Kannada News: ದಿಡೀರ್ ಎಂದು ಸಾಂಪ್ರದಾಯಿಕ ವೇಷ ಧರಿಸಿ, ಅಮಿರ್ ಖಾನ್ ಪೂಜೆ ಮಾಡಲು ಕಾರಣವೇನು ಗೊತ್ತೆ?? ಕೊನೆಗೂ ಸಿಕ್ತು ನೋಡಿ ಕಾರಣ.

Kannada News: ಬಾಲಿವುಡ್ ನಟ ಅಮೀರ್ ಖಾನ್ (Amir Khan) ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ದೊಡ್ಡ ಹೆಸರು ಮಾಡಿದವರು. ಸಾಕಷ್ಟು ಸೂಪರ್ ಹಿಟ್ ಚಲನಚಿತ್ರಗಳನ್ನು ಅವರು ನೀಡಿದ್ದಾರೆ. ಅವರಿಗೆ ಅವರದೇ ಆದ ದೊಡ್ಡ ಅಭಿಮಾನಿ ಬಳಗವಿದೆ.ಬ್ಆದರೆ ಹಿಂದೂ ಧರ್ಮದ ಬಗ್ಗೆ, ಜನರ ಬಗ್ಗೆ ಅವರು ನೀಡಿದ್ದ ಹೇಳಿಕೆ ಒಂದು ಅವರ ಸಿನಿ ಜೀವನವನ್ನೇ ಮುಳುಗಿಸಿ ಬಿಟ್ಟಿತ್ತು. ಅದೊಂದು ಹೇಳಿಕೆ ಅವರ ಲಾಲ್ ಸಿಂಗ ಚಡ್ಡ ಚಿತ್ರಕ್ಕೂ ದೊಡ್ಡ ಪೆಟ್ಟು ನೀಡಿತ್ತು. ಅದಾದ ನಂತರ ಅಮೀರ್ ಖಾನ್ ಸೈಲೆಂಟ್ ಆಗಿದ್ದರು. ಈಗ ಮತ್ತೆ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಹೊಸ ಟ್ರಿಕ್ ಉಪಯೋಗಿಸಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಅಮೀರ್ ಖಾನ್ ಇದೀಗ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ನಟ ಅಮೀರ್ ಖಾನ್ 2015ರಲ್ಲಿ ಹಿಂದೂ ಧರ್ಮದಲ್ಲಿ ಅಸಹಿಷ್ಣುತೆ ಇದೆ, ಹೀಗಾಗಿ ಇಲ್ಲಿ ಇರಲಾಗದೆ ನನ್ನ ಹೆಂಡತಿ ದೇಶ ಬಿಡುತ್ತಿದ್ದಾಳೆ ಎಂಬ ಹೇಳಿಕೆ ಒಂದನ್ನು ನೀಡಿದ್ದರು. ಈ ಹೇಳಿಕೆ ನೀಡಿದ ಏಳು ವರ್ಷಗಳ ನಂತರ ಅಂದರೆ 2022 ರಲ್ಲಿ ಈ ಕುರಿತಾಗಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಮೀರ್ ಖಾನ್ ಈ ಹೇಳಿಕೆಯ ವಿರುದ್ಧ ಕಿಡಿಕಾರಿದ್ದರು. ಇದರ ಪರಿಣಾಮವಾಗಿ ಅವರ ಚಿತ್ರ ಮಕಾಡೆ ಮಲಗಬೇಕಾಯಿತು. ಆಸ್ಕರ್ ವಿಜೇತ ಚಿತ್ರ ಒಂದನ್ನು ರೀಮೇಕ್ ಮಾಡಿ ಲಾಲ್ ಸಿಂಗ ಚಡ್ಡ (Lal Singh Chaddha) ಹೆಸರಿನಲ್ಲಿ ಅಮೀರ್ ಖಾನ್ ತಯಾರಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಲೂಟಿ ಮಾಡುತ್ತದೆ ಎಂದು ಸಹ ಅಂದಾಜಿಸಲಾಗಿತ್ತು. ಸಾಕಷ್ಟು ನಿರೀಕ್ಷೆ ಸೃಷ್ಟಿಸಿತ್ತು. ಆದರೆ ಅದೊಂದು ಹೇಳಿಕೆ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿಬಿಟ್ಟಿತು. ಅಮೀರ್ ಖಾನ್ ಅವರನ್ನು ಬಾಲಿವುಡ್ ನಿಂದ ಬಾಯ್ ಕಾಟ್ ಮಾಡಬೇಕು ಎನ್ನುವ ಕೂಗುಗಳು ಕೇಳಿಬಂದವು. ಇದನ್ನು ಓದಿ..Biggboss Kannada: ಮನೆಯನ್ನೇ ಗಡ ಗಡ ನಡುಗುವಂತೆ ಮಾಡಿದ್ದ ಅಮೂಲ್ಯ ರವರ ಕಣ್ಣಲ್ಲಿ ನೀರು ಹಾಕಿಸಿದ ರಾಕೇಶ್ ಅಡಿಗ. ಏನು ಮಾಡಿದ್ದಾರೆ ಗೊತ್ತೆ?

