Kannada news: ದಿಡೀರ್ ಎಂದು ರಿಷಬ್ ಶೆಟ್ಟಿ ಗೆ ಶಾಕ್ ಕೊಟ್ಟ ರಕ್ಷಿತ್ ಶೆಟ್ಟಿ: ದೋಸ್ತಿಗಳ ನಡುವೆ ಏನಾಗಿದೆ ಗೊತ್ತೇ?? ಯೋಗಿ ಎಂಟ್ರಿ ಇಂದ ಅಲ್ಲೋಲ ಕಲ್ಲೋಲ.

Kannada News: ನಟ ರಕ್ಷಿತ್ ಶೆಟ್ಟಿ (Rakshit Shetty) ಇತ್ತೀಚಿಗಷ್ಟೇ ಬ್ಯಾಚುಲರ್ ಪಾರ್ಟಿ (Bachelor Party) ಎನ್ನುವ ಸಿನಿಮಾ ಒಂದನ್ನು ನಿರ್ಮಿಸುತ್ತಿರುವುದಾಗಿ ಘೋಷಣೆ ಮಾಡಿದ್ದರು. ಈಗಾಗಲೇ ಚಿತ್ರವು ಸೆಟ್ಟೇರಿದ್ದು ಚಿತ್ರೀಕರಣವೂ ಕೂಡ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ ಎಂದು ಹೇಳಲಾಗಿತ್ತು. ಅದರ ಜೊತೆಗೆ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ (Rishab Shetty) ಕೂಡ ನಟಿಸುತ್ತಿದ್ದರು. ಆದರೆ ಇವರ ಕಾಂತಾರ ಚಿತ್ರ ಎಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಾಂತಾರ (Kantara) ಚಿತ್ರದ ಯಶಸ್ಸಿನ ನಂತರ ಅವರು ಭಾರತದ ಜನಪ್ರಿಯ ಸ್ಟಾರ್ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕಾಂತಾರ ಚಿತ್ರದ ಜನಪ್ರಿಯತೆಯ ನಂತರ ಇದೀಗ ರಿಷಬ್ ಶೆಟ್ಟಿ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಮಾಹಿತಿಗಳು ಹೊರ ಬರುತ್ತಿವೆ. ಹಾಗಾಗಿ ಅವರ ಜಾಗಕ್ಕೆ ಮತ್ತೊಬ್ಬ ಸ್ಟಾರ್ ನಟನನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

ಕೆಲವು ತಿಂಗಳ ಹಿಂದೆ ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಾದ ಪರಮವ್ ಸ್ಟುಡಿಯೋಸ್ (Paramvah Studios) ಅಡಿಯಲ್ಲಿ ಬ್ಯಾಚುಲರ್ ಪಾರ್ಟಿ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಈ ಚಿತ್ರ ದ ಮುಹೂರ್ತದ ವೇಳೆ ಇಡೀ ತಂಡ ಭಾಗಿಯಾಗಿತ್ತು. ಈ ವೇಳೆ ರಿಷಬ್ ಶೆಟ್ಟಿ ಕೂಡ ಇದ್ದರು. ರಕ್ಷಿತ್ ಶೆಟ್ಟಿ ಅವರ ಸಿನಿಮಾಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ ಅನುಭವವಿರುವ ಅಭಿಜಿತ್ ಮಹೇಶ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಿರ್ದೇಶಕರಾಗಿ ಪರಿಚಯಗೊಳ್ಳುತ್ತಿದ್ದಾರೆ. ಈ ವೇಳೆ ರಿಷಭ್ ಮಾತನಾಡಿದ್ದರು, ಅಭಿಜಿತ್ (Abhijit Mahesh) ಅವರು ನಿರ್ದೇಶಕನಾಗಿ ಗುರುತಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ವಾದ ಬ್ಯಾಚುಲರ್ ಪಾರ್ಟಿಯಲ್ಲಿ ನಾನು ಸಹ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಇದೀಗ ಅವರು ಚಿತ್ರದಿಂದ ಹೊರನಡೆದಿದ್ದಾರೆ. ಇದನ್ನು ಓದಿ..Kannada News: ನಡೆಯಲ್ಲ ತನಿಖೆ: ಚಪ್ಪಲಿ ಎಸೆತ ಪ್ರಕರಣಕ್ಕೆ ಬ್ರೇಕ್: ಅಸಲಿಗೆ ತನಿಖೆ ನಿಲ್ಲಿಸಲು ಆದೇಶ ಹೊರಡಿಸಿದ್ದು ಯಾರು ಗೊತ್ತೆ?

kannada news bachelor party movie | Kannada news: ದಿಡೀರ್ ಎಂದು ರಿಷಬ್ ಶೆಟ್ಟಿ ಗೆ ಶಾಕ್ ಕೊಟ್ಟ ರಕ್ಷಿತ್ ಶೆಟ್ಟಿ: ದೋಸ್ತಿಗಳ ನಡುವೆ ಏನಾಗಿದೆ ಗೊತ್ತೇ?? ಯೋಗಿ ಎಂಟ್ರಿ ಇಂದ ಅಲ್ಲೋಲ ಕಲ್ಲೋಲ.
Kannada news: ದಿಡೀರ್ ಎಂದು ರಿಷಬ್ ಶೆಟ್ಟಿ ಗೆ ಶಾಕ್ ಕೊಟ್ಟ ರಕ್ಷಿತ್ ಶೆಟ್ಟಿ: ದೋಸ್ತಿಗಳ ನಡುವೆ ಏನಾಗಿದೆ ಗೊತ್ತೇ?? ಯೋಗಿ ಎಂಟ್ರಿ ಇಂದ ಅಲ್ಲೋಲ ಕಲ್ಲೋಲ. 2

ರಕ್ಷಿತ್ ಶೆಟ್ಟಿ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ಬಹು ತಾರಾಗಣವೇ ಇದೆ. ರಿಷಭ್ ಶೆಟ್ಟಿ, ದಿಗಂತ್ (Diganth), ಅಚ್ಯುತ್ ಕುಮಾರ್ (Achyuth Kumar) ಅವರ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ತಯಾರಾಗಬೇಕಿತ್ತು, ಆದರೆ ಏಕಾಏಕಿ ರಿಷಬ್ ಶೆಟ್ಟಿ ಚಿತ್ರದಿಂದ ಹೊರಬಂದಿದ್ದು ಇದೀಗ ಅವರ ಬದಲಿಗೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಲಾಗಿದೆಯಂತೆ. ರಿಷಭ್ ಶೆಟ್ಟಿ ಅವರ ಬದಲಿಗೆ ಇದೀಗ ಲೂಸ್ ಮಾದ ಯೋಗಿಯವರನ್ನು (Loose Mada Yogi) ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಲೂಸ್ ಮಾದ ಯೋಗಿ ಇತ್ತೀಚಿಗೆ ಸಾಕಷ್ಟು ಚಿತ್ರಗಳಲ್ಲಿ ಬಿಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರನ್ನು ಬ್ಯಾಚುಲರ್ ಪಾರ್ಟಿ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರ ಬದಲಿಗೆ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ರಿಷಭ್ ಶೆಟ್ಟಿ ಬ್ಯಾಚುಲರ್ ಪಾರ್ಟಿ ಚಿತ್ರದಿಂದ ಹೊರ ನಡೆದಿರುವುದು ಹಾಗೆಯೇ ಅವರ ಬದಲಿಗೆ ಲೂಸ್ ಮಾದ ಯೋಗಿಯವರನ್ನು ಆಯ್ಕೆ ಮಾಡಿಕೊಂಡಿರುವ ಕುರಿತಾಗಿ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.