Kannada News: ಉತ್ತಮ ಆರಂಭ ಪಡೆದ ಕ್ರಾಂತಿಗೆ 24 ಗಂಟೆಯಲ್ಲಿಯೇ ಬಿಗ್ ಶಾಕ್: ದರ್ಶನ್ ಗೆ ಕಂಡು ಕೇಳರಿಯದ ಶಾಕ್. ಏನಾಗಿದೆ ಗೊತ್ತೇ? ಯಾರೋ ಇವೆಲ್ಲ??

Kannada News: ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದ ನಟ ದರ್ಶನ್ (Darshan) ಅವರ ಕ್ರಾಂತಿ (Kranti) ಚಿತ್ರವು ನೆನ್ನೆ ಬಿಡುಗಡೆಯಾಗಿದೆ. ಸರ್ಕಾರಿ ಶಾಲೆಯ ಭೂಮಿಯನ್ನು ಕಬ್ಬಳಿಸಲು ಪ್ರಯತ್ನಿಸುವ ವ್ಯಕ್ತಿಗಳ ವಿರುದ್ಧ ಹೋರಾಡುವ ನಾಯಕನ ಕಥೆಯನ್ನು ಕ್ರಾಂತಿ ಚಿತ್ರ ಒಳಗೊಂಡಿದೆ. ಒಂದು ವಿಶೇಷ ರೀತಿಯ ಸಂದೇಶ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ನೆನ್ನೆ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ರಜಾ ದಿನ ಆಗಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಚಿತ್ರವನ್ನು ನೋಡಿದ್ದಾರೆ. ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ನೂಕುನುಗ್ಗಲು ಉಂಟಾಗುವ ಮಟ್ಟಿಗೆ ಅಭಿಮಾನಿಗಳು ನೆರೆದಿದ್ದರೂ ಎಂದೆ ಹೇಳಬಹುದು. ಆದರೆ ಬಿಡುಗಡೆಗೊಂಡ ಒಂದೇ ದಿನಕ್ಕೆ ಕ್ರಾಂತಿ ಚಿತ್ರಕ್ಕೆ ಮತ್ತು ನಟ ದರ್ಶನ್ ಅವರಿಗೆ ಬಿಗ್ ಶಾಕ್ ಒಂದು ಎದುರಾಗಿದೆ.

ಒಂದು ರೀತಿಯಾಗಿ ಕ್ರಾಂತಿ ಚಿತ್ರವು ನಟ ದರ್ಶನ್ ಅವರ ಹಿಂದಿನ ಎಲ್ಲ ಚಿತ್ರಗಳಿಗಿಂತ ಸಾಕಷ್ಟು ಕಾರಣಗಳಿಗೆ ವಿಶೇಷವಾದದ್ದು ಎಂದೆ ಹೇಳಬಹುದು. ದರ್ಶನ್ ಅವರ ಅಭಿಮಾನಿಗಳು ಇದೇ ಮೊದಲ ಬಾರಿಗೆ ಅವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಹೆಚ್ಚಿನ ಶ್ರಮವಹಿಸಿ ಕ್ರಾಂತಿ ಚಿತ್ರವನ್ನು ಪ್ರಚಾರ ಮಾಡಿದ್ದಾರೆ. ದರ್ಶನ್ ಅವರನ್ನು ಮಾಧ್ಯಮದವರು ಬ್ಯಾನ್ ಮಾಡಿದ ಬಳಿಕ ಈ ಚಿತ್ರವನ್ನು ತಾವೇ ಸ್ವತಃ ಪ್ರಚಾರ ಮಾಡುವುದಾಗಿ ದರ್ಶನ್ ಅಭಿಮಾನಿಗಳು ತಿಳಿಸಿದರು. ಅದರಂತೆಯೇ ಬಹಳ ವಿಶಿಷ್ಟ ರೀತಿಯಲ್ಲಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಕ್ರಾಂತಿ ಚಿತ್ರದ ಪ್ರಚಾರ ಅಬ್ಬರದಿಂದ ನಡೆಯಿತು. ಎಲ್ಲಾ ಬಗೆಯ ಪ್ರಚಾರದ ನಂತರ ಚಿತ್ರ ಭರ್ಜರಿಯಾಗಿ ನೆನ್ನೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಈ ನಡುವೆ ಚಿತ್ರತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ಇದನ್ನು ಓದಿ..Kannada News: ದೇಶದೆಲ್ಲೆಡೆ ಗಡ ಗಡ ಸದ್ದು ಮಾಡುತ್ತದೆ ಅಂದುಕೊಂಡಿದ್ದ ಕ್ರಾಂತಿ ಸಿನಿಮಾದ ಮೊದಲ ದಿನದ ಅಸಲಿ ಕಲೆಕ್ಷನ್ ಎಷ್ಟು ಗೊತ್ತೇ??

