Kannada News: ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವೈಷ್ಣವಿ ತಾಯಿ ! ವಿಧ್ಯಾಭರಣ್ ಮತ್ತೊಂದು ಮುಖ ಬಟಾ ಬಯಲು

Kannada News: ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಹಾಗೂ ನಟ ವಿಧ್ಯಾಭರಣ ನಡುವಿನ ಮದುವೆ ಮುರಿದು ಬಿದ್ದಿರುವ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ವತಃ ನಟಿ ವೈಷ್ಣವಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡು ತನ್ನ ಈ ಸಂಬಂಧ ಮುರಿದುಬಿದ್ದಿರುವುದಾಗಿ ಈ ಬಗ್ಗೆ ಅವರು ಹೆಚ್ಚಾಗಿ ಏನು ಮಾತನಾಡಲು ಇಷ್ಟ ಪಡುತ್ತಿಲ್ಲ. ಹಾಗೆ i ವಿಷಯವನ್ನು ಎಲ್ಲರೂ ಇಲ್ಲಿಗೆ ಬಿಟ್ಟು ಬಿಡಿ ಎಂದು ಪೋಸ್ಟ್ ಮಾಡಿದ್ದರು. ಆದರೂ ಸಹ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತಣ್ಣಗಾಗಿಲ್ಲ.

ಇನ್ನು ಇದೀಗ ವೈಷ್ಣವಿ ಅವರ ಪೋಷಕರು ಮಾಧ್ಯಮಗಳ ಬಳಿ ಈ ವಿಷಯದ ಕುರಿತು ಮಾತನಾಡಿದ್ದು, ಸದ್ಯ ಎಲ್ಲಾ ಗೊಂದಲಗಳಿಗೂ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ವೈಷ್ಣವಿ ತಾಯಿ ಭಾನುರವಿ ಕುಮಾರ್ ಅವರು ಮಾತನಾಡಿದ್ದು, ಚಾಕ್ಲೇಟ್ ಬಾಯ್ ಎಂಬ ಸಿನಿಮಾದಲ್ಲಿ ವೈಷ್ಣವಿ ಹಾಗೂ ವಿದ್ಯಾಭರಣ್ ನಟಿಸುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಆ ಸಿನಿಮಾದ ಕೆಲಸಗಳು ನಿಂತು ಹೋಯಿತು. ನಂತರ ವೈಷ್ಣವಿ ಬಿಗ್ ಬಾಸ್ ಗೆ ಹೋದರು. ಈ ವೇಳೆ ವಿದ್ಯಾಭರಣ ಅವರ ಕುಟುಂಬದವರು ಸಹ ವೈಷ್ಣವಿಗೆ ವಿಶ್ ಮಾಡಿದ್ದರು. ಇದನ್ನು ಓದಿ.. Cricket News: ಸೂರ್ಯಕುಮಾರ್ ಯಾದವ್ ರವರಿಗೆ ಆಸ್ಟ್ರೇಲಿಯಾ ಲೀಗ್ ನಲ್ಲಿ ಅವಕಾಶ ಸಿಗಲ್ಲ ಎಂದ ಮ್ಯಾಕ್ಸ್ ವೆಲ್. ಕಾರಣ ಏನು ಅಂತೇ ಗೊತ್ತೇ?

kannada news vaishnavi mother | Kannada News: ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವೈಷ್ಣವಿ ತಾಯಿ ! ವಿಧ್ಯಾಭರಣ್ ಮತ್ತೊಂದು ಮುಖ ಬಟಾ ಬಯಲು
Kannada News: ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವೈಷ್ಣವಿ ತಾಯಿ ! ವಿಧ್ಯಾಭರಣ್ ಮತ್ತೊಂದು ಮುಖ ಬಟಾ ಬಯಲು 2

ನಂತರ ಒಂದು ದಿನ ವಿದ್ಯಾಭರಣ ಅವರ ತಾಯಿ ನನಗೆ ಕರೆ ಮಾಡಿ ವೈಷ್ಣವಿ ಅವರಿಗೆ ತುಂಬಾ ಇಷ್ಟ ಆಗಿದ್ದಾಳೆ ಎಂದು ಹೇಳಿದರು. ನಾವು ಸಹ ಎಲ್ಲಾ ಕಡೆ ವಿಚಾರಿಸಿ ನವೆಂಬರ್ 11ರಂದು ಹೆಣ್ಣು ನೋಡುವ ಶಾಸ್ತ್ರ ಮಾಡಿದವು, ಮುಂದಿನ ಭಾನುವಾರ ನಾವು ಅವರ ಮನೆಗೆ ಹೋಗಬೇಕಿತ್ತು. ಈ ವೇಳೆ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಒಂದು ಹುಡುಗಿ ನನಗೆ ಕರೆ ಮಾಡಿ ವಿದ್ಯಾಭರನ್ ಮೇಲೆ ಆರೋಪ ಮಾಡಲು ಮುಂದಾದರು.

ಅಲ್ಲದೆ ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಸಹ ಹರಿದಾಡುತ್ತಿದೆ. ಇನ್ನು ವಿಧ್ಯಾಭರಣ್ ಅವರ ತಾಯಿ ನಮಗೆ ಯಾವುದಕ್ಕೂ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ, ಇದು ಯಾರು ನಮ್ಮ ಮೇಲೆ ಆಗದೆ ಇರುವವರು ಮಾಡುತ್ತಿರುವ ಕೆಲಸ ಮುಂದೇನಾಗುತ್ತದೆ ಎಂದು ನೀವು ಬೇಕಾದರೆ ನೋಡಿ ಎಂದು ವಾಯ್ಸ್ ನೋಟ್ ಸಹ ಕಳಿಸಿದ್ದರು. ಸದ್ಯಕ್ಕೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯ ನಮ್ಮ ಮಗಳು ಇದಕ್ಕೆ ಬ್ರೇಕ್ ಹಾಕಿದ್ದಾಳೆ, ಮುಂದೇನಾಗುತ್ತದೆ ಎಂದು ನಾವು ಸಹ ಕಾಯುತ್ತಿದ್ದೇವೆ ಎಂದಿದ್ದಾರೆ. ಇದನ್ನು ಓದಿ.. Kannada News: ಮತ್ತೆ ಮುನ್ನಲೆಗೆ ಬಂದ ಮೀರಾ – ಅನಿ ಜೋಡಿ. ಮೀರಾ ಕಂಡ್ರೆ ಭಯನೇ ಆದರೇ.. ಎಂದು ರಾಗ ಎಳೆದು ಅನಿ ಹೇಳಿದ್ದೇನು ಗೊತ್ತೇ??

Comments are closed.