Kannada News: ರವಿಚಂದ್ರನ್ ಸಿನೆಮಾಗೆ ಮತ್ತೆ ಬಂದ ಚೆಲುವೆ: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆ. ಯಾರು ಗೊತ್ತೇ ಆ ನಟಿ??

Kannada News: ನಟ ವಿ ರವಿಚಂದ್ರನ್ (Ravichandran) ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೇ ಜನವರಿ 26ರಂದು ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಕ್ರಾಂತಿ (Kranthi) ಚಿತ್ರವು ಬಿಡುಗಡೆಗೊಳ್ಳಲಿದೆ. ಇದರ ಜೊತೆಗೆ ನಟ ರವಿಚಂದ್ರನ್ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ಚಿತ್ರ ಒಂದನ್ನು ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಈ ಮೊದಲು ಬೇರೊಬ್ಬರು ನಾಯಕಿ ಆಯ್ಕೆಗೊಂಡಿದ್ದರು. ಆದರೆ ಇದೀಗ ಆ ನಟಿಯ ಬದಲಿಗೆ ಮತ್ತೊಬ್ಬರನ್ನು ಕರೆದು ತರಲಾಗಿದೆ. ಈ ಹೊಸ ನಟಿಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಇವರ ಆಯ್ಕೆಯ ಬಗ್ಗೆ ಮೆಚ್ಚುಗೆಗಳು ಎಲ್ಲೆಡೆ ಕೇಳಿ ಬರುತ್ತಿವೆ. ಅಂದಹಾಗೆ ರವಿಚಂದ್ರನ್ ಅವರು ಕಂಬ್ಯಾಕ್ ಮಾಡುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಯಾರೆಂದು ಗೊತ್ತಾ?

ಕಳೆದ ಸಾಕಷ್ಟು ದಿನಗಳಿಂದ ರವಿಚಂದ್ರನ್ ರವರು ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಇದರ ಜೊತೆಗೆ ಅವರ ಈ ಹಿಂದಿನ ಸಿನಿಮಾಗಳು ಅಂದುಕೊಂಡ ಯಶಸ್ಸು ಸಾಧಿಸಲು ವಿಫಲವಾಗುತ್ತಿದೆ. ಆದರೆ ರವಿಚಂದ್ರನ್ ಇತ್ತೀಚಿಗೆ ಕಿರುತೆರೆಯಲ್ಲಿ ಬಿಸಿಯಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ. ಇದೀಗ ಅವರು ಮತ್ತೆ ತಮ್ಮ ಹೊಸ ಚಿತ್ರ ‘ಗೌರಿ’ ಮೂಲಕ ಮತ ಚಿತ್ರರಂಗಕ್ಕೆ ನಾಯಕನಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ಅತ್ಯಂತ ಪ್ರತಿಭಾನ್ವಿತ ಕನ್ನಡದ ನಟಿ ಅಪೂರ್ವ (Apoorva) ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಅಂದ ಹಾಗೆ ನಟಿ ಅಪೂರ್ವ ಮೈಸೂರು ಮೂಲದವರಾಗಿದ್ದು, ಈ ಮೊದಲು ಅಪೂರ್ವ ಚಿತ್ರದಲ್ಲಿ ರವಿಚಂದ್ರನ್ ಜೊತೆ ನಾಯಕಿಯಾಗಿ ನಟಿಸಿದ್ದರು. ಇದೀಗ ಮತ್ತೆ ರವಿಚಂದ್ರನ್ ಅವರ ಚಿತ್ರದಲ್ಲಿ ಅವರ ಜೊತೆಗೆ ನಾಯಕಿಯಾಗಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

kannada news ravichandran apoorva | Kannada News: ರವಿಚಂದ್ರನ್ ಸಿನೆಮಾಗೆ ಮತ್ತೆ ಬಂದ ಚೆಲುವೆ: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆ. ಯಾರು ಗೊತ್ತೇ ಆ ನಟಿ??
Kannada News: ರವಿಚಂದ್ರನ್ ಸಿನೆಮಾಗೆ ಮತ್ತೆ ಬಂದ ಚೆಲುವೆ: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆ. ಯಾರು ಗೊತ್ತೇ ಆ ನಟಿ?? 2

ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಪೂರ್ವ “ನನಗೆ ರವಿಚಂದ್ರನ್ ಅವರ ಜೊತೆಗೆ ನಟಿಸುವುದು ಬಹಳ ಖುಷಿ ಕೊಡುವ ವಿಷಯವಾಗಿದೆ. ಅವರಂತಹ ಒಬ್ಬ ಶ್ರೇಷ್ಠ ನಟನ ಜೊತೆಗೆ ನಟಿಸುವ ಅವಕಾಶ ಸಿಗುವುದೇ ದೊಡ್ಡ ಅದೃಷ್ಟ. ನನಗೆ ಅವರ ಜೊತೆಗೆ ಎರಡೆರಡು ಬಾರಿ ನಟಿಸುವ ಅವಕಾಶ ಸಿಕ್ಕಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಗೌರಿ ಚಿತ್ರದಲ್ಲಿ ಅವರ ಜೊತೆಗೆ ನಟಿಸಲು ಎದುರು ನೋಡುತ್ತಿದ್ದೇನೆ” ಎಂದು ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ಜನವರಿ 22 ರಿಂದ ಗೌರಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ದಾಂಡೇಲಿ ಕಾಡಿನಲ್ಲಿ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ನಟಿ ಅಪೂರ್ವ ರವಿಚಂದ್ರನ್ ಅವರ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ಕೇವಲ ಮೂರೇ ಮೂರು ಪಾತ್ರಗಳಿವೆಯಂತೆ, ಈ ಕಾರಣಕ್ಕಾಗಿಯೂ ಗೌರಿ ಚಿತ್ರ ಕುತೂಹಲ ಉಂಟುಮಾಡಿದೆ.

Comments are closed.