kannada news kranti movie release updates | Kannada News: ಉತ್ತಮ ಆರಂಭ ಪಡೆದ ಕ್ರಾಂತಿಗೆ 24 ಗಂಟೆಯಲ್ಲಿಯೇ ಬಿಗ್ ಶಾಕ್: ದರ್ಶನ್ ಗೆ ಕಂಡು ಕೇಳರಿಯದ ಶಾಕ್. ಏನಾಗಿದೆ ಗೊತ್ತೇ? ಯಾರೋ ಇವೆಲ್ಲ??
Kannada News: ಉತ್ತಮ ಆರಂಭ ಪಡೆದ ಕ್ರಾಂತಿಗೆ 24 ಗಂಟೆಯಲ್ಲಿಯೇ ಬಿಗ್ ಶಾಕ್: ದರ್ಶನ್ ಗೆ ಕಂಡು ಕೇಳರಿಯದ ಶಾಕ್. ಏನಾಗಿದೆ ಗೊತ್ತೇ? ಯಾರೋ ಇವೆಲ್ಲ?? 2

ಬರೋಬರಿ 22 ತಿಂಗಳುಗಳ ನಂತರ ನಟ ದರ್ಶನ್ ಅವರ ಚಿತ್ರವೊಂದು ತೆರೆಕಂಡಿದೆ. ಸರಿಸುಮಾರು ಎರಡು ವರ್ಷಗಳ ನಂತರ ತಮ್ಮ ಮೆಚ್ಚಿನ ನಟನ ಹೊಸ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಅದರಂತೆ ಕ್ರಾಂತಿ ಚಿತ್ರ ನಿನ್ನೆ ಬಿಡುಗಡೆಗೊಂಡು ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ. ಕ್ರಾಂತಿ ಚಿತ್ರವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಲ್ಲದೆ ಚಿತ್ರದ ಬೊಂಬೆ ಬೊಂಬೆ, ಪುಷ್ಪವತಿ, ಧರಣಿ ಇತ್ಯಾದಿ ಹಾಡುಗಳು ಸಹ ಕೇಳುಗರ ಮನ ಗೆದ್ದಿದೆ. ಬಹುತೇಕ ಎಲ್ಲೆಡೆ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಅಲ್ಲದೆ ಒಂದೇ ದಿನಕ್ಕೆ ಚಿತ್ರ ಬರೋಬ್ಬರಿ 12 ಕೋಟಿಗಿಂತಲೂ ಹೆಚ್ಚಿನ ಗಳಿಕೆ ಕಂಡಿದೆ ಎಂದು ಸಹ ವರದಿಯಾಗಿದೆ. ಆದರೆ ಇದರ ನಡುವೆ ಚಿತ್ರ ತಂಡ ಕೆಲವು ಆತಂಕಗಳನ್ನು ಎದುರಿಸುತ್ತಿದೆ. ಬಿಡುಗಡೆಗೊಂಡ ಮೊದಲ ದಿನವೇ ಪೈರಸಿ ಮಾಡಲಾದ ಚಿತ್ರವನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಟೆಲಿಗ್ರಾಂನಲ್ಲಿಯೂ ಸಹ ಪೂರ್ತಿ ಚಿತ್ರದ ಲಿಂಕ್ ಲಭ್ಯವಿದ್ದು, ಎಲ್ಲೆಡೆ ಇದನ್ನು ಬಳಸಿ ಪೈರೆಸಿ ಮಾಡಿ ಚಿತ್ರ ವೀಕ್ಷಿಸಲಾಗುತ್ತಿದೆ. ಇದರಿಂದಾಗಿ ಚಿತ್ರದ ಗಳಿಕೆಗೆ ದೊಡ್ಡ ಮೊತ್ತದ ಹೊಡೆತ ಬೀಳಲಿದೆ. ಪೈರಸಿ ಎನ್ನುವುದು ಇದೀಗ ಕ್ರಾಂತಿ ಚಿತ್ರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದನ್ನು ಓದಿ.. Kannada News: ಪಾನ್ ಮಸಾಲಾ ಮಾದಲ್ಲು ಅಂದು ಪೆಪ್ಸಿ ಜಾಹೀರಾತು ಒಪ್ಪಿಕೊಂಡ ನಟ ಯಶ್ ಪಡೆದ ಸಂಭಾವನೆ ಕೇಳಿದರೆ, ಅದಕ್ಕಾದರೂ ಪಪುಸಿ ಕುಡಿಯೋಣ ಅಂತೀರಾ. ಎಷ್ಟು ಕೋಟಿ ಗೊತ್ತೇ??

Comments are closed.