Kannada News: ಎಂಗೇಜ್ಮೆಂಟ್ ನಲ್ಲಿ ಕರುನಾಡಿನ ಮಗ ಅಭಿಷೇಕ್, ಅವೀವಾ ರವರಿಗೆ ಕೊಟ್ಟ ಉಂಗುರದ ಬೆಲೆ ಕೇಳಿದರೆ, ಕರ್ನಾಟಕನೇ ಶೇಕ್ ಆಗುತ್ತೆ.

Kannada News: ನಟ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಸಮಾರಂಭ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಫ್ಯಾಶನ್ ಡಿಸೈನರ್ ಆಗಿರುವ ಅವಿವ ಎಂಬುವವರೊಂದಿಗೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುಮಲತಾ ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭವನ್ನು ನೆನ್ನೆ ಬೆಂಗಳೂರಿನಲ್ಲಿ ವೈಭವದಿಂದ ನಡೆಸಿದ್ದಾರೆ. ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ನ ದೊಡ್ಡ ತಾರಾಗಣವೇ ಆಗಮಿಸಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ರಾಧಿಕಾ ಪಂಡಿತ್ ಸೇರಿದಂತೆ ಹಲವಾರು ನಟ ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಅಭಿಷೇಕ್ ಮತ್ತು ಅವಿವ ಉಂಗುರ ತೋರಿಸಿದ್ದಾರೆ. ಇನ್ನು ಅಭಿಷೇಕ್ ಅವರು ಅವಿವಾ ಅವರಿಗೆ ತೊಡಿಸಿರುವ ಉಂಗುರದ ಬೆಲೆ ತಲೆ ತಿರುಗುವಂತಿದೆ. ಬಲು ದುಬಾರಿಯ ಉಂಗುರವನ್ನು ನಿಶ್ಚಿತಾರ್ಥದಲ್ಲಿ ಅಭಿಷೇಕ್ ಅವಿವ ಅವರಿಗೆ ತೊಡಿಸಿದ್ದಾರೆ.

ಅಭಿಷೇಕ್ ಮತ್ತು ಅವಿವ ಅವರು ಪ್ರೀತಿಸಿ ಮದುವೆಯಾಗಲು ಹೊರಟಿದ್ದಾರೆ. ಐದಾರು ವರ್ಷಗಳಿಂದಲೂ ಇವರಿಬ್ಬರಿಗೂ ಪರಿಚಯವಿದೆ. ಅಭಿಷೇಕ್ ಅವರಿಗೆ ಅವಿವಾ ಪರಿಚಯವಾಗಿದ್ದು ವಿದೇಶದಲ್ಲಿ. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರು ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ಅವರ ಒಪ್ಪಿಗೆಯ ಮೇರೆಗೆ ಮದುವೆಯಾಗಲು ನಿಶ್ಚಯಿಸಲಾಗಿದೆ. ನೆನ್ನೆ ಈ ಜೋಡಿ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದೆ. ಅಭಿಷೇಕ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಹರಿದಾಡಿತ್ತು. ಆದರೆ ಇದರ ಬಗ್ಗೆ ಈ ಮೊದಲು ಸುಮಲತಾ ಅವರಾಗಲಿ ಅಭಿಷೇಕ್ ಅವರಾಗಲಿ ಬಾಯಿ ಬಿಚ್ಚಿರಲಿಲ್ಲ. ಇದೆಲ್ಲ ಕೇವಲ ವದಂತಿ ಅಷ್ಟೇ ಎಂದೇ ಹೇಳಿಕೊಂಡು ಬಂದಿದ್ದರು. ಅಭಿಷೇಕ್ ಅವರನ್ನು ತಮ್ಮ ಮದುವೆಯ ವಿಷಯವಾಗಿ ಮಾಧ್ಯಮದವರು ಪ್ರಶ್ನಿಸಿದಾಗ, ಹಾಗೇನೂ ಇಲ್ಲ ಇದ್ದರೆ ನಾವೇ ಹೇಳುತ್ತೇವೆ. ಸದ್ಯಕಂತು ಅದರ ಯೋಚನೆ ಇಲ್ಲ ಎಂದೇ ಹೇಳಿದರು. ಸುಮಲತಾ ಅವರು ಸಹ ಈ ವಿಷಯವನ್ನು ತಳ್ಳಿ ಹಾಕಿದ್ದರು. ಇದೆಲ್ಲ ಸುಳ್ಳು ಎಂಬಂತೆ ಮಾತನಾಡಿದರು. ಇದನ್ನು ಓದಿ..Lakshana: ಲಕ್ಷಣದಲ್ಲಿ ಭರ್ಜರಿ ಟ್ವಿಸ್ಟ್: ಇನ್ನೇನು ಡೆವಿಲ್ ಸಿಕ್ಕಿಬಿದ್ದಳು ಎನ್ನುವಷ್ಟರಲ್ಲಿ ಬಚಾವ್ ಆಗಿದ್ದು ಹೇಗೆ ಗೊತ್ತೇ??

