Kannada News: ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಅನ್ನೇ ಮರೆತ ರಶ್ಮಿಕಾ ಕುರಿತು ಇದೀಗ ಪ್ರೋಮೊದ್ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ಪ್ರೋಮೊದ್.

Kannada News: ನಟಿ ರಶ್ಮಿಕ ಮಂದಣ್ಣ (Rashmika Mandanna) ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ನಂತರ ಪರಭಾಷೆಗಳಲ್ಲಿಯೂ ಸದ್ದು ಮಾಡುತ್ತಿರುವ ಬಹುಭಾಷಾ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿಯ (Kirik Party) ಸಾನ್ವಿ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತ್ತು. ಆನಂತರ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿಯಲ್ಲಿಯೂ ಸೇರಿದಂತೆ ಪರಭಾಷೆಗಳಲ್ಲಿಯೂ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸ ತೊಡಗಿದರು. ಆದರೆ ಅವರು ಎಷ್ಟೇ ದೊಡ್ಡ ಮಟ್ಟದ ಹೆಸರು ಗಳಿಸಿದರು ಅವರ ಕೆಲವು ವೈಯಕ್ತಿಕ ಅಭಿಪ್ರಾಯಗಳು, ಮಾತುಗಳು ಮತ್ತು ಕರ್ನಾಟಕದ ಬಗ್ಗೆ ಇರುವ ಅವರ ಧೋರಣೆಯಿಂದ ಸಾಕಷ್ಟು ಟೀಕೆಗಳು ಅವರ ಕುರಿತಾಗಿ ಕೇಳಿ ಬರುತ್ತಲೇ ಇರುತ್ತವೆ. ಇತ್ತೀಚಿಗೆ ತಾವು ನಟಿಸಿದ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಬಗ್ಗೆ ಹೆಸರು ಹೇಳದೆ ಬರೀ ಬೆರಳು ತೋರಿಸಿ ಮಾತನಾಡಿದರ ಕುರಿತಾಗಿ ನಟ ಪ್ರಮೋದ್ ಶೆಟ್ಟಿ (Pramod Shetty) ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕ ಮಂದಣ್ಣ ಇದೀಗ ಬಹು ಭಾಷೆಯ, ಬಹು ಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ಬೇರೆ ಭಾಷೆಯಲ್ಲಿ ಅವರಿಗೆ ಎಷ್ಟೇ ದೊಡ್ಡ ಮಟ್ಟದ ಅಭಿಮಾನಿಗಳಿದ್ದರೂ ಬಹುತೇಕ ಕನ್ನಡಿಗರು ರಶ್ಮಿಕ ಎಂದರೆ ಕೆಂಡ ಕಾರುತ್ತಾರೆ. ಕನ್ನಡ ಭಾಷೆ, ಚಿತ್ರರಂಗದ ಕುರಿತಾಗಿ ಅವರು ನೀಡಿದ ಅದೆಷ್ಟು ಹೇಳಿಕೆಗಳು, ಅವರ ಅಭಿಪ್ರಾಯಗಳು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಲೇ ಇರುತ್ತವೆ. ನಡೆದು ಬಂದ ಹಾದಿಯನ್ನು ಮರೆತವರಿಗೆ ಬದುಕುವ ಅರ್ಹತೆ ಇರುವುದಿಲ್ಲ ಎಂದು ಕನ್ನಡಿಗರು ಪದೇಪದೇ ಟೀಕಿಸುತ್ತಿರುತ್ತಾರೆ. ಯಾರಾದರೂ ಪರಭಾಷೆಯ ನಟಿ ಕರ್ನಾಟಕಕ್ಕೆ ಬಂದು ಬಹಳ ಗೌರವದಿಂದ ನಡೆದುಕೊಂಡರೆ, ಕನ್ನಡವನ್ನು ಮಾತನಾಡುವ ಪ್ರಯತ್ನ ಪಟ್ಟರೆ ಹಾಗೆಲ್ಲ ರಶ್ಮಿಕ ಮಂದಣ್ಣ ಅವರನ್ನು ಜನರು, ನೆಟ್ಟಿಗರು ಟೀಕಿಸುತ್ತಾರೆ. ಇದನ್ನು ಓದಿ.. Kannada Astrology: ನಿಮ್ಮ ಕಷ್ಟ ನಿವಾರಣೆ ಮಾಡಲು ಸೂರ್ಯ ದೇವನೇ ಬರುತ್ತಿದ್ದಾನೆ, ಈ ಐದು ರಾಶಿಗಳಿಗೆ ಹಣ ನೀಡಲಿದ್ದಾನೆ. ಯಾರಿಗೆ ಗೊತ್ತೇ?

