Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ.

Kannada News: ಕಾಂತಾರ (Kantara) ಚಿತ್ರ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಂದು ಸಣ್ಣ ಪಾತ್ರಗಳಿಗೂ ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ಕೇಳಿ ಬರುತ್ತಿವೆ. ಇನ್ನು ನಟಿ ಸಪ್ತಮಿ ಗೌಡ (Saptami Gowda) ಅವರಿಗೂ ಈ ಚಿತ್ರದ ಲೀಲಾ ಪಾತ್ರ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಕಾಂತಾರದ ಯಶಸ್ಸಿನ ಬಳಿಕ ಅವರಿಗೆ ಸಾಕಷ್ಟು ಕಡೆಗಳಿಂದ ಒಳ್ಳೆಯ ಆಫರ್ ಗಳು ಕೇಳಿ ಬರುತ್ತಿವೆ. ಆದರೆ ಸಾಕಷ್ಟು ಯೋಚಿಸಿ ಚಿತ್ರಗಳಿಗೆ ಅವರು ಸಹಿ ಹಾಕುತ್ತಿದ್ದಾರೆ. ಇನ್ನು ಅವರಿಗೆ ಬಾಲಿವುಡ್ ನಿಂದ ಭರ್ಜರಿ ಆಫರ್ ಒಂದು ಕೇಳಿ ಬಂದಿದೆ. ಸಪ್ತಮಿ ಗೌಡ ಬಾಲಿವುಡ್ ನ ಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ.

ಕಾಂತಾರದ ಲೀಲಾ ಪಾತ್ರ ಸಪ್ತಮಿ ಗೌಡ ಅವರಿಗೆ ದೊಡ್ಡ ಮಟ್ಟದ ಪ್ರಸಿದ್ಧಿ ತಂದುಕೊಟ್ಟಿದೆ. ಆ ಮೂಲಕ ಅವರಿಗೆ ಬೇರೆ ಬೇರೆ ಭಾಷೆಗಳಿಂದಲೂ ಕೂಡ ಸಿನಿಮಾ ಆಫರ್ ಗಳು ಕೇಳಿ ಬರುತ್ತಿವೆ. ಆದರೆ ಚಿತ್ರದ ಕಥೆಯನ್ನು ಕೇಳಿ ಬಹಳ ಜವಾಬ್ದಾರಿಯುತವಾಗಿ ಹೊಸ ಚಿತ್ರಗಳಿಗೆ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಅಂದ ಹಾಗೆ ನಟಿ ಸಪ್ತಮಿ ಗೌಡ ಈ ಮೊದಲು ಡಾಲಿ ಧನಂಜಯ್ (Daali Dhananjay) ಅವರ ಜೊತೆಗೆ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿದರು. ಆನಂತರ ಅವರಿಗೆ ಕಾಂತಾರದ ಲೀಲಾ ಪಾತ್ರದ ಅವಕಾಶ ಕೇಳಿ ಬಂತು. ಇದೀಗ ಸಪ್ತಮಿ ಲೀಲಾ ಪಾತ್ರದ ಮೂಲಕ ಜನರಿಗೆ ಹೆಚ್ಚು ಇಷ್ಟವಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಕೇಳಿ ಬರುತ್ತಿವೆ. ಇನ್ನು ಕನ್ನಡದಲ್ಲಿ ಅವರ ಮೂರನೇ ಚಿತ್ರ ಕಾಳಿ ನಟ ಅಭಿಷೇಕ್ ಅಂಬರೀಷ್ (Abhishek Ambarish) ಅವರ ಜೊತೆಗೆ ಆಗಿರಲಿದೆ. ಇದರ ಬೆನ್ನಲ್ಲೇ ನಟಿ ಸಪ್ತಮಿ ಬಾಲಿವುಡ್ ಗೆ ಹಾರುತ್ತಿದ್ದು, ಖ್ಯಾತ ನಿರ್ದೇಶಕರ ಚಿತ್ರದಲ್ಲಿ ಅವರಿಗೆ ನಾಯಕಿಯಾಗುವ ಅವಕಾಶ ದೊರೆತಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಪ್ರೀತಿಸಿ ಮದುವೆಯಾದ ಜಯಸುಧಾ ರವರ ವಯಸ್ಸು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ? ಅದಕ್ಕೆ ಹೇಳೋದು ನಿಜವಾದ ಪ್ರೀತಿಗೆ ವಯಸ್ಸಿಲ್ಲ ಅಂತ

kannada news saptami gowda | Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ.
Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ. 2

ಕಾಶ್ಮೀರಿ ಫೈಲ್ಸ್ (Kashmir Files) ಚಿತ್ರದ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಈ ಮೂಲಕ ಸಪ್ತಮಿ ಗೌಡ ಬಾಲಿವುಡ್ ನಲ್ಲೂ ಮೋಡಿ ಮಾಡಲು ರೆಡಿಯಾಗಿದ್ದಾರೆ. ಕೊರೊನ ಲಸಿಕೆಯ ಕುರಿತಾದ ದಿ ವ್ಯಾಕ್ಸಿನ್ ವಾರ್ (The Vaccine War) ಎನ್ನುವ ಚಿತ್ರಕ್ಕೆ ಅವರು ನಾಯಕಿಯಾಗಿ ಅಂತಿಮಗೊಂಡಿದ್ದಾರೆ. ಬಹು ತಾರಾಗಣವಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೈದರಾಬಾದ್ ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ನಟಿ ಸಪ್ತಮಿ ಗೌಡ ಭಾಗಿಯಾಗಲಿದ್ದಾರೆ. ಕೋವಿಡ್ ಲಸಿಕೆ ಆಧರಿಸಿ ತಯಾರಿಸಲಾಗುತ್ತಿರುವ ಈ ಚಿತ್ರದಲ್ಲಿ ನಟಿ ಸಪ್ತಮಿ ಗೌಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಮೊದಲ ಬಾರಿಗೆ ಬಹಿರಂಗವಾಗಿ ಚಪ್ಪಲಿ ಪ್ರಕರಣ ಕುರಿತು ಮಾತನಾಡಿದ ಡಿ ಬಾಸ್: ತಾಕತ್ತಿದ್ದರೆ ಈ ಪ್ರಶ್ನೆಗೆ ಉತ್ತರ ನೀಡಿ. ಖಡಕ್ ಪ್ರಶ್ನೆ ಏನು ಗೊತ್ತೇ??

Comments are closed.