Kannada News: ದೇಶದೆಲ್ಲೆಡೆ ಗಡ ಗಡ ಸದ್ದು ಮಾಡುತ್ತದೆ ಅಂದುಕೊಂಡಿದ್ದ ಕ್ರಾಂತಿ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ??

Kannada News: ನಟ ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ ಚಿತ್ರವು ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಅಪಾರ ನಿರೀಕ್ಷೆ ಉಂಟಾಗಿತ್ತು. ಬರೋಬ್ಬರಿ 22 ತಿಂಗಳ ನಂತರ ತಮ್ಮ ಮೆಚ್ಚಿನ ನಟನ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಹೆಚ್ಚು ಕಡಿಮೆ ಎರಡು ವರ್ಷಗಳ ಅಂತರದಲ್ಲಿ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೊಂಡಿದೆ. ಅಲ್ಲದೆ ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದ್ದ ಕ್ರಾಂತಿ ಸಿನಿಮಾ ವರ್ಷದಿಂದ ಪ್ರಚಾರದ ಕಾರಣಕ್ಕಾಗಿಯೇ ಸದ್ದು ಮಾಡಿತ್ತು. ಇನ್ನು ಇಂದು ಬಿಡುಗಡೆಗೊಂಡಿರುವ ಈ ಚಿತ್ರ ಮೊದಲ ದಿನ ಎಷ್ಟು ಗಳಿಕೆ ಕಂಡಿದೆ ಎನ್ನುವ ಚರ್ಚೆ ಜೋರಾಗಿದೆ. ಅಂದ ಹಾಗೆ ಕ್ರಾಂತಿ ಬಿಡುಗಡೆಗೊಂಡ ಮೊದಲ ದಿನ ಒಟ್ಟಾರೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಲೂಟಿ ಮಾಡಿದೆ ಎನ್ನುವುದರ ವಿವರ ಇಲ್ಲಿದೆ.

ನಟ ದರ್ಶನ್ ಅವರನ್ನು ಮಾಧ್ಯಮದವರು ಬ್ಯಾನ್ ಮಾಡಿದ ಬಳಿಕ ಅವರ ಚಿತ್ರವನ್ನು ತಾವೇ ಪ್ರಚಾರ ಮಾಡುವುದಾಗಿ ಅಭಿಮಾನಿಗಳೇ ಪ್ರಚಾರ ಮಾಡತೊಡಗಿದ್ದರು. ರಾಜ್ಯದ್ಯಂತ ಈ ಮೊದಲು ಬೇರೆ ಯಾವುದೇ ಚಿತ್ರಗಳಿಗೂ ಸಿಗದ ವಿಭಿನ್ನ ರೀತಿಯ ಪ್ರಚಾರ ಕ್ರಾಂತಿ ಚಿತ್ರಕ್ಕೆ ಸಿಕ್ಕಿತು ಎಂದು ಹೇಳಬಹುದು. ಇನ್ನು ಬಹಳ ಚಾಲೆಂಜಿಂಗ್ ಆಗಿ ಈ ಚಿತ್ರವನ್ನು ಅಭಿಮಾನಿಗಳು ತೆಗೆದುಕೊಂಡಿದ್ದರು. ಅಂದಹಾಗೆ ಇದೆ ಮೊದಲ ಬಾರಿಗೆ ನಟ ದರ್ಶನವರು ಕೂಡ ಸಾಕಷ್ಟು ಸಕ್ರಿಯವಾಗಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಲ್ಲದೆ ವಿವಿಧ ಯೂಟ್ಯೂಬ್ ವಾಹಿನಿಗಳಿಗೆ ಅವರು ಸಂದರ್ಶನ ನೀಡಿದ್ದರು. ಚಿತ್ರದ ಒಂದೊಂದು ಹಾಡನ್ನು ಒಂದೊಂದು ಭಾಗದಲ್ಲಿ ಅತ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಇದನ್ನು ಓದಿ..Kannada News: ಕ್ರಾಂತಿ ಬಿಡುಗಡೆಗೆ ಕೆಲವೇ ಕ್ಷಣಗಳು ಇರುವಾಗ ಚಪ್ಪಲಿ ಎಸೆದವರಿಗೆ ಖಡಕ್ ವಾರ್ನಿಂಗ್ ಜೊತೆ ಷಾಕಿಂಗ್ ವಿಚಾರ ಬಯಲಿಗೆಳೆದ ದರ್ಶನ್, ಹಿಂದೆ ಇರುವ ದೊಡ್ಡವರು ಯಾರು??

