Kannada News: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಿವಣ್ಣ: ಅಪ್ಪು ಹಾಗೂ ದರ್ಶನ್ ಫ್ಯಾನ್ಸ್ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಎನ್ನುವುದು ಮೊದಲಿನಿಂದಲೂ ಇದೆ. ಇಂತಹದೊಂದು ಕೆಟ್ಟ ಚಾಳಿಯಿಂದ ಅಭಿಮಾನಿಗಳ ನಡುವೆಯೇ ದೊಡ್ಡ ಜಗಳ, ಮನಸ್ತಾಪ ಏರ್ಪಡುತ್ತದೆ. ಸ್ಟಾರ್ ನಟರಿಗೆ ಅವರವರ ನಡುವೆ ಪೈಪೋಟಿ ಇರುತ್ತದೋ ಇಲ್ಲವೋ ಆದರೆ ಅವರ ಅಭಿಮಾನಿಗಳು ಸುಮ್ಮನೆ ಇಬ್ಬರು ನಟರ ಹೆಸರು ಹೇಳಿಕೊಂಡು ಅಭಿಮಾನಿ ಎನ್ನುವ ನೆಪದಲ್ಲಿ ಅಧಿಕ ಪ್ರಸಂಗತನ ತೋರುವ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಮೇಲೆ ದರ್ಶನ್ ರವರಿಗೆ ಚಪ್ಪಲಿ ಎಸೆದ ಪ್ರಕರಣ ನಡೆದಿತ್ತು. ದರ್ಶನ್ ಮತ್ತು ಪುನೀತ್ ಅಭಿಮಾನಗಳ ನಡುವೆ ನಡೆದ ಚರ್ಚೆ, ವಾಗ್ವಾದ ತಾರಕಕೇರಿ ಇಲ್ಲಿವರೆಗೂ ಮುಟ್ಟಿದೆ ಎಂದು ಎಲ್ಲಾ ಕಡೆ ಮಾತುಗಳು ಕೇಳಿ ಬರುತ್ತಿವೆ. ಇನ್ನು ನಟ ಶಿವಣ್ಣ ಅವರಿಗೆ ಸ್ಟಾರ್ ವಾರ್ ಕುರಿತಾಗಿ ಪ್ರಶ್ನಿಸಲಾಗಿದ್ದು ಅದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ಕ್ರಾಂತಿ ಚಿತ್ರದ 2ನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ದರ್ಶನ್ ರವರು ಪುನೀತ್ ಅವರ ಬಗ್ಗೆ ಹೇಳಿದ್ದ ಹೇಳಿಕೆ ಒಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಕುರಿತಾಗಿ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ದರ್ಶನ್ ರವರ ಈ ಕಾರ್ಯಕ್ರಮ ತಮ್ಮ ಊರಿನಲ್ಲಿ ನಡೆಯಲು ಬಿಡುವುದಿಲ್ಲ ಎಂದು ಏನೇನೋ ಅವಾಂತರ ಸೃಷ್ಟಿಸಿದರು. ಆನಂತರ ಕೂಡ ಕಾರ್ಯಕ್ರಮ ಆಯೋಜನೆಯಾಗಿತ್ತು, ಆಗ ದರ್ಶನ್ ಅಭಿಮಾನಿಗಳು ಇಂದು ನಮ್ಮ ಬಾಸ್ ಹೊಸಪೇಟೆಗೆ ಬರುತ್ತಿದ್ದಾರೆ. ನಿಮ್ಮ ಕೈಯಲ್ಲಿ ಏನು ಕಿತ್ತುಕೊಳ್ಳೋಕೆ ಆಗಲ್ಲ ಎಂದೆಲ್ಲ ಉದ್ದಟತನ ತೋರಿಸಿದರು. ಆನಂತರ ಕಾರ್ಯಕ್ರಮದ ವೇಳೆಗೆ ನಟ ದರ್ಶನ್ ಅವರಿಗೆ ಚಪ್ಪಲಿ ಎಸಿದ ಘಟನೆ ನಡೆದಿತ್ತು. ಇದು ಪುನೀತ್ ಅವರ ಅಭಿಮಾನಿಗಳೇ ಮಾಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ವಿಷಯವಾಗಿ ಪುನೀತ್ ಹಾಗು ದರ್ಶನ್ ಅಭಿಮಾನಿಗಳ ನಡುವೆ ದೊಡ್ಡ ಸ್ಟಾರ್ ವಾರ್ ನಡೆಯುತ್ತಲೇ ಇದೆ ಎಂದು ಹೇಳಬಹುದು. ಈ ವಿಷಯವಾಗಿ ಇದೀಗ ನಟ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ..Biggboss Kannada: ಅಂದು ದಿನಕ್ಕೆ 1 ಲಕ್ಷ ಕೇಳಿದ ಗುರೂಜಿ, ಈಗ ಹೊರಬಂದ ಮೇಲೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??