kannada news aamir khan pooja | Kannada News: ದಿಡೀರ್ ಎಂದು ಸಾಂಪ್ರದಾಯಿಕ ವೇಷ ಧರಿಸಿ, ಅಮಿರ್ ಖಾನ್ ಪೂಜೆ ಮಾಡಲು ಕಾರಣವೇನು ಗೊತ್ತೆ?? ಕೊನೆಗೂ ಸಿಕ್ತು ನೋಡಿ ಕಾರಣ.
Kannada News: ದಿಡೀರ್ ಎಂದು ಸಾಂಪ್ರದಾಯಿಕ ವೇಷ ಧರಿಸಿ, ಅಮಿರ್ ಖಾನ್ ಪೂಜೆ ಮಾಡಲು ಕಾರಣವೇನು ಗೊತ್ತೆ?? ಕೊನೆಗೂ ಸಿಕ್ತು ನೋಡಿ ಕಾರಣ. 2

ದೊಡ್ಡ ಮಟ್ಟದ ಗಳಿಕೆ ಕಾಣುತ್ತದೆ ಎಂದು ಅಂದಾಜಿಸಲಾಗಿದ್ದ ಚಿತ್ರವು ಸೋತು ಸುಣ್ಣವಾಗಿತ್ತು. ಅಮೀರ್ ಖಾನ್ ಕ್ಷಮೆ ಕೇಳಿದರು ಸಹ ಪ್ರೇಕ್ಷಕ ಮಾತ್ರ ಚಿತ್ರ ನೋಡುವ ಮನಸ್ಸು ಮಾಡಲಿಲ್ಲ. ಆನಂತರ ಸಂಪೂರ್ಣ ಸೈಲೆಂಟ್ ಆಗಿದ್ದ ಅವರು ಯಾವುದೇ ಚಿತ್ರದ ತಯಾರಿಯನ್ನು ಮಾಡಲಿಲ್ಲ, ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಲ್ಲ. ಇದೀಗ ಅವರು ನಿರ್ಮಾಣ ಸಂಸ್ಥೆ ಒಂದನ್ನು ಶುರು ಮಾಡುತ್ತಿದ್ದಾರೆ. ನಿರ್ಮಾಪಕರಾಗಿಯೂ ಸದ್ದು ಮಾಡುವ ಲೆಕ್ಕಾಚಾರ ಮಾಡಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳುವ ತಂತ್ರ ರೂಪಿಸಿದ್ದಾರೆ. ಇತ್ತೀಚಿಗಷ್ಟೇ ಅವರ ನಿರ್ಮಾಣ ಸಂಸ್ಥೆಯ ಮೊದಲ ದಿನದ ಪೂಜೆ ನೆರವೇರಿದೆ. ಪೂಜೆಯನ್ನು ಹಿಂದೂ ಸಂಪ್ರದಾಯದಂತೆ ಅವರು ನೆರವೇರಿಸಿದ್ದಾರೆ. ಕಳಶಕ್ಕೆ ಪೂಜೆ ಮಾಡಿ ಆರತಿ ಬೆಳಗುವ ಮೂಲಕ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಹಿಂದು ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Lakshana: ಲಕ್ಷಣದಲ್ಲಿ ಭರ್ಜರಿ ಟ್ವಿಸ್ಟ್: ಇನ್ನೇನು ಡೆವಿಲ್ ಸಿಕ್ಕಿಬಿದ್ದಳು ಎನ್ನುವಷ್ಟರಲ್ಲಿ ಬಚಾವ್ ಆಗಿದ್ದು ಹೇಗೆ ಗೊತ್ತೇ??

Comments are closed.