Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ?

Kannada News: ನಂದಮೂರಿ ಕುಟುಂಬದ ತಾರಕರತ್ನ ಅವರು ಕೇವಲ 39 ವರ್ಷ ವಯಸ್ಸಿಗೆ ವಿಧಿವಶರಾದರು. ಪಾದಯಾತ್ರೆ ಸಮಯದಲ್ಲಿ ಕುಸಿದು ಬಿದ್ದ ಇವರಿಗೆ, ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 23 ದಿನಗಳು ಚಿಕಿತ್ಸೆ ನೀಡಿದರು, ಆದರೆ ಅದು ಫಲ ನೀಡದೆ, ತಾರಕರತ್ನ ಅವರು ಫೆಬ್ರವಾಯಿ 18ರಂದು ಕೊನೆಯುಸಿರೆಳೆದರು. ಈ ನೋವು ಕುಟುಂಬದವರಲ್ಲಿ ಮತ್ತು ಅಭಿಮಾನಿಗಳಲ್ಲಿ ಹಾಗೆಯೇ ಇದೆ. ನಂದಮೂರಿ ಕುಟುಂಬ ತಾರಕರತ್ನ ಅವರ ಮರಣಾನಂತರದ ಕಾರ್ಯವನ್ನು ಹಮ್ಮಿಕೊಂಡಿತ್ತು, ಅದರಲ್ಲಿ ಇಡೀ ಕುಟುಂಬ, ಅದರಲ್