Kannada News: ಆಹ್ವಾನ ಕೊಟ್ಟರು ನೇರವಾಗಿ ಪ್ರಧಾನ ಮಂತ್ರಿ ಮೋದಿ ರವರನ್ನು ಭೇಟಿ ಮಾಡಿಲ್ಲ ಕಿಚ್ಚ: ಇದಕ್ಕೆ ಕಾರಣ ಏನಂತೆ ಗೊತ್ತೇ?? ಕಿಚ್ಚನ ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್.

Kannada News: ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸ್ಯಾಂಡಲ್ವುಡ್ನ ಕೆಲವು ಪ್ರಮುಖ ಗಣ್ಯರನ್ನು ಭೇಟಿ ಮಾಡಿದರು. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar), ನಟ ಯಶ್ (Yash), ವಿಜಯ್ ಕಿರಗಂದೂರು (Vijay Kiragandur), ರಿಷಬ್ ಶೆಟ್ಟಿ (Rishab Shetty), ಅಯ್ಯೋ ಶ್ರದ್ಧಾ (Aiyyo Shraddha) ಅವರನ್ನು ಈ ವೇಳೆ ಅವರು ಭೇಟಿ ಮಾಡಿ ಕುಶಲೊಪರಿ ವಿಚಾರಿಸಿದರು. ಸ್ಯಾಂಡಲ್ವುಡ್ನ ಕೆಲವೇ ಕೆಲವು ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು. ಆದರೆ ಈ ಬೇಟಿಗೆ ಕಿಚ್ಚ ಸುದೀಪ್ (Kiccha Sudeep) ಅವರು ಗೈರಾಗಿದ್ದರೋ ಅಥವಾ ಕಿಚ್ಚ ಸುದೀಪ್ ಅವರಿಗೆ ಆಹ್ವಾನ ಇರಲೇ ಇಲ್ಲವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಕುರಿತು ಇದೆ ಮೊದಲ ಬಾರಿಗೆ ಕಿಚ್ಚ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಅವರ ಇತ್ತೀಚಿನ ಬೆಂಗಳೂರಿನ ಭೇಟಿ ಸಂಚಲನ ಮೂಡಿಸಿತು. ಅವರು ಕೆಲವು ಸ್ಟಾರ್ ಕಲಾವಿದರ ಜೊತೆಗೆ ಮಾತನಾಡಿದರು. ಚಂದನವನಕ್ಕೆ ಸಂಬಂಧಿಸಿದ ಕೆಲವೇ ಕೆಲವು ಪ್ರಮುಖ ವ್ಯಕ್ತಿಗಳ ಜೊತೆಗೆ ಅವರ ಭೇಟಿ ನಿಗದಿಯಾಗಿತ್ತು. ಈ ಭೇಟಿಯ ಇಂದಿನ ಉದ್ದೇಶ ಏನು ಎನ್ನುವುದು ಕುತೂಹಲ ಮೂಡಿಸಿತು. ಅಶ್ವಿನಿ, ರಿಷಬ್, ಯಶ್, ವಿಜಯ್, ಶ್ರದ್ಧಾ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಆದರೆ ಈ ವೇಳೆ ಕಿಚ್ಚ ಸುದೀಪ್ ಅವರಿಗೆ ಮೋದಿ ಅವರಿಂದ ಕರೆ ಬಂದಿರಲಿಲ್ಲವೇ, ಅವರು ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗಳು ಸಹ ಮೂಡಿತ್ತು. ಏಕೆಂದರೆ ಹಲವಾರು ವರ್ಷಗಳಿಂದಲೂ ಕೂಡ ನಟ ಸುದೀಪ ಕನ್ನಡ ಮಾತ್ರವಲ್ಲದೆ ಪರಭಾಷೆಯ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಹಾಗೆಯೇ ಅಲ್ಲಿಯೂ ಸಹ ಹೆಸರು ಮಾಡಿದ್ದಾರೆ. ಈಗಿರುವಾಗ ಕಿಚ್ಚ ಸುದೀಪ್ ಅವರಿಗೆ ಯಾಕೆ ಆಹ್ವಾನ ಬಂದಿರಲಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?

kannada news sudeep didnot meet narendra modi do you know the reason | Kannada News: ಆಹ್ವಾನ ಕೊಟ್ಟರು ನೇರವಾಗಿ ಪ್ರಧಾನ ಮಂತ್ರಿ ಮೋದಿ ರವರನ್ನು ಭೇಟಿ ಮಾಡಿಲ್ಲ ಕಿಚ್ಚ: ಇದಕ್ಕೆ ಕಾರಣ ಏನಂತೆ ಗೊತ್ತೇ?? ಕಿಚ್ಚನ ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್.
Kannada News: ಆಹ್ವಾನ ಕೊಟ್ಟರು ನೇರವಾಗಿ ಪ್ರಧಾನ ಮಂತ್ರಿ ಮೋದಿ ರವರನ್ನು ಭೇಟಿ ಮಾಡಿಲ್ಲ ಕಿಚ್ಚ: ಇದಕ್ಕೆ ಕಾರಣ ಏನಂತೆ ಗೊತ್ತೇ?? ಕಿಚ್ಚನ ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್. 2

ನಟ ಕಿಚ್ಚ ಸುದೀಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದಿಂದ ಅಧಿಕೃತವಾಗಿ ಆಹ್ವಾನ ಬಂದಿತ್ತು. ಅಲ್ಲದೆ ಸ್ವತಹ ಕಚೇರಿಯಿಂದಲೇ ಕರೆ ಮಾಡಿ ಮೋದಿ ಅವರ ಭೇಟಿಗೆ ಆಹ್ವಾನ ನೀಡಲಾಗಿತ್ತು. ಅದಕ್ಕೆ ಬಹಳ ಖುಷಿಯಿಂದ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದರು. ಅಲ್ಲದೆ ಸುದೀಪ್ ಪ್ರಧಾನಿ ಮೋದಿ ಅವರ ಭೇಟಿಗೆ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರ ಆರೋಗ್ಯ ಕೈ ಕೊಟ್ಟಿದ್ದರಿಂದಾಗಿ ಈ ಭೇಟಿ ಸಾಧ್ಯವಾಗಿಲ್ಲ. ಪ್ರಧಾನಿಯ ಭೇಟಿ ಎಂದರೆ ಅಲ್ಲಿ ಸಾಕಷ್ಟು ಪ್ರೋಟೋಕಾಲ್ ಇರುತ್ತದೆ. ಆದರೆ ಕಿಚ್ಚ ಅವರಿಗೆ ಕೊನೆ ಕ್ಷಣದಲ್ಲಿ ಜ್ವರ ಕಾಣಿಸಿಕೊಂಡಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಮೋದಿಯವರನ್ನು ಭೇಟಿ ಮಾಡಬೇಕು ಎಂದರೆ ಆರ್ಟಿಪಿಸಿಆರ್ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಿರುವುದು ಕಡ್ಡಾಯ. ಮೋದಿಯವರಿಗೆ ತಮ್ಮ ಕಾರಣದಿಂದ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತೆಯಿಂದಾಗಿ ಕಿಚ್ಚ ಸುದೀಪ್ ಅವರು ಮೋದಿಯವರ ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಕುರಿತಾಗಿ ಸ್ವತಹ ಸುದೀಪ ಅವರೇ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?

Comments are closed.