Kannada News: ತಗೋಳಪ್ಪಾ ಹೊಸ ವರಸೆ ಆರಂಭಿಸಿದ ರಶ್ಮಿಕಾ: ವಿವಾದ ಅವರು ಮಾಡೋದೇ ಇಲ್ವಂತೆ, ಮತ್ತೆ ಯಾರು ಮಾಡೋದು ಅಂತೇ ಗೊತ್ತೇ?

Kannada News: ಅದೇನೋ ಗೊತ್ತಿಲ್ಲ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಜನಪ್ರಿಯತೆ ಮತ್ತು ವಿವಾದ ಎರಡು ಕೂಡ ಒಟ್ಟೊಟ್ಟಿಗೆ ಬೆನ್ನ ಹಿಂದೆಯೇ ಇರುತ್ತದೆ. ಒಂದು ಕಡೆ ಅವರು ಬಹು ಬೇಡಿಕೆಯ ನಟಿಯಾದರೆ ಮತ್ತೊಂದು ಕಡೆ ಅವರು ಆಡುವ ಮಾತುಗಳು, ನಡವಳಿಕೆಯಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಲೇ ಇರುತ್ತಾರೆ. ಅದರಲ್ಲೂ ಕರ್ನಾಟಕದಲ್ಲಂತೂ ರಶ್ಮಿಕ ಮಂದಣ್ಣ ಅತಿ ಹೆಚ್ಚು ಟ್ರೋಲ್ ಆಗುವ ನಟಿ. ಸದ್ಯ ಅವರು ಕನ್ನಡದಲ್ಲಿ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲವಾದರೂ, ಬಹುತೇಕ ಕನ್ನಡಿಗರು ಆಕೆಯನ್ನು ಕನ್ನಡದ ನಟಿ ಎಂದು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದರೂ ಕೂಡ ರಶ್ಮಿಕ ಕುರಿತಾಗಿ ಕರ್ನಾಟಕದಲ್ಲಿ ಒಂದಿಲ್ಲೊಂದು ಚರ್ಚೆ, ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಅದೆಲ್ಲ ಒಂದು ಕಡೆ ಇರಲಿ ಇದೀಗ ರಶ್ಮಿಕ ಮಂದಣ್ಣ ಇದರ ಕುರಿತಾಗಿಯೇ ಪ್ರತಿಕ್ರಿಯಿಸಿದ್ದು, ನಾನು ವಿವಾದ ಮಾಡೋದೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿ ಅಥವಾ ವಿವಾದದಲ್ಲಿ ಇದ್ದೇ ಇರುತ್ತಾರೆ. ಬಹುತೇಕ ಸಂದರ್ಭದಲ್ಲಿ ಏನೋ ಹೇಳಲು ಹೋಗಿ ಮತ್ತೇನನ್ನೋ ಹೇಳಿ ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಾರೆ. ಆಮೇಲೆ ನನ್ನ ಉದ್ದೇಶ ಹಾಗಿರಲಿಲ್ಲ, ಅದನ್ನು ತಿರುಚಲಾಗಿದೆ, ಹಾಗೆ ಮಾಡಲಾಗಿದೆ, ಹೀಗೆ ಮಾಡಲಾಗಿದೆ ಎಂದೆಲ್ಲ ಏನೇನೋ ನೆಪಗಳನ್ನು ಹೇಳುತ್ತಾರೆ. ಇದೀಗ ಮತ್ತೆ ಅಂತದೇ ಸಂದರ್ಭದಲ್ಲಿ ಇತ್ತೀಚಿಗೆ ನಟಿ ರಶ್ಮಿಕ ಅವರಿಗೆ ನಿಮ್ಮ ಪ್ರಕಾರ ಬಾಲಿವುಡ್ (Bollywood) ಅಥವಾ ಸೌತ್ ಸಿನಿಮಾ ಎರಡರಲ್ಲಿ ಯಾವ ಚಿತ್ರದ ಹಾಡುಗಳು ಇಷ್ಟವಾಗುತ್ತವೆ ಎಂದು ಕೇಳಲಾಗಿತ್ತು. ಈ ವೇಳೆ ಅವರು ಬಾಲಿವುಡ್ನ ಚಿತ್ರದ ಹಾಡುಗಳು ನನಗೆ ಇಷ್ಟವಾಗುತ್ತವೆ. ಅವು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತದೆ. ಆದರೆ ಸೌತ್ ಸಿನಿಮಾ ಪೂರ್ತಿ ಬರಿ ಮಸಾಲೆ ಎಂದು ಉತ್ತರಿಸಿದ್ದರು. ಇದನ್ನು ಓದಿ..Kannada News: ಕೋಟಿ ಕೋಟಿ ಇದ್ದರೂ ಚೌಕಾಸಿ ಮಾಡಲು ಹೋದ ಇಲಿಯಾನ: ಕೇಳಿದ ಬೆಲೆ ಕೇಳಿ ವ್ಯಾಪಾರೀ ಕೊಟ್ಟ ಉತ್ತರ ನೋಡಿ, ತಲೆ ಚಚ್ಚಿಕೊಂಡ ನಟಿ. ಏನಾಗಿದೆ ಗೊತ್ತೇ?

