Kannada News: ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಾಗ ನಡೆದ ಅದೊಂದು ಘಟನೆಯಿಂದ ಮದುವೆಯಾಗದೆ ಉಳಿದ ನಟಿ ಸಿತಾರಾ. ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ ಗೊತ್ತೇ??

Kannada News: ನಟಿ ಸಿತಾರ ಅವರು 90ರ ದಶಕದಲ್ಲಿ ಕನ್ನಡದ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಎನ್ನಿಸಿಕೊಂಡವರು. ಇವರು ಮೂಲತಃ ಕೇರಳದವರು, ಮೊದಲಿಗೆ ಮಲಯಾಳಂ ಸಿನಿಮಾ ಮೂಲಕ ನಟನೆ ಶುರು ಮಾಡಿದರು ಕೂಡ, ತಮಿಳು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿ ಬಹಳ ಒಳ್ಳೆಯ ಹೆಸರು ಮಾಡಿದರು. ಸಿತಾರ ಅವರಿಗೆ ಕೆ.ಬಾಲಚಂದರ್ ಅವರು ನಿರ್ದೇಶನ ಮಾಡಿದ ಪುಧು ಪುಧು ಅರ್ಥಂಗಳ್ ಸಿನಿಮಾ ಒಳ್ಳೆಯ ಕೀರ್ತಿ ತಂದುಕೊಟ್ಟಿತು.

1994ರಲ್ಲಿ ಹಾಲುಂಡ ತವರು ಸಿನಿಮಾ ಮೂಲಕ ಸಿತಾರ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನಂತರ ಸಿತಾರ ಅವರು ಹಲವು ಒಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಹಲವು ವರ್ಷಗಳು ಬ್ರೇಕ್ ಪಡೆದು, ಅಮ್ಮ ಐ ಲವ್ ಯು ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಈಗಲು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಸಿತಾರ ಅವರು ಒಳ್ಳೆಯ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ವೈಯಕ್ತಿಕ ಜೀವನದಲ್ಲಿ ಇನ್ನು ಮದುವೆ ಆಗದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ಸಿತಾರ ಅವರಿಗೆ 49 ವರ್ಷ ಆಗಿದ್ದರು ಸಹ ಇನ್ನು ಮದುವೆಯಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಜನರಲ್ಲು ಪ್ರಶ್ನೆ ಇತ್ತು, ಅದಕ್ಕೆ ಸಿತಾರ ಅವರು ಸಂದರ್ಶನ ಒಂದರಲ್ಲಿ ಉತ್ತರ ಕೊಟ್ಟಿದ್ದಾರೆ. ಸಿತಾರ ಅವರಿಗೆ ಬಹಳ ಸಮಯದಿಂದಲೂ ಬಹಳಷ್ಟು ಮದುವೆ ಪ್ರೊಪೋಸಲ್ ಗಳು ಬಂದಿದ್ದವು. ಇದನ್ನು ಓದಿ..Kannada News: ಕೃತಿ ಸನೋನ್ ಅಥವಾ ಅನುಷ್ಕಾ ಇವರಿಬ್ಬರಲ್ಲಿ ಪ್ರಭಾಸ್ ಮದುವೆಯಾಗುವುದು ಯಾರನ್ನು ಗೊತ್ತೇ? ಕೊನೆಗೂ ಒಬ್ಬರ ಹೆಸರು ಫೈನಲ್ ಆಗೇ ಬಿಡ್ತು.

kannada news sitara lifestory in kannada 1 | Kannada News: ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಾಗ ನಡೆದ ಅದೊಂದು ಘಟನೆಯಿಂದ ಮದುವೆಯಾಗದೆ ಉಳಿದ ನಟಿ ಸಿತಾರಾ. ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ ಗೊತ್ತೇ??
Kannada News: ಜೀವನದಲ್ಲಿ ಎಲ್ಲವೂ ಚೆನ್ನಾಗಿದ್ದಾಗ ನಡೆದ ಅದೊಂದು ಘಟನೆಯಿಂದ ಮದುವೆಯಾಗದೆ ಉಳಿದ ನಟಿ ಸಿತಾರಾ. ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ ಗೊತ್ತೇ?? 2

ಕೆರಿಯರ್ ನ ಪೀಕ್ ನಲ್ಲಿರುವ ಸಮಯದಲ್ಲಿ ಮದುವೆ ಆಗುವ ಡಿಸಿಷನ್ ಸರಿಯಲ್ಲ ಎಂದು ಸಿತಾರ ಅವರು ಮದುವೆಗೆ ಒಪ್ಪಿರಲಿಲ್ಲ. ಹಾಗೆಯೇ ತಂದೆ ತಾಯಿಯನ್ನು ಬಿಟ್ಟು ಹೋಗುವುದಕ್ಕೂ ಅವರಿಗೆ ಇಷ್ಟವಿರಲಿಲ್ಲ, ಹೀಗಾಗಿ ಅಪ್ಪ ಅಮ್ಮ ಎಷ್ಟೇ ಹೇಳಿದರು ಕೂಡ ಸಿತಾರ ಅವರು ಮದುವೆಗೆ ಒಪ್ಪುತ್ತಿರಲಿಲ್ಲ. ಕನ್ನಡದವರೆ ಆದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಮುರಳಿ ಮತ್ತು ಸಿತಾರ ಅವರು ಆತ್ಮೀಯ ಸ್ನೇಹಿತರಾಗಿದ್ದರು, 2010ರಲ್ಲಿ ಕೇವಲ 25 ವರ್ಷವಿದ್ದಾಗ ಮುರಳಿ ಅವರು ಇಹಲೋಕ ತ್ಯಜಿಸಿದರು, ಇದು ಸಿತಾರ ಅವರಿಗೆ ಬಹಳ ನೋವಾಗಿತ್ತು, ಆತ್ಮೀಯವಾಗಿದ್ದ ಮುರಳಿ ಅವರಿಗೆ ಹೀಗಾಯಿತು ಎಂದು ನೋವಲ್ಲಿದ್ದರು, ಅದಾದ ಕೆಲ ಸಮಯಕ್ಕೆ ಸಿತಾರ ಅವರ ತಂದೆ ಕೂಡ ಇಹಲೋಕ ತ್ಯಜಿಸಿದರು. ಈ ಎರಡು ಕಾರಣಗಳಿಂದ ಸಿತಾರ ಅವರು ಮದುವೆಯಾಗದೆ ಹಾಗೆಯೇ ಉಳಿದರು. ಇದನ್ನು ಓದಿ..Kannada News:ಅದು ದೊಡ್ಡದಾಗಿದ್ದರೆ ಮಾತ್ರ ಮದುವೆಯಾಗುತ್ತೇನೆ ಎಂದ ಮೃಣಾಲ್ ಠಾಕೂರ್; ಹುಡುಗರ ಹೃದಯ ಕದ್ದ ಚೆಲುವೆಯ ಮದುವೆ ಬಗ್ಗೆ ಕೇಳಿದಕ್ಕೆ ಹೀಗಾ ಹೇಳೋದು?

Comments are closed.