Kannada News: ಮದುವೆಯಾಗಿ ಸುಖ ಸಂಸಾರದ ನಡುವೆ ಗರ್ಭಿಣಿಯಾದ ಹೆಂಡತಿ: ಆದರೆ ಗಂಡನ ಆಲೋಚನೇನೇ ಬೇರೆಯಾಗಿತ್ತು. ಕೊನೆಗೆ ಆಕೆಯನ್ನು ಏನು ಮಾಡಿದ್ದಾನೆ ಗೊತ್ತೇ?

Kannada News: ಪ್ರತಿನಿತ್ಯವೂ ನಾವು ಅನೇಕ ಅಪರಾಧದ ಘಟನೆಗಳ ಬಗ್ಗೆ ನೋಡುತ್ತಿರುತ್ತೇವೆ, ಓದುತ್ತಿರುತ್ತೇವೆ. ಇತ್ತೀಚಿಗೆ ಈ ರೀತಿಯ ಕೃತ್ಯಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದೇ ಹೇಳಬಹುದು. ಅದರಲ್ಲೂ ಕೂಡ ಕೌಟುಂಬಿಕ ಕಲಹಗಳು, ಸಂಬಂಧದ ಬಿರುಕುಗಳು ಇದೇ ರೀತಿಯ ಸುದ್ದಿಗಳು ಹೆಚ್ಚಾಗುತ್ತಿದೆ. ತಮ್ಮ ಸಂಗಾತಿಯ ಮೇಲೆ ಸಂದೇಹ ಮೂಡುವುದು, ಪತ್ನಿಯ ಶೀಲದ ಮೇಲೆ ಶಂಕಿಸುವುದು, ಅನುಮಾನದಿಂದ ದಾಂಪತ್ಯದ ಜೀವನದಲ್ಲಿ ಬಿರುಕು ಮೂಡುವುದು ಜೊತೆಗೆ ಕುಟುಂಬದಲ್ಲಿ ದೊಡ್ಡಮಟ್ಟದ ವೈಮನಸ್ಯ, ಜಗಳ ಉಂಟಾಗುವುದು ಇತ್ಯಾದಿ ಕೆಟ್ಟ ಬೆಳವಣಿಗೆಗಳು ಹೆಚ್ಚಾಗುತ್ತಿವೆ. ಕೇವಲ ಒಂದು ಅನುಮಾನ ಅಲ್ಲಿಗೆ ನಿಂತು ಸಮಸ್ಯೆ ಬಗೆಹರಿಯುವುದು ಬಿಟ್ಟು ಇತ್ತೀಚಿಗೆ ಸಂದೇಹ ಸಂಗಾತಿಯನ್ನು ಕೊಲೆ ಮಾಡುವ ಮಟ್ಟಿಗೆ ಹೋಗುತ್ತಿದೆ ಎನ್ನುವುದು ನಿಜಕ್ಕೂ ಬೇಸರದ ವಿಷಯ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿಗೆ ತನ್ನ ಪತ್ನಿಯನ್ನು ಅನುಮಾನಿಸಿದ ಪ್ರತಿಯೊಬ್ಬ ಆಕೆ ಗರ್ಭಿಣಿ ಎನ್ನುವುದನ್ನು ನೋಡದೆ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪತಿಯೊಬ್ಬ ತನ್ನ ಹೆಂಡತಿಯ ಶೀಲ ಶಂಕಿಸಿ ಅವಳನ್ನು ಉಸಿರುಗಟ್ಟಿಸಿ ಕೊಂದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ತಾವರೆಕೆರೆಯ ಸುಭಾಷ್ ನಗರ ಫ್ಲಾಟ್ ನಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂದು ವರದಿಯಾಗಿದೆ. 22 ವರ್ಷದ ನಾಜ್ಹ್ ಎಂಬ ಯುವತಿಯನ್ನು ಆಕೆಯ ಪತಿ ನಾಜೀರ್ ಹುಸೇನ್ ಉಸಿರುಗಟ್ಟಿಸಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ. ಈ ದಂಪತಿ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮದುವೆಯ ನಂತರ ಅವರು ಸುಭಾಷ್ ನಗರದ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು. ಈ ದಂಪತಿಗಳು ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬದವರ ಒಪ್ಪಿಗೆಯ ಮೇರೆಗೆ ಅವರು ಇತ್ತೀಚಿಗಷ್ಟೇ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ನಾಜೀರ್ ಗೆ ತಂದೆ ತಾಯಿ ಇರಲಿಲ್ಲ ಆದರೆ ಆತನ ಒಳ್ಳೆಯತನವನ್ನು ಕಂಡಿದ್ದ ನಾಜ್ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು. ನಾಜೀರ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದನ್ನು ಓದಿ..Relationship: ವಾರಕ್ಕೆ ಎರಡು ದಿನ ಮನೆಗೆ ಬರುತ್ತಿದ್ದ ಗಂಡ: ಉಳಿದ 5 ದಿನ ಹೆಂಡತಿ, ಮನೆಯಲ್ಲಿದ್ದ ಹೆಣ್ಣುಮಗುವಿನ ಜೊತೆ ಏನು ಮಾಡುತ್ತಿದ್ದಳು ಗೊತ್ತೇ? ಇಂತ ತಾಯಿ ಇರ್ತಾರ??

