Kannada News: ಪಾನ್ ಮಸಾಲಾ ಮಾದಲ್ಲು ಅಂದು ಪೆಪ್ಸಿ ಜಾಹೀರಾತು ಒಪ್ಪಿಕೊಂಡ ನಟ ಯಶ್ ಪಡೆದ ಸಂಭಾವನೆ ಕೇಳಿದರೆ, ಅದಕ್ಕಾದರೂ ಪಪುಸಿ ಕುಡಿಯೋಣ ಅಂತೀರಾ. ಎಷ್ಟು ಕೋಟಿ ಗೊತ್ತೇ??

Kannada news: ನಟ ಯಶ್ (Yash) ಕೆಜಿಎಫ್ (KGF) ಚಿತ್ರದ ನಂತರ ಕೇವಲ ಸ್ಯಾಂಡಲ್ವುಡ್ ನಟನಾಗಿ ಮಾತ್ರವಲ್ಲದೆ ಭಾರತದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಭಾರತದಲ್ಲೇ ದೊಡ್ಡ ಅಭಿಮಾನಿಗಳ ವರ್ಗವಿದೆ. ಪಾನ್ ಇಂಡಿಯಾ ಮಟ್ಟದ ಸ್ಟಾರ್ ಆಗಿರುವ ನಟ ಯಶ್ ಅವರಿಗೆ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಎರಡು ಕಡೆ ಅಪಾರ ಬೇಡಿಕೆ ಇದೆ. ಕೆಜಿಎಫ್ 2 ಚಿತ್ರ ಬಿಡುಗಡೆಗೊಂಡು ತಿಂಗಳುಗಳು ಕಳೆದರೂ ಕೂಡ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಮಾಹಿತಿ ಇಲ್ಲ. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಹಿಂದೆ ಯಶ್ ಅವರ ಕಡೆಯಿಂದ ಜನವರಿ 24 ಬಿಗ್ ಅನೌನ್ಸ್ಮೆಂಟ್ ಒಂದು ಹೊರಬೀಳಲಿದೆ ಎಂದು ವರದಿಯಾಗಿತ್ತು. ಇದು ಅವರ ಹೊಸ ಸಿನಿಮಾದ ಕುರಿತ ಮಾಹಿತಿ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಇದೀಗ ಪೆಪ್ಸಿ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಅವರು ಆಯ್ಕೆಯಾಗಿರುವ ಸುದ್ದಿಯನ್ನು ಘೋಷಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್ ಚಿತ್ರ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಭಾರತದಾತ್ಯಂತ ಅಭಿಮಾನಿಗಳ ವರ್ಗ ಸೇರಿದಂತೆ ಭಾರತದ ಸೂಪರ್ ಸ್ಟಾರ್ ಗಳು ಅವರಿಗೆ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಭಾರತದ ದೊಡ್ಡ ದೊಡ್ಡ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತು ನೀಡಲು ಯಶ್ ಅವರಿಗೆ ನಿರಂತರವಾಗಿ ಹಲವಾರು ಆಫರ್ ಗಳು ಬರುತ್ತಲೇ ಇವೆ. ರಾಷ್ಟ್ರ ಮಟ್ಟದ ಉತ್ಪನ್ನಗಳ ಜಾಹೀರಾತು ನೀಡಲು ಇಷ್ಟು ಬೇಡಿಕೆ ಸೃಷ್ಟಿಸಿರುವ ಕನ್ನಡದ ನಟರಲ್ಲಿ ಯಶ್ ರವರೆ ಮೊದಲಿಗರು ಎನ್ನಬಹುದು. ಅಂದಹಾಗೆ ನಟ ಯಶ್ ಈ ಹಿಂದೆ ಪಾನ್ ಮಸಾಲ ಜಾಹೀರಾತನ್ನು ನಿರಾಕರಿಸಿದ್ದರು. ಭಾರಿ ದೊಡ್ಡ ಮೊತ್ತದ ಸಂಭಾವನೆ ನೀಡಿ ರಾಯಭಾರಿಯಾಗಿ ಅವರನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿ ಸಂಸ್ಥೆ ಇತ್ತಾದರೂ ಈ ಅವಕಾಶವನ್ನು ಅವರು ಕೈ ಚೆಲ್ಲಿದ್ದರು. ಇದನ್ನು ಓದಿ..Kannada News: ಇತ್ತೀಚಿಗೆ ಬಾರಿ ಸದ್ದು ಮಾಡುತ್ತಿರುವ ಶ್ರೀ ರಸ್ತು ಶುಭಮಸ್ತು ವಿಲ್ಲನ್ ಶಾರ್ವರಿ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಗೊತ್ತೇ??