kannada news shivanna angry | Kannada News: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಿವಣ್ಣ: ಅಪ್ಪು ಹಾಗೂ ದರ್ಶನ್ ಫ್ಯಾನ್ಸ್ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
Kannada News: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಿವಣ್ಣ: ಅಪ್ಪು ಹಾಗೂ ದರ್ಶನ್ ಫ್ಯಾನ್ಸ್ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ?? 2

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಮುಂಬರುವ ಘೋಸ್ಟ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರೀಕರಣದ ಸ್ಥಳದ ಸಮೀಪದಲ್ಲಿ ವೇದ ಚಿತ್ರ ಬಿಡುಗಡೆಗೊಂಡಿರುವ ಚಿತ್ರಮಂದಿರಗಳಿಗೆ ಅವರು ಭೇಟಿ ನೀಡಿದ್ದಾರೆ. ವೇದ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎನ್ನುವುದನ್ನು ನೋಡಿದ್ದಾರೆ. ಆನಂತರ ಶಿವಣ್ಣ ಅವರನ್ನು ಮಾಧ್ಯಮದವರು ಸಂದರ್ಶಿಸಿದ್ದಾರೆ. ಈ ವೇಳೆ ಸ್ಟಾರ್ ವಾರ್ ಕುರಿತಾಗಿ ಪ್ರಶ್ನೆ ಮಾಡಲಾಗಿದೆ. ಸದ್ಯ ನಡೆಯುತ್ತಿರುವ ಸ್ಟಾರ್ ವಾರ್ ಕುರಿತಾಗಿ ನೀವು ಏನು ಹೇಳುತ್ತೀರಿ ಎಂದು ಮಾಧ್ಯಮದವರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಶಿವಣ್ಣ ಸದ್ಯಕ್ಕೆ ಅದರ ಬಗ್ಗೆ ಏನೂ ಕೇಳಬೇಡಿ, ಅದಾವುದು ಈಗ ಬೇಡ. ಈಗ ವೇದದ ಬಗ್ಗೆ ಮಾತ್ರ ಮಾತನಾಡೋಣ, ಬರೀ ವೇದದ ಬಗ್ಗೆ ಯೋಚಿಸೋಣ. ಅದು ಬಿಟ್ಟು ಬೇರೆ ಮಾತುಕತೆ ವಿಚಾರಗಳ ಬಗ್ಗೆ ಪ್ರಶ್ನೆ ಬೇಡ ಎಂದು ಅವರು ಸ್ಟಾರ್ ವಾರ್ ಬಗ್ಗೆ ಉತ್ತರಿಸಲು ನಿರಾಕರಿಸಿದ್ದಾರೆ. ಇದನ್ನು ಓದಿ.. Kannada News: ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ರವರನ್ನು ಮೀರಿಸುವಂತಹ ಕನ್ನಡತಿ ತೆಲುಗಿನಲ್ಲಿ ಮಿಂಚಿಂಗ್. ಯಾರು ಗೊತ್ತೇ ಆ ದೇವಲೋಕದ ಅಪ್ಸರೆ??

Comments are closed.