Kannada News: ಕ್ರಾಂತಿ ಸಿನಿಮಾ ಬ್ಯಾನ್ ಆಗದಂತೆ ದರ್ಶನ್ ತೆಗೆದುಕೊಂಡ ದೊಡ್ಡ ನಿರ್ಧಾರ ಏನು ಗೊತ್ತಾ?? ಚಿತ್ರರಂಗ ಶಾಕ್.

Kannada News: ದರ್ಶನ್ (Darshan) ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸಿದ ಪ್ರಕರಣ ನಡೆದ ಅಂದಿನಿಂದ ಇಂದಿನವರೆಗೂ ಕೂಡ ಇಬ್ಬರು ಅಭಿಮಾನಿಗಳ ನಡುವೆ ವಾದ, ವಿವಾದ, ಕಿತ್ತಾಟ ಜೋರಾಗಿ ನಡೆಯುತ್ತಿದೆ. ಇಷ್ಟು ದಿನಗಳು ಕಳೆದರೂ ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ದರ್ಶನ್ ಅಭಿಮಾನಿಗಳು ಇದನ್ನು ಪುನೀತ್ ಅಭಿಮಾನಿಗಳೇ ಉದ್ದೇಶಪೂರ್ವಕವಾಗಿ ಮಾಡಿಸಿ ನಮ್ಮ ಬಾಸ್ ಗೆ ಅಪಮಾನ ಮಾಡಿಸಿದ್ದಾರೆ ಎಂದು ಆರೋಪ ಮಾಡುತ್ತಿರುವುದಲ್ಲದೆ, ರಾಜ್ ಕುಟುಂಬಕ್ಕೂ ಕೂಡ ಅವ ಹೇಳನಕಾರಿಯಾಗಿ ಟೀಕೆ ಮಾಡುತ್ತಾರೆ. ಇದೇ ಕಾರಣಕ್ಕೆ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನ ಫಿಲಂ ಚೇಂಬರ್ ನಲ್ಲಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಬಳಗ ದೊಡ್ಡ ಪ್ರತಿಭಟನೆಯನ್ನೇ ನಡೆಸಿತ್ತು.

ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಎರಡನೇ ಹಾಡಾದ ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಮಾಡಲೆಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ನಿಂತಿದ್ದ ನಟ ದರ್ಶನ್ ಅವರಿಗೆ ಜನರ ಮಧ್ಯೆ ಇಂದ ಯಾರೋ ಚಪ್ಪಲಿ ಎಸೆದಿದ್ದರು. ಇದನ್ನು ಪುನೀತ್ (Puneeth Rajkumar) ಅಭಿಮಾನಿಗಳೇ ಮಾಡಿಸಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು. ಆದರೆ ನಾವು ಹಾಗೆ ಮಾಡಿಲ್ಲ ಎಂದು ಪುನೀತ್ ಅಭಿಮಾನಿಗಳು ಹೇಳಿಕೊಂಡರು ಸಹ ಸುಮ್ಮನಿರದ ದರ್ಶನ್ ಅಭಿಮಾನಿಗಳು ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಡಾ. ರಾಜಕುಮಾರ್ (Dr Rajkumar) ಅವರ ಇಡೀ ಕುಟುಂಬ ಹಾಗೂ ರಾಜವಂಶದ ಬಗ್ಗೆ ಅನೇಕ ಟ್ರೋಲ್ ಗಳನ್ನು ಹಾಗೂ ಕೆಟ್ಟ ಕೆಟ್ಟ ಅವಹೇಳನಕಾರಿ ಮಾತುಗಳನ್ನು ಆಡಲಾಯಿತು. ಇದನ್ನು ಓದಿ..Kannada News: ಕ್ರಾಂತಿ ಬಂದ್ ಮಾಡುವ ಗಂಡು ಇನ್ನು ಹುಟ್ಟಿಲ್ಲ ಒಂದೇ ದಿನಕ್ಕೆ ಎಲ್ಲಾ ಉಲ್ಟಾ ಪಲ್ಟಾ ಬ್ಯಾನ್ ಎಂದವರಿಗೆ ದರ್ಶನ್ ಎಚ್ಚರಿ

kannada news darshan kranthi movie | Kannada News: ಕ್ರಾಂತಿ ಸಿನಿಮಾ ಬ್ಯಾನ್ ಆಗದಂತೆ ದರ್ಶನ್ ತೆಗೆದುಕೊಂಡ ದೊಡ್ಡ ನಿರ್ಧಾರ ಏನು ಗೊತ್ತಾ?? ಚಿತ್ರರಂಗ ಶಾಕ್.
kannada-news-darshan-kranthi-movie