kannada news yash in pepsi ads | Kannada News: ಪಾನ್ ಮಸಾಲಾ ಮಾದಲ್ಲು ಅಂದು ಪೆಪ್ಸಿ ಜಾಹೀರಾತು ಒಪ್ಪಿಕೊಂಡ ನಟ ಯಶ್ ಪಡೆದ ಸಂಭಾವನೆ ಕೇಳಿದರೆ, ಅದಕ್ಕಾದರೂ ಪಪುಸಿ ಕುಡಿಯೋಣ ಅಂತೀರಾ. ಎಷ್ಟು ಕೋಟಿ ಗೊತ್ತೇ??
Kannada News: ಪಾನ್ ಮಸಾಲಾ ಮಾದಲ್ಲು ಅಂದು ಪೆಪ್ಸಿ ಜಾಹೀರಾತು ಒಪ್ಪಿಕೊಂಡ ನಟ ಯಶ್ ಪಡೆದ ಸಂಭಾವನೆ ಕೇಳಿದರೆ, ಅದಕ್ಕಾದರೂ ಪಪುಸಿ ಕುಡಿಯೋಣ ಅಂತೀರಾ. ಎಷ್ಟು ಕೋಟಿ ಗೊತ್ತೇ?? 2

ಸದ್ಯ ನನಗೆ ಮೊದಲಿಗಿಂತಲೂ ಹೆಚ್ಚಿನ ಅಭಿಮಾನಿಗಳ ವರ್ಗವಿದೆ. ಅವರು ನನ್ನನ್ನು ಅನುಕರಿಸುತ್ತಾರೆ. ಹಾಗಾಗಿ ನನ್ನ ಅಭಿಮಾನಿಗಳಿಗೆ ನಾನು ಒಳ್ಳೆಯ ಮಾತುಗಳನ್ನು ಹೇಳಬೇಕು ಮತ್ತು ಒಳ್ಳೆಯ ಸಂದೇಶಗಳನ್ನು ನೀಡಬೇಕು ಎಂದಿದ್ದರು. ಪಾನ್ ಮಸಾಲ ಆರೋಗ್ಯಕ್ಕೆ ಹಾನಿಕಾರಕ. ಈ ಉತ್ಪನ್ನದ ರಾಯಭಾರಿಯಾಗಿ ನಾನು ನನ್ನ ಅಭಿಮಾನಿಗಳಿಗೆ ಎಂತಹ ಸಂದೇಶ ಕೊಡಲಿ ಎಂದು ಹೇಳಿದ ನಟ ಯಶ್ ನೈತಿಕ ಹೊಣೆಗಾರಿಕೆ ಹೊತ್ತು ತಮ್ಮ ಅಭಿಮಾನಿಗಳ ಹಿತ ದೃಷ್ಟಿಯಿಂದಾಗಿ ಪಾನ್ ಮಸಾಲ ಜಾಹೀರಾತನ್ನು ನಿರಾಕರಿಸಿದ್ದರು. ಇದೀಗ ತಾವು ಪೆಪ್ಸಿ ಇಂಡಿಯಾ (Pepsi India) ಬ್ರಾಂಡ್ ನ ರಾಯಭಾರಿಯಾಗಿ ಆಯ್ಕೆಯಾಗಿರುವುದರ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ದೊಡ್ಡ ಉತ್ಪನ್ನ ಸಂಸ್ಥೆಯಾದ ಪೆಪ್ಸಿಗೆ ರಾಯಭಾರಿಯಾಗಿ ಇದೆ ಮೊದಲ ಬಾರಿಗೆ ಕನ್ನಡದ ನಟರನ್ನು ಆಯ್ಕೆ ಮಾಡಲಾಗಿದೆ. ಇದುವರೆಗೆ ಕೇವಲ ಕ್ರಿಕೆಟ್ ತಾರೆಯರು ಮತ್ತು ಬಾಲಿವುಡ್ ಸಿನಿ ತಾರೆಗಳನ್ನು ಮಾತ್ರ ರಾಯಭಾರಿಗಾಗಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇಂತಹದೊಂದು ದೊಡ್ಡ ಉತ್ಪನ್ನಕ್ಕೆ ಕನ್ನಡದ ನಟ ಯಶ್ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಅಲ್ಲದೆ ಈ ಉತ್ಪನ್ನದ ರಾಯಭಾರಿಯಾಗಿ ಜಾಹೀರಾತಿನಲ್ಲಿ ನಟಿಸಲು ಅವರು ಬಾರಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ.. Kannada News: ಹಣಕ್ಕಾಗಿ ಅಡ್ಡ ದಾರಿ ಹಿಡಿದು, ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ ನಟಿ ಈಗ ಏನಾಗಿದ್ದಾರೆ ಗೊತ್ತೇ? ಇವೆಲ್ಲ ಎಲ್ಲಿಂದ ಬರ್ತಾರೆ.?

Comments are closed.