Kannada News: ಮತ್ತೆ ಮುನ್ನಲೆಗೆ ಬಂದ ಮೀರಾ – ಅನಿ ಜೋಡಿ. ಮೀರಾ ಕಂಡ್ರೆ ಭಯನೇ ಆದರೇ.. ಎಂದು ರಾಗ ಎಳೆದು ಅನಿ ಹೇಳಿದ್ದೇನು ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯ ನಮ್ಮನೆ ಯುವರಾಣಿ (Nammane Yuvarani) ಧಾರವಾಹಿ ಮುಗಿದು ಹೋಗಿದ್ದರು ಸಹ ಈಗಲೂ ಜನರು ಈ ಧಾರವಾಹಿಯನ್ನು ಮರೆತಿಲ್ಲ. ಅನಿಕೇತ್ ಮೀರಾ ಅಂದ್ರೆ ಈಗಲೂ ಎಲ್ಲರ ಫೇವರೆಟ್ ಜೋಡಿ. ಇವರಿಬ್ಬರನ್ನು ನೋಡುವ ಸಲುವಾಗಿಯೇ ಕಿರುತೆರೆ ವೀಕ್ಷಕರು ನಮ್ಮನೆ ಯುವರಾಣಿ ಧಾರವಾಹಿ ನೋಡುತ್ತಿದ್ದರು. ಇವರಿಬ್ಬರ ಕೋಳಿಜಗಳ ಪ್ರೀತಿ ಎಲ್ಲವನ್ನೂ ಮೆಚ್ಚಿಕೊಂಡಿದ್ದರು. ಗಂಡ ಹೆಂಡತಿಯಾಗಿ ಇವರಿಬ್ಬರ ಅಭಿನಯ ಬಹಳ ಚೆನ್ನಾಗಿತ್ತು. ಈಗ ಧಾರವಾಹಿ ಮುಗಿದಿದ್ದರು ಜನರು ಇವರ ಪಾತ್ರಗಳನ್ನು ಮರೆತಿಲ್ಲ.

ಅನಿಕೇತ್ ಮೀರಾ ಪಾತ್ರ ಇಂದಿಗೂ ಎಲ್ಲರ ಫೇವರೆಟ್, ಇವರಿಬ್ಬರನ್ನು ಮತ್ತೊಮ್ಮೆ ಕಿರುತೆರೆಯಲ್ಲಿ ಜೋಡಿಯಾಗಿ ನೋಡುವ ಆಸೆ ಅಭಿಮಾನಿಗಳದ್ದು, ಆದರೆ ಮೀರಾ ಪಾತ್ರ ಮಾಡುತ್ತಿದ್ದ ಅಂಕಿತಾ (Ankita Amar) ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಅನಿಕೇತ್ ಪಾತ್ರ ಮಾಡುತ್ತಿದ್ದ ದೀಪಕ್ ಗೌಡ (Deepak Gowda) ಅವರು ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರವಾಹಿಯಲ್ಲಿ ಅಮ್ಮ ತುಳಸಿಯ ಮುದ್ದಿನ ಮಗ ಸಮರ್ಥ್ ಪಾತ್ರದಲ್ಲಿ ದೀಪಕ್ ನಟಿಸುತ್ತಿದ್ದಾರೆ, ತುಳಸಿ ಪಾತ್ರದಲ್ಲಿ ಚಂದನವನದ ಖ್ಯಾತ ನಟಿ ಸುಧಾರಾಣಿ (Sudharani) ಅವರು ಅಭಿನಯಿಸುತ್ತಿದ್ದಾರೆ. ಸಮರ್ಥ್ ಸಿರಿ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಬೇಕು ಎಂದು ಬಯಸಿದ್ದಾನೆ. ಸಿರಿ ಮನೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಸಮರ್ಥ್ ತನ್ನ ಮನೆಯಲ್ಲಿ ಹೇಳಲು ಭಯ ಪಡುತ್ತಿದ್ದ. ಇದನ್ನು ಓದಿ..Kannada News: ಪ್ರೀತಿಸುವುದು ಸುಲಭ, ಆದರೆ ಮದುವೆಯಾಗುವುದು ಕಷ್ಟ. ಮನೆ ಬಿಟ್ಟು ಬಂದಿದ್ದ ಜೋಡಿಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?