kannada news pramod about rashmika | Kannada News: ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಅನ್ನೇ ಮರೆತ ರಶ್ಮಿಕಾ ಕುರಿತು ಇದೀಗ ಪ್ರೋಮೊದ್ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ಪ್ರೋಮೊದ್.
Kannada News: ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಅನ್ನೇ ಮರೆತ ರಶ್ಮಿಕಾ ಕುರಿತು ಇದೀಗ ಪ್ರೋಮೊದ್ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ಪ್ರೋಮೊದ್. 2

ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನ ನೀಡಿದರು. ಆಗ ನಿರೂಪಕಿ ಅವರ ಸಿನಿಮಾ ಜರ್ನಿಯ ಕುರಿತು ಪ್ರಶ್ನೆ ಮಾಡಿದರು. ತಮ್ಮ ಸಿನಿ ಕೆರಿಯರ್ ಹೇಗೆ ಶುರುವಾಯಿತು ಎನ್ನುವ ಪ್ರಶ್ನೆಗೆ ರಶ್ಮಿಕ ಮಂದಣ್ಣ ಉತ್ತರಿಸುತ್ತಾ ನನಗೆ ಒಂದು ಪ್ರೊಡಕ್ಷನ್ ಹೌಸ್ ಇಂದ ಕಾಲ್ ಬಂತು ಎಂದರು. ಆ ಪ್ರೊಡಕ್ಷನ್ ಹೆಸರು ಹೇಳದ ರಶ್ಮಿಕ ಕೇವಲ ಕೈ ಬೆರಳುಗಳನ್ನು ಅಲ್ಲಾಡಿಸುತ್ತಾ ಅದೊಂದು ಪ್ರೊಡಕ್ಷನ್ ಎಂದು ಹೇಳಿದ್ದರು. ಅಲ್ಲದೆ ನನಗೇನು ಸಿನಿಮಾದಲ್ಲಿ ನಟಿಸುವ ಆಸೆ ಇರಲಿಲ್ಲ, ಅವರೇ ಒತ್ತಾಯ ಮಾಡಿದರೂ ಹಾಗಾಗಿ ಒಪ್ಪಿಕೊಳ್ಳಬೇಕಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.

ಈ ವಿಷಯದ ಕುರಿತಾಗಿ ಇದೀಗ ನಟ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. “ನಾನು ಯಾವಾಗಲೂ ರಂಗಭೂಮಿಯಿಂದ ಬಂದೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಏಕೆಂದರೆ ಅದು ನನ್ನ ಬೇರು. ನಾನು ಇಂದು ಏನೆಲ್ಲಾ ಆಗಿದ್ದೇನೋ ಅದಕ್ಕೆ ಕಾರಣ ರಂಗಭೂಮಿ. ಹಾಗಾಗಿ ನಾನು ಅದನ್ನು ಮರೆಯಲಾರೆ. ಯಾರು ಎಲ್ಲಿಂದ ಬಂದರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿರಿಸಿಕೊಳ್ಳಬೇಕು. ಒಂದು ವೇಳೆ ಎಲ್ಲಿಂದ ಬಂದೆ ಒಂದು ಹೇಳಿಕೊಳ್ಳಲು ಅವರಿಗೆ ಸಂಕೋಚವಾಗಬಹುದೇನೋ, ಅಥವಾ ಹೇಳಿಕೊಂಡರೆ ತಾವು ಚಿಕ್ಕವರಾಗಿ ಬಿಡುತ್ತೇವೆ ಎನಿಸಬಹುದು. ಅದು ಅವರವರ ವೈಯಕ್ತಿಕ ಅಭಿಪ್ರಾಯ. ಅವರ ಬಗ್ಗೆ ಮಾತನಾಡಿ ಅವರ್ನ್ಯಾಕೆ ದೊಡ್ಡವರು ಮಾಡುವುದು” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ ಹೊಸ ಚಿತ್ರಕ್ಕೆ ಮೈಂಡ್ ಬ್ಲಾಕ್ ಸಂಭಾವನೆ ಕೇಳಿದ ಸಪ್ತಮಿ ಗೌಡ. ಎಷ್ಟು ಅಂತೇ ಗೊತ್ತೇ??

Comments are closed.