Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?

Kannada News: ಸ್ಟಾರ್ ಸುವರ್ಣ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪ್ರೇಮಿಗಳ ವಿಶೇಷ ಸಂಚಿಕೆಯಲ್ಲಿ ಅತಿಥಿಯಾಗಿ ನಟಿ ಸಪ್ತಮಿ ಗೌಡ ಪಾಲ್ಗೊಂಡಿದ್ದರು. ಸಿಹಿಕಹಿ ಚಂದ್ರು ಅವರು ಅತ್ಯಂತ ಲವಲವಿಕೆಯಿಂದ ನಿರೂಪಿಸುವ ಈ ಕಾರ್ಯಕ್ರಮದಲ್ಲಿ ಇದೆ ಮೊದಲ ಬಾರಿಗೆ ಕಾಂತಾರದ ಬ್ಯೂಟಿ ಸಪ್ತಮಿ ಭಾಗವಹಿಸಿದ್ದರು. ಈ ವೇಳೆ ಅವರು ಪ್ರೀತಿಯ ಕುರಿತ ತಮ್ಮ ಅಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಪ್ರೇಮಿಗಳು ಅಂದರೆ ಹೇಗಿರಬೇಕು, ತನ್ನ ಪಾಲಿಗೆ ವಾಲೆಂಟೈನ್ಸ್ ಡೇ ಅಂದರೆ ಹೇಗೆ ಎನ್ನುವ ಕುರಿತಾಗಿ ತಿಳಿಸಿರುವ ಅವರು ಇದೇ ಮೊದಲ ಬಾರಿಗೆ ಕರೆ ಮಾಡಿ ತಾವು ಅತ್ಯಂತ ಪ್ರೀತಿಸುವ ವ್ಯಕ್ತಿಗೆ ಪ್ರಪೋಸ್ ಮಾಡಿದ್ದಾರೆ.

ಬೊಂಬಾಟ್ ಭೋಜನ ವಿಶೇಷ ಸಂಚಿಕೆಯಲ್ಲಿ ಸಿಹಿಕಹಿ ಚಂದ್ರು ಮತ್ತು ಸಪ್ತಮಿ ಗೌಡ ಅವರ ಮಾತುಕತೆ ರಸಭರಿತವಾಗಿತ್ತು. ಕಾರ್ಯಕ್ರಮದಲ್ಲಿ ಸಪ್ತಮಿ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡರು. ಅಲ್ಲದೆ ಪ್ರೀತಿಯ ಕುರಿತಾಗಿ ತಮ್ಮ ನಿಲುವು ಏನು ಎನ್ನುವುದನ್ನು ಅವರು ಮುಕ್ತವಾಗಿ ಹಂಚಿಕೊಂಡರು. ಪ್ರೀತಿಯೆಂದರೆ ಪರಸ್ಪರ ನಂಬಿಕೆ, ಭರವಸೆ, ಅರ್ಥ ಮಾಡಿಕೊಳ್ಳುವುದು, ಸ್ನೇಹ ಎಂದು ಅವರು ತಿಳಿಸಿದರು. ನನಗೆ ವ್ಯಾಲೆಂಟೈನ್ಸ್ ಡೇ ಅಂದರೆ ಹೆಚ್ಚಿನ ನಿರೀಕ್ಷೆಗಳು ಏನು ಇಲ್ಲ. ಬೈಕ್ನಲ್ಲಿ ಕಬ್ಬನ್ ಪಾರ್ಕ್ ಹೋಗುವುದು, ಕೈ ಕೈ ಹಿಡಿದು ಇಡೀ ಪಾರ್ಕ್ ಸುತ್ತಾಡುವುದು. ನಂತರ ಒಂದು ಒಳ್ಳೆ ಊಟ ಮಾಡುವುದು, ಮಧ್ಯಾಹ್ನ ಸ್ವಲ್ಪ ನಿದ್ದೆ ಮಾಡುವುದು. ಸಂಜೆ ಸಿನಿಮಾಗೆ ಹೋಗುವುದು, ಇಷ್ಟೇ ನನ್ನ ನಿರೀಕ್ಷೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಾಗ ನಡೆದ ಅದೊಂದು ಘಟನೆಯಿಂದ ಮದುವೆಯಾಗದೆ ಉಳಿದ ನಟಿ ಸಿತಾರಾ. ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ ಗೊತ್ತೇ??

kannada news saptami gowda love story | Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?
Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ? 2

ನಟಿ ಸಪ್ತಮಿ ಗೌಡ ಮೊದಲ ಬಾರಿಗೆ ತಮ್ಮ ಫಸ್ಟ್ ಕಾಲೇಜ್ ಲವ್ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನು ಈ ವೇಳೆ ಚಂದ್ರು ಈ ಕಾರ್ಯಕ್ರಮದ ಮೂಲಕ ಫೋನ್ ಮಾಡಿ ಯಾರಿಗಾದರೂ ಪ್ರಪೋಸ್ ಮಾಡುವ ಅವಕಾಶ ನೀಡಿದರೆ ಯಾರಿಗೆ ಮಾಡುತ್ತೀರಿ ಅಂತ ಕೇಳಿದ್ದಾರೆ. ಆಗ ಸಪ್ತಮಿ ಗೌಡ ತಮ್ಮ ತಂದೆಯನ್ನು ನೆನೆದಿದ್ದಾರೆ. ಅವರು ನಮಗಾಗಿ ಎಷ್ಟೆಲ್ಲ ಮಾಡಿದ್ದಾರೆ ಮತ್ತು ನನ್ನನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಇದುವರೆಗೆ ನಾನು ಒಂದು ಸಲವೂ ಅವರಿಗೆ ಐ ಲವ್ ಯು ಹೇಳಿಲ್ಲ. ಪ್ರತಿ ಸಲವೂ ನಾನು ಏನೇ ಕೆಲಸ ಮಾಡುವಾಗಲು ಕೂಡ ಅವರ ಕಾಲಿಗೆ ನಮಸ್ಕಾರ ಮಾಡಿ ಮಾಡಿ ಆರಂಭಿಸುತ್ತೇನೆ ಎಂದಿದ್ದಾರೆ. ಇನ್ನು ಸಪ್ತಮಿ ತಮ್ಮ ತಂದೆಗೆ ಕರೆ ಮಾಡಿ ಹಲೋ ಪಪ್ಪ, ಏನಿಲ್ಲ, ಥ್ಯಾಂಕ್ಯೂ ಫಾರ್ ಎವರಿಥಿಂಗ್, ಐ ಲವ್ ಯು ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಕೃತಿ ಸನೋನ್ ಅಥವಾ ಅನುಷ್ಕಾ ಇವರಿಬ್ಬರಲ್ಲಿ ಪ್ರಭಾಸ್ ಮದುವೆಯಾಗುವುದು ಯಾರನ್ನು ಗೊತ್ತೇ? ಕೊನೆಗೂ ಒಬ್ಬರ ಹೆಸರು ಫೈನಲ್ ಆಗೇ ಬಿಡ್ತು.

Comments are closed.