kannada news bengalurina case enagide gotte | Kannada News: ಮದುವೆಯಾಗಿ ಸುಖ ಸಂಸಾರದ ನಡುವೆ ಗರ್ಭಿಣಿಯಾದ ಹೆಂಡತಿ: ಆದರೆ ಗಂಡನ ಆಲೋಚನೇನೇ ಬೇರೆಯಾಗಿತ್ತು. ಕೊನೆಗೆ ಆಕೆಯನ್ನು ಏನು ಮಾಡಿದ್ದಾನೆ ಗೊತ್ತೇ?
Kannada News: ಮದುವೆಯಾಗಿ ಸುಖ ಸಂಸಾರದ ನಡುವೆ ಗರ್ಭಿಣಿಯಾದ ಹೆಂಡತಿ: ಆದರೆ ಗಂಡನ ಆಲೋಚನೇನೇ ಬೇರೆಯಾಗಿತ್ತು. ಕೊನೆಗೆ ಆಕೆಯನ್ನು ಏನು ಮಾಡಿದ್ದಾನೆ ಗೊತ್ತೇ? 2

ಕೆಲವು ದಿನಗಳ ಹಿಂದೆಯಷ್ಟೇ ನಾಜ್ ತಾನು ಗರ್ಭಿಣಿಯಾಗಿರುವ ವಿಷಯವನ್ನು ತನ್ನ ಪತಿಗೆ ತಿಳಿಸುತ್ತಾಳೆ. ಆದರೆ ತಾನು ತಂದೆಯಾಗುತ್ತಿದ್ದೇನೆ ಎಂದು ಖುಷಿ ಪಡುವ ಬದಲು ಆಕೆಯ ಪತಿ ನಾಜೀರ್ ಹೆಂಡತಿಯ ಮೇಲೆ ಅನುಮಾನಿಸುತ್ತಾನೆ. ಇದು ತನ್ನ ಮಗುವಲ್ಲ ಎಂದು ಆತ ಹೆಂಡತಿಯ ಮೇಲೆ ಕೂಗಾಡುತ್ತಾನೆ. ಆ ಬಳಿಕ ಮಗುವನ್ನು ತೆಗೆಸಿ ಹಾಕಿಬಿಡು, ಅಬಾರ್ಷನ್ ಮಾಡಿಸಿಕೊ ಎಂದು ಹೇಳುತ್ತಾನೆ. ಆದರೆ ಇದಕ್ಕೆ ನಾಜ್ ಒಪ್ಪಿಕೊಳ್ಳುವುದಿಲ್ಲ. ಇದೇ ವಿಷಯವಾಗಿ ಈ ದಂಪತಿಗಳ ನಡುವೆ ಸಾಕಷ್ಟು ದಿನಗಳಿಂದ ವೈಮನಸ್ಯ ಇತ್ತು ಎಂದು ತಿಳಿದು ಬಂದಿದೆ. ಪ್ರತಿನಿತ್ಯವೂ ತನ್ನ ಹೆಂಡತಿಯ ಮೇಲೆ ಕೂಗಾಡಿ ಜಗಳವಾಗುತ್ತಿದ್ದನಂತೆ. ಆದರೆ ನಿನ್ನೆ ಈ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ನಾಜಿರ್ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆಕೆಯ ಅಣ್ಣನಿಗೆ ನಾನು ನಿಮ್ಮ ತಂಗಿಯನ್ನು ಕೊಂದಿದ್ದೇನೆ ಎನ್ನುವ ಮೆಸೇಜ್ ಕಳಿಸಿ ನಂತರ ಪರಾರಿಯಾಗಿದ್ದಾನೆ. ವಿಷಯ ತಿಳಿದ ಸದ್ದುಗುಂಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸದ್ಯ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನು ಓದಿ.. Relationship: ಅತ್ತೆಯ ಡಿಂಗ್ ಡಾಂಗ್ ಆಟವನ್ನು ಹೊರತೆಗೆದ ಮನೆಗೆ ಬಂದ ಹೊಸ ಸೊಸೆಗೆ, ಕುಟುಂಬ ಸೇರಿಕೊಂಡು ಏನು ಮಾಡಿದ್ದಾರೆ ಗೊತ್ತೇ??

Comments are closed.