kannada news abhishek aviva 1 | Kannada News: ಎಂಗೇಜ್ಮೆಂಟ್ ನಲ್ಲಿ ಕರುನಾಡಿನ ಮಗ ಅಭಿಷೇಕ್, ಅವೀವಾ ರವರಿಗೆ ಕೊಟ್ಟ ಉಂಗುರದ ಬೆಲೆ ಕೇಳಿದರೆ, ಕರ್ನಾಟಕನೇ ಶೇಕ್ ಆಗುತ್ತೆ.
Kannada News: ಎಂಗೇಜ್ಮೆಂಟ್ ನಲ್ಲಿ ಕರುನಾಡಿನ ಮಗ ಅಭಿಷೇಕ್, ಅವೀವಾ ರವರಿಗೆ ಕೊಟ್ಟ ಉಂಗುರದ ಬೆಲೆ ಕೇಳಿದರೆ, ಕರ್ನಾಟಕನೇ ಶೇಕ್ ಆಗುತ್ತೆ. 2

ಆದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಇತ್ಯಾದಿ ವಿಷಯಗಳು ಬಂದಾಗ ಅಷ್ಟು ಸುಲಭವಾಗಿ ಸತ್ಯವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಎಲ್ಲರಿಗೂ ಅಭಿಷೇಕ್ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಖಚಿತವಾಗಿತ್ತು. ಅದರ ಬೆನ್ನಲ್ಲೇ ನೆನ್ನೆಯಷ್ಟೇ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ಪ್ರೀತಿಸುವ ಹುಡುಗಿಯನ್ನೇ ಅವರು ಮದುವೆಯಾಗಲು ಹೊರಟಿದ್ದಾರೆ. ಅವಿವಾ ಅವರಿಗೆ ವಿಶೇಷವಾಗಿ ತಯಾರಿಸಲಾದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಶೇಷವಾದ ಉಂಗುರವನ್ನು ಪುಣೆಯಲ್ಲಿ ತಯಾರಿಸಲಾಗಿದೆಯಂತೆ. ಈ ವಜ್ರದ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ! ಹೌದು, ಇಷ್ಟು ದೊಡ್ಡ ಮೊತ್ತದ ಉಂಗುರವನ್ನು ತೊಡಿಸುವ ಮೂಲಕ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಈ ಜೋಡಿ ಮುಂದಿನ ವರ್ಷ ಜೂನ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ.. Kannada News: ದಿಡೀರ್ ಎಂದು ಸಾಂಪ್ರದಾಯಿಕ ವೇಷ ಧರಿಸಿ, ಅಮಿರ್ ಖಾನ್ ಪೂಜೆ ಮಾಡಲು ಕಾರಣವೇನು ಗೊತ್ತೆ?? ಕೊನೆಗೂ ಸಿಕ್ತು ನೋಡಿ ಕಾರಣ.

Comments are closed.