kannada news ankitha deepak | Kannada News: ಮತ್ತೆ ಮುನ್ನಲೆಗೆ ಬಂದ ಮೀರಾ - ಅನಿ ಜೋಡಿ. ಮೀರಾ ಕಂಡ್ರೆ ಭಯನೇ ಆದರೇ.. ಎಂದು ರಾಗ ಎಳೆದು ಅನಿ ಹೇಳಿದ್ದೇನು ಗೊತ್ತೇ??
Kannada News: ಮತ್ತೆ ಮುನ್ನಲೆಗೆ ಬಂದ ಮೀರಾ - ಅನಿ ಜೋಡಿ. ಮೀರಾ ಕಂಡ್ರೆ ಭಯನೇ ಆದರೇ.. ಎಂದು ರಾಗ ಎಳೆದು ಅನಿ ಹೇಳಿದ್ದೇನು ಗೊತ್ತೇ?? 2

ಸಿರಿ ಸಮರ್ಥ್ ಮನೆಗೆ ಬಂದಾಗ, ಸಿರಿಗೆ ಪರಿಚಯವಾಗಿ ಬಾಂಧವ್ಯ ಬೆಳೆಸಿಕೊಂಡಿದ್ದ ತುಳಸಿ ಅಮ್ಮಾನೇ ಸಮರ್ಥ್ ಅಮ್ಮ ಎಂದು ಗೊತ್ತಾಗಿ, ಸಿರಿ ಸಂತೋಷಗೊಂಡಿದ್ದಾಳೆ, ತುಳಸಿ ಕೂಡ ಸಿರಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿ ತುಳಸಿ ಅವರ ಮಾವ ಒಪ್ಪುವುದು ಬಾಕಿ ಇದ್ದು, ತಾತ ಮದುವೆಗೆ ಒಪ್ಪದ ಕಾರಣ, ತಾನೇ ಮದುವೆ ಆಗುತ್ತಿದ್ದಾನೇ ಸಮರ್ಥ್. ಶ್ರೀರಸ್ತು ಶುಭಮಸ್ತು ಕಥೆ ಹೀಗೆ ಸಗುತ್ತಿರುವಾಗ, ಅನಿಕೇತ್ ಮತ್ತು ಮೀರಾ ಮತ್ತೊಮ್ಮೆ ಭೇಟಿಯಾಗಿದ್ದು, ಅಂಕಿತಾ ದೀಪಕ್ ಅವರನ್ನು ರೇಗಿಸಿದ್ದಾರೆ, ಸಿರಿ ಅಂದ್ರೆ ಪಂಚ ಪ್ರಾಣಾನ ಎಂದು ಕೇಳಿದ್ದಕ್ಕೆ, ದೀಪಕ್ ನಿನ್ನಷ್ಟು ಯಾರು ಇಲ್ಲ ಬಿಡು ಎಂದಿದ್ದಾರೆ, ಈ ಮಾತು ಕೇಳಿ ಅಂಕಿತಾ ನಕ್ಕಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Cricket News: ಸೂರ್ಯಕುಮಾರ್ ಯಾದವ್ ರವರಿಗೆ ಆಸ್ಟ್ರೇಲಿಯಾ ಲೀಗ್ ನಲ್ಲಿ ಅವಕಾಶ ಸಿಗಲ್ಲ ಎಂದ ಮ್ಯಾಕ್ಸ್ ವೆಲ್. ಕಾರಣ ಏನು ಅಂತೇ ಗೊತ್ತೇ?

Comments are closed.