ ಮನೆಗೆ ಯಾವ ಕೆಟ್ಟ ಪರಿಣಾಮಗಳು ಬೀರುವುದಿಲ್ಲ. ಇದನ್ನು ಓದಿ.. Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ?

kannada astrology lakshmidevi bilvapatre | Kannada Astrology: ಯಾರಿಗೂ ಹೇಳದಂತೆ ಬಿಲ್ಪತ್ರೆ ಎಲೆಯನ್ನು ಮನೆಯ ಆ ಜಾಗದಲ್ಲಿ ಒಂದು ವಾರ ಇಡೀ ಸಾಕು, ಲಕ್ಷ್ಮಿ ದೇವಿ ಮನೆಗೆ ಬರುತ್ತಲೇ, ಯಶಸ್ಸು ಖಂಡಿತಾ.
Kannada Astrology: ಯಾರಿಗೂ ಹೇಳದಂತೆ ಬಿಲ್ಪತ್ರೆ ಎಲೆಯನ್ನು ಮನೆಯ ಆ ಜಾಗದಲ್ಲಿ ಒಂದು ವಾರ ಇಡೀ ಸಾಕು, ಲಕ್ಷ್ಮಿ ದೇವಿ ಮನೆಗೆ ಬರುತ್ತಲೇ, ಯಶಸ್ಸು ಖಂಡಿತಾ. 2

ಮನೆ ಯಾವಾಗಲೂ ಶಾಂತಿಯುತ ವಾತಾವರಣದಿಂದ ಕೂಡಿರುವುದಲ್ಲದೆ, ಮನೆಯಲ್ಲಿ ವಾಸಿಸುವ ಎಲ್ಲ ವ್ಯಕ್ತಿಗಳಿಗೂ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ನಂಬಲಾಗಿದೆ. ಮನೆಯ ಮುಂದೆ ಬಿಲ್ವಪತ್ರೆಯನ್ನು ನೆಡುವುದರಿಂದ ವ್ಯಕ್ತಿಗೆ ಏನಾದರೂ ಜಾತಕ ದೋಷವಿದ್ದರೆ ಆ ದೋಷದ ನಿವಾರಣೆ ಸುಲಭವಾಗಿ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವೇ ಹೇಳುತ್ತದೆ. ಹೀಗಾಗಿ ಜಾತಕದಲ್ಲಿನ ತೊಂದರೆ ಅಥವಾ ದೋಷದ ಪರಿಹಾರಕ್ಕಾಗಿ ಬಿಲ್ವಪತ್ರೆಯನ್ನು ನೆಡುವುದು ಒಳ್ಳೆಯದು. ಇದರ ಜೊತೆಗೆ ಬಿಲ್ವಪತ್ರೆಯ ವಿವಿಧ ಭಾಗಗಳಲ್ಲಿ ಎಲೆ, ಕಾಂಡ, ಬೇರು ಇತ್ಯಾದಿ ಜಾಗಗಳಲ್ಲಿ ವಿವಿಧ ದೇವಾನುದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಲಕ್ಷ್ಮಿ ಪ್ರಸನ್ನಗೊಂಡು ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಮಹಾದೇವ ಶಿವನ ಅನುಗ್ರಹ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ. ಇದನ್ನು ಓದಿ.. Kannada Astrology: ಬೇರೆ ಏನು ಬೇಡ, ಕನ್ನಡಿಯಲ್ಲಿ ನಿಮ್ಮನ್ನು ನೀವು ಹೀಗೆ ನೋಡಿಕೊಂಡರೆ ಸಾಕು, ಶ್ರೀಮಂರಾಗುವುದನ್ನು ಬ್ರಹ್ಮ ಬಂದರು ತಡೆಯಲು ಆಗಲ್ಲ.

Comments are closed.