kannada news kranti movie first day collection | Kannada News: ದೇಶದೆಲ್ಲೆಡೆ ಗಡ ಗಡ ಸದ್ದು ಮಾಡುತ್ತದೆ ಅಂದುಕೊಂಡಿದ್ದ ಕ್ರಾಂತಿ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ??
Kannada News: ದೇಶದೆಲ್ಲೆಡೆ ಗಡ ಗಡ ಸದ್ದು ಮಾಡುತ್ತದೆ ಅಂದುಕೊಂಡಿದ್ದ ಕ್ರಾಂತಿ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ?? 2

ಇನ್ನೂ ಚಿತ್ರವು ಇಂದು ಗಣರಾಜ್ಯೋತ್ಸವದ ಅಂಗವಾಗಿ ಭರ್ಜರಿಯಾಗಿ ತೆರೆಕಂಡಿದೆ. ಸರ್ಕಾರಿ ಶಾಲೆಯ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುವ ಖಳನಾಯಕರ ವಿರುದ್ಧ ಹೋರಾಡುವ ನಾಯಕನ ಕಥೆಯನ್ನು ಕ್ರಾಂತಿ ಚಿತ್ರ ಒಳಗೊಂಡಿದೆ. ಇದರಲ್ಲಿ ಸರ್ಕಾರಿ ಶಾಲೆಯ ವ್ಯವಸ್ಥೆ, ಅಲ್ಲಿನ ಸೌಕರ್ಯಗಳು, ಶಿಕ್ಷಣ ಇತ್ಯಾದಿ ವಿಷಯಗಳ ಕುರಿತಾಗಿ ಬೆಳಕು ಚೆಲುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಒಂದು ವಿಭಿನ್ನ ರೀತಿಯ ಸಂದೇಶ ನೀಡುವ ಚಿತ್ರ ಇದಾಗಿದ್ದು ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ವ್ಯಕ್ತವಾಗಿತ್ತು. ಅಲ್ಲದೆ ಇಂದು ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆಗೊಂಡಿದ್ದ ಚಿತ್ರ ಒಟ್ಟಾರೆಯಾಗಿ ಎಷ್ಟು ಗಳಿಕೆ ಕಂಡಿದೆ ಎನ್ನುವ ಕುತೂಹಲ ವ್ಯಕ್ತವಾಗಿದೆ. ಇಂದು ಸರ್ಕಾರಿ ರಜಾ ದಿನ ಆಗಿದ್ದರಿಂದಾಗಿಯೂ ಕೂಡ ಚಿತ್ರ ನೋಡಲು ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಆಗಮಿಸಿದ್ದರು ಎಂದು ಹೇಳಬಹುದು. ಹೀಗಾಗಿ ಚಿತ್ರ ದೊಡ್ಡ ಮಟ್ಟದ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನವೇ ಕ್ರಾಂತಿ ಚಿತ್ರವು ಬರೋಬ್ಬರಿ 12 ಕೋಟಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಪಾನ್ ಮಸಾಲಾ ಮಾದಲ್ಲು ಅಂದು ಪೆಪ್ಸಿ ಜಾಹೀರಾತು ಒಪ್ಪಿಕೊಂಡ ನಟ ಯಶ್ ಪಡೆದ ಸಂಭಾವನೆ ಕೇಳಿದರೆ, ಅದಕ್ಕಾದರೂ ಪಪುಸಿ ಕುಡಿಯೋಣ ಅಂತೀರಾ. ಎಷ್ಟು ಕೋಟಿ ಗೊತ್ತೇ??

Comments are closed.