ಇದರ ವಿರುದ್ಧವಾಗಿ ಡಾ. ರಾಜಕುಮಾರ್ ಅಭಿಮಾನಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಅಭಿಮಾನಿಗಳು ಎಲ್ಲರೂ ಒಟ್ಟಾಗಿ ಸೇರಿ ಬೆಂಗಳೂರಿನ ಫಿಲಂ ಚೇಂಬರ್ ಮುಂಭಾಗದಲ್ಲಿ ಮೊನ್ನೆಯಷ್ಟೇ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕ್ರಾಂತಿ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ. ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರನ್ನು ಅಪಮಾನಿಸುವ ಕೃತ್ಯ ವನ್ನು ಮಾಡಿದರೆ ಯಾರನ್ನು ಕ್ಷಮಿಸಲಾಗುವುದಿಲ್ಲ ಎಂದು ಅವರು ದೊಡ್ಡ ಪ್ರತಿಭಟನೆಯನ್ನೇ ನಡೆಸಿದರು. ಇದಲ್ಲದೆ ಜನವರಿ 26 ಅಂದರೆ ಕ್ರಾಂತಿ ಚಿತ್ರ ಬಿಡುಗಡೆಯಾಗುವ ದಿನಾಂಕ ಕರ್ನಾಟಕವನ್ನೇ ಬಂದ್ ಮಾಡುವುದಾಗಿ, ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಆದರೆ ದರ್ಶನ್ ಅಭಿಮಾನಿಗಳು ಅದು ಏನು ಮಾಡುತ್ತೀರೋ ಮಾಡ್ಕೊಳ್ಳಿ, ಕ್ರಾಂತಿ ಚಿತ್ರ ಬಿಡುಗಡೆ ಆಗೇ ಆಗುತ್ತದೆ. ನಿಮ್ಮಿಂದ ಏನು ಮಾಡೋದಿಕ್ಕೆ ಆಗೋದಿಲ್ಲ. ಕ್ರಾಂತಿ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಪ್ರತಿಕ್ರಿಯಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇನ್ನು ನಟ ದರ್ಶನ್ ರವರು ಒಬ್ಬ ನಟನಾಗಿ ವೇದಿಕೆಗಳಲ್ಲಿ ಮಾತನಾಡುವ ರೀತಿ ಸರಿ ಇಲ್ಲ. ಅವರನ್ನು ಕರೆಸಿ ಬುದ್ದಿ ಹೇಳಿ ಹಾಗೂ ಅವರ ಅಭಿಮಾನಿಗಳಿಗೆ ಬುದ್ಧಿ ಹೇಳುವಂತೆ ತಿಳಿ ಹೇಳಿ ಎಂದು ರಾಜ್ ಅಭಿಮಾನಿಗಳು ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದಾರೆ. ಫಿಲಂ ಚೇಂಬರ್ ದರ್ಶನವರನ್ನು ಕರೆಸಿ ಬುದ್ದಿ ಹೇಳುತ್ತದಯೋ, ದರ್ಶನ್ ಅವರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಮದುವೆಯಾಗಿ ಎರಡು ವರ್ಷ ಆದ್ರೂ ಮೊದಲನೇ ರಾತ್ರಿ ಬೇಡ ಎನ್ನುತ್ತಿದ್ದ ಗಂಡ, ಹೆಂಡತಿ ಅಕಾಡಲ್ಲಿ ಇಳಿದಾಗ ಗಂಡ ಸಿಕ್ಕಿಬಿದ್ದದ್ದು ಎಲ್ಲಿ ಗೊತ್ತೇ??

Comments are closed.