Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ??

Kannada News: ಚಿತ್ರರಂಗದಲ್ಲಿ ನಟರಾಗಿ, ತಂತ್ರಜ್ಞರಾಗಿ ಗುರುತಿಸಿಕೊಂಡ ಅದೆಷ್ಟೋ ಜನರ ಮಕ್ಕಳು ಇದೀಗ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ, ಈ ಮೊದಲು ಸಹ ಮಾಡಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಕಲಾವಿದರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗದಲ್ಲಿ ಮುಂದುವರಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅವರಲ್ಲಿ ಬಹುತೇಕ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಕೆಲವರು ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದ ಸುದ್ದಿ ಆದರೆ ಇನ್ನು ಕೆಲವರು ಮೊದಲ ಸಿನಿಮಾಗಳಲ್ಲಿಯೇ ಸೋತು ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದೀಗ ನಟ ನೆನಪಿರಲಿ ಪ್ರೇಮ್ (Nenapirali Prem) ಅವರ ಪುತ್ರಿ ಅಮೃತ ಪ್ರೇಮ್ (Amrutha Prem) ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ತಂದೆಯಂತೆ ನಿರೀಕ್ಷೆ ಹುಟ್ಟಿಸಿರುವ ಅಮೃತ ಅವರು ಸುದ್ದಿಗೋಷ್ಠಿಯಲ್ಲಿ ಆಡಿರುವ ಮಾತುಗಳು ಸದ್ದು ಮಾಡುತ್ತಿವೆ.

ನೆನಪಿರಲಿ ಪ್ರೇಮ್ ಅವರು ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡುವ ಮೂಲಕ ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಕಿರುತೆರೆಯಲ್ಲೂ ಅವರು ಸಾಕಷ್ಟು ಬಿಸಿಯಾಗಿದ್ದಾರೆ. ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ಪುತ್ರಿ ಅಮೃತ ಅವರನ್ನು ಇದೀಗ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅಮೃತ ಇನ್ನೂ ಕೊನೆಯ ವರ್ಷದ ಪದವಿ ಓದುತ್ತಿದ್ದು ನೋಡಲು ಸಾಕಷ್ಟು ಸುಂದರವಾಗಿದ್ದಾರೆ. ಹಾಗೆಯೇ ಅವರ ಮಾತುಗಳನ್ನು ಕೇಳಿದರೆ ಮುಂದೊಂದು ದಿನ ಇವರು ಒಳ್ಳೆಯ ನಟಿಯಾಗಬಲ್ಲರು ಎಂದು ನಿರೀಕ್ಷೆ ಹುಟ್ಟಿಸುತ್ತಾರೆ. ಡಾಲಿ ಧನಂಜಯ (Daali Dhananjay) ನಿರ್ಮಾಣದ ಡಾಲಿ ಪಿಕ್ಚರ್ಸ್ (Daali Pictures) ಅಡಿಯಲ್ಲಿ ಬರುತ್ತಿರುವ ಟಗರು ಪಲ್ಯ ಚಿತ್ರದಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ಪ್ರವೇಶಿಸುವ ಮೊದಲು ಮಾಧ್ಯಮದವರ ಜೊತೆಗೆ ಮಾತನಾಡಿರುವ ಇಡೀ ಚಿತ್ರತಂಡ ಚಿತ್ರದ ಬಗ್ಗೆ ಹಾಗೂ ಅಮೃತವರನ್ನು ನಾಯಕಿಯಾಗಿ ಪರಿಚಯಿಸುತ್ತಿರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಇದನ್ನು ಓದಿ..Kannada News: ಕೆಜಿಎಫ್ ತಾತ ಸೀರಿಯಸ್ ಸೀರಿಯಸ್ ಅನ್ನುತ್ತಿದ್ದಾರೆ, ಆದರೆ ನಿಜಕ್ಕೂ ಕೃಷ್ಣ ರಾವ್ ರವರಿಗೆ ಏನಾಗಿದೆ ಗೊತ್ತೇ??

kannada news amrutha prem | Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ??
Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ?? 2

ಮಾಧ್ಯಮದವರ ಜೊತೆಗೆ ಮಾತನಾಡಿರುವ ಅಮೃತ ಪ್ರೇಮ್ “ಆತ್ಮವಿಶ್ವಾಸ ಎನ್ನುವುದು ಒಂದು ನಮ್ಮ ಜೊತೆಗಿದ್ದರೆ ನಾವು ಯಾವ ಕೆಲಸವನ್ನು ಬೇಕಾದರೂ ಯಶಸ್ವಿಯಾಗಿ ಮಾಡಬಲ್ಲೆವು. ನನಗೆ ನನ್ನ ತಂದೆ ತಾಯಿ ಮೊದಲ ಗುರುವಾಗಿದ್ದಾರೆ. ಅವರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ನಟನ ಕ್ಷೇತ್ರಕ್ಕೆ ಬರುವ ಯಾವ ಆಲೋಚನೆಯೂ ಇರಲಿಲ್ಲ. ಆದರೆ ವಿಧಿ ನನ್ನನ್ನು ಇಲ್ಲಿಗೆ ತಂದು ಸೇರಿಸಿದೆ. ಜೊತೆಗೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಮುಖ್ಯ ಕಾರಣ ಈ ಚಿತ್ರದ ಕಥೆ. ಚಿತ್ರದ ಕಥೆ ನನ್ನನ್ನು ಸಾಕಷ್ಟು ಆಕರ್ಷಿಸಿತ್ತು. ಕಥೆ ಇಷ್ಟವಾದ ನಂತರವೇ ನಾಯಕಿಯಾಗಲು ಒಪ್ಪಿಕೊಂಡಿದ್ದೇನೆ. ನನ್ನ ಜೊತೆಗೆ ನನ್ನ ತಂದೆ ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ಮುಂದುವರೆಯುತ್ತೇನೆ. ಡಾಲಿ ಧನಂಜಯವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಇದೀಗ ಅವರ ನಿರ್ಮಾಣ ಸಂಸ್ಥೆಯ ಮುಖಾಂತರ ನಾಯಕಿಯಾಗಿ ಅವರ ಚಿತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದೇನೆ. ನನಗೆ ಬಹಳ ಖುಷಿ ಇದೆ. ನಿಮ್ಮೆಲ್ಲರ ಆಶೀರ್ವಾದವಿದ್ದರೆ ನಾನು ಖಂಡಿತ ಅಂದುಕೊಂಡಿದ್ದನ್ನು ಸಾಧಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Cricket News: ಮಾವ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಒಂದೇ ತಿಂಗಳಿಗೆ ಸೊಸೆ ಮಾಯಾಂತಿ ರವರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇನ್ನು ಮುಂದೆ ಮಾಯಾಂತಿ ಇರಲ್ವ?

Comments are closed.