kannada news rakshith shetty | Kannada News: ತಗೋಳಪ್ಪಾ ಹೊಸ ವರಸೆ ಆರಂಭಿಸಿದ ರಶ್ಮಿಕಾ: ವಿವಾದ ಅವರು ಮಾಡೋದೇ ಇಲ್ವಂತೆ, ಮತ್ತೆ ಯಾರು ಮಾಡೋದು ಅಂತೇ ಗೊತ್ತೇ?
Kannada News: ತಗೋಳಪ್ಪಾ ಹೊಸ ವರಸೆ ಆರಂಭಿಸಿದ ರಶ್ಮಿಕಾ: ವಿವಾದ ಅವರು ಮಾಡೋದೇ ಇಲ್ವಂತೆ, ಮತ್ತೆ ಯಾರು ಮಾಡೋದು ಅಂತೇ ಗೊತ್ತೇ? 2

ಅಂದಹಾಗೆ ನಟಿ ರಶ್ಮಿಕ ಮಂದಣ್ಣ ಬಾಲಿವುಡ್ ನಲ್ಲಿ ತಾವು ಮೊದಲು ಒಪ್ಪಿಕೊಂಡಿದ್ದ ಮಿಷನ್ ಮಜ್ನು (Mission Majnu) ಚಿತ್ರದ ಬಿಡುಗಡೆಯ ಹಂತದಲ್ಲಿರುವ ಖುಷಿಯಲ್ಲಿದ್ದಾರೆ. ಇದೇ ವೇಳೆ ಅವರು ಸಂದರ್ಶನದಲ್ಲಿ ಪಾಲ್ಗೊಂಡು ಬಾಲಿವುಡ್ ಸಾಂಗ್ ಹೆಚ್ಚು ರೋಮ್ಯಾಂಟಿಕ್ ಹಾಗೂ ಸೌತ್ ಸಿನಿಮಾ ಸಾಂಗ್ ಮಸಾಲೆ, ಐಟಂ, ಅಷ್ಟು ರೋಮ್ಯಾಂಟಿಕ್ ಆಗಿರುವುದಿಲ್ಲ ಎಂದು ಉತ್ತರಿಸಿದ್ದರು. ರಶ್ಮಿಕ ಅವರ ಈ ಉತ್ತರ ಕೇಳಿ ಅಭಿಮಾನಿಗಳು ಗರಂ ಆಗಿದ್ದರು. ಇದೀಗ ಅದರ ಬಗ್ಗೆ ಸ್ಪಷ್ಟನೆ ನೀಡಿರುವ ರಶ್ಮಿಕ “ನಾನು ಏನೇ ಹೇಳಿದರು ಅದು ವಿವಾದವಾಗುತ್ತದೆ. ಆದರೆ ನನ್ನ ಉದ್ದೇಶ ಹಾಗಿರುವುದಿಲ್ಲ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ನಾನು ಏನೇ ಹೇಳಿದರೂ ಅದನ್ನು ತಿರುಚಲಾಗುತ್ತದೆ” ಎಂದು ಹೇಳಿದ್ದಾರೆ. ಬಹುಶಹ ನಾನು ಸರಿಯಾಗಿ ಮಾತನಾಡುವುದನ್ನು ಕಲಿಯಬೇಕೇನೋ ಎಂದು ನಟಿ ರಶ್ಮಿಕ ಮಂದಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಓದಿ.. Kannada News: ದಿಯಾ ಹೆಗ್ಡೆ ನಂತರ ಅಸಲಿ ಪ್ರತಿಭೆ ಪ್ರಗತಿ ರವರಿಗೆ ಕರೆ ಮಾಡಿದ ದರ್ಶನ್, ದಿಡೀರ್ ಎಂದು ಕರೆಮಾಡಿ ಹೇಳಿದ್ದೇನು ಗೊತ್ತೇ??

Comments are closed.