Kannada News: ಹತ್ತಾರು ವರ್ಷಗಳು ಆದ ಮೇಲೆ ಮೊದಲ ಬಾರಿಗೆ ಸುದೀಪ್ ರವರು ಹೆಸರು ತೆಗೆದುಕೊಂಡ ದರ್ಶನ್, ಹೇಳಿದ್ದೇನು ಗೊತ್ತೇ??

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ಕಿಚ್ಚ ಸುದೀಪ್ (Kiccha Sudeep) ಅವರು ಒಂದು ಕಾಲದ ಕುಚಿಕು ಗೆಳೆಯರಂತೆ ಇದ್ದವರು. ಇಬ್ಬರು ಒಬ್ಬರನ್ನೊಬ್ಬರು ದಚ್ಚು ಚಿನ್ನ ಎಂದು ಕರೆದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇವರಿಬ್ಬರ ಸ್ನೇಹ ಎಲ್ಲರಿಗೂ ಇಷ್ಟವಾಗುತ್ತಿತ್ತು. ಇವರಿಬ್ಬರನ್ನು ಒಟ್ಟಿಗೆ ನೋಡಿದರೆ ವಿಷ್ಣುವರ್ಧನ್ (Vishnuvardhan), ಅಂಬರೀಶ್ (Ambarish) ಅವರನ್ನೇ ಮತ್ತೆ ನೋಡಿದಂತೆ ಆಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಇವರಿಬ್ಬರ ಸ್ನೇಹ ಗಟ್ಟಿಯಾಗಿತ್ತು. ಸ್ಯಾಂಡಲ್ವುಡ್ ನ ಕುಚುಕು ಗೆಳೆಯರಂತೆ ಇಬ್ಬರು ಇದ್ದರು. ಇಬ್ಬರು ಕೂಡ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆದರೂ ಇಬ್ಬರು ನಟರ ನಡುವೆ ಯಾವುದೇ ಪೈಪೋಟಿ ಇರಲಿಲ್ಲ. ಇಬ್ಬರೂ ಒಳ್ಳೆಯ ಸ್ನೇಹಿತರಂತೆ ಇದ್ದರೂ. ಆದರೆ ಏಕಾಏಕಿ ಇವರ ಸ್ನೇಹ ಮುರಿದು ಬಿದ್ದಿತ್ತು. ಆನಂತರ ದರ್ಶನ್ ಎಲ್ಲಿಯೂ ಕೂಡ ಸುದೀಪ್ ಅವರ ಹೆಸರು ಹೇಳಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಸಂದರ್ಶನ ಒಂದರಲ್ಲಿ ಸುದೀಪ ಅವರ ಹೆಸರು ಹೇಳಿದ್ದಾರೆ.

ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಕೆಲವು ವರ್ಷಗಳ ಹಿಂದಿನವರೆಗೂ ಒಳ್ಳೆಯ ಸ್ನೇಹಿತರಂತೆ ಇದ್ದರು. ಎಲ್ಲ ಕಾರ್ಯಕ್ರಮಗಳಲ್ಲೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಮಾತನಾಡುತ್ತಿದ್ದರು. ಪರಸ್ಪರ ಪ್ರೀತಿ, ಗೌರವ ಇತ್ತು. ಆದರೆ ಸುದೀಪ ಅವರು ಸುದ್ದಿ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದ ಹೇಳಿಕೆ ಇವರ ಸ್ನೇಹವನ್ನು ಮುರಿದು ಬೀಳುವಂತೆ ಮಾಡಿತ್ತು. ಮೆಜೆಸ್ಟಿಕ್ ಚಿತ್ರವನ್ನು ದರ್ಶನ್ ಮಾಡಲಿ ಎಂದು ಹೇಳಿದ್ದೆ ನಾನು ಎಂಬ ರೀತಿಯ ಹೇಳಿಕೆಯನ್ನು ಸುದೀಪ್ ನೀಡಿದ್ದರು. ಈ ಮಾತನ್ನು ಸುದೀಪ್ ಹೇಳಿದ ಅದೆಷ್ಟು ವರ್ಷಗಳ ನಂತರ ಯಾರೋ ಕಿಡಿಗೇಡಿಗಳು ಇವರಿಬ್ಬರ ಸ್ನೇಹವನ್ನು ಮುರಿಯಲೆಂದೆ ಆ ವಿಡಿಯೋ ತುಣುಕನ್ನು ದರ್ಶನ್ ಅವರಿಗೆ ತೋರಿಸಿದರು. ಇದನ್ನು ಓದಿ.. Kannada News: ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು

kannada news darshan about sudeep | Kannada News: ಹತ್ತಾರು ವರ್ಷಗಳು ಆದ ಮೇಲೆ ಮೊದಲ ಬಾರಿಗೆ ಸುದೀಪ್ ರವರು ಹೆಸರು ತೆಗೆದುಕೊಂಡ ದರ್ಶನ್, ಹೇಳಿದ್ದೇನು ಗೊತ್ತೇ??
Kannada News: ಹತ್ತಾರು ವರ್ಷಗಳು ಆದ ಮೇಲೆ ಮೊದಲ ಬಾರಿಗೆ ಸುದೀಪ್ ರವರು ಹೆಸರು ತೆಗೆದುಕೊಂಡ ದರ್ಶನ್, ಹೇಳಿದ್ದೇನು ಗೊತ್ತೇ?? 2

ಆನಂತರ ಇದರಿಂದ ಬೇಸರ ಪಟ್ಟುಕೊಂಡ ದರ್ಶನ್ ರವರು ಟ್ವೀಟ್ ಮಾಡುವ ಮೂಲಕ ತಮ್ಮ ಸ್ನೇಹಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಇನ್ನು ಮುಂದೆ ನಾನು ಮತ್ತು ಸುದೀಪ್ ಇಬ್ಬರೂ ಸ್ನೇಹಿತರಲ್ಲ. ಸ್ಯಾಂಡಲ್ವುಡ್ ನಲ್ಲಿ ನಟಿಸುವ ಕಲಾವಿದರು ಅಷ್ಟೇ. ಇದು ಇಲ್ಲಿಗೆ ಮುಗಿಯಿತು, ಇಷ್ಟಕ್ಕೆ ಕೊನೆ. ಎನ್ನುವ ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಮತ್ತು ಸುದೀಪ್ ಅವರ ಸ್ನೇಹಕ್ಕೆ ಅಂತ್ಯ ಆಡಿದ್ದರು. ಆನಂತರ ಎಲ್ಲೂ ಕೂಡ ಸುದೀಪ ಅವರ ಬಗ್ಗೆ ದರ್ಶನ್ ಮಾತನಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ದರ್ಶನ್ ರವರು ಸುದೀಪ್ ಹೆಸರು ಹೇಳಿ ಅವರ ಬಗ್ಗೆ ಮಾತನಾಡಿದ್ದಾರೆ.

ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್ ವಾಹಿನಿ ಒಂದಕ್ಕೆ ಸಂದರ್ಶನ ನೀಡಿರುವ ಅವರು ಅಲ್ಲಿ ರಚಿತಾರಾಮ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ 10 ವರ್ಷ ಪೂರೈಸಿರುವುದರ ಕುರಿತು ಮಾತನಾಡಿದ್ದಾರೆ. ಈ ವೇಳೆ ರಚಿತಾ ರಾಮ್ ಅವರ ಜೊತೆ ನಟಿಸಿರುವ ನಾಯಕರ ಹೆಸರುಗಳನ್ನು ಹೇಳುವಾಗ ಸುದೀಪ ಅವರ ಹೆಸರನ್ನು ಹೇಳಿದ್ದಾರೆ. ಹತ್ತು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿಯುವುದು ಸುಲಭದ ಮಾತಲ್ಲ. ಅವರು ಸುದೀಪ್, ಶಿವಣ್ಣ, ಪುನೀತ್ ಅವರಂತಹ ದೊಡ್ಡ ನಟರ ಜೊತೆಗೆ ನಟಿಸಿದ್ದಾರೆ ಎಂದು ಹೇಳುವ ಮೂಲಕ ಸುದೀಪ್ ಅವರ ಹೆಸರನ್ನು ಮೊದಲ ಬಾರಿಗೆ ತೆಗೆದುಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಮೆಚ್ಚುಗೆಯಾಗಿದ್ದು, ಈ ನಟರು ಮತ್ತೆ ಒಂದಾಗಲಿ ಎಂದು ಬಯಸುತ್ತಿದ್ದಾರೆ. ಇದನ್ನು ಓದಿ..Kannada News: ತೆಲುಗು ಚಿತ್ರರಂಗದಿಂದ ಕನ್ನಡತಿ ಪೂಜಾ ರವರನ್ನು ಹೊರದಬ್ಬಿದ ರಶ್ಮಿಕಾ: ಏನು ಮಾಡಿದ್ದಾರೆ ಗೊತ್ತೇ??

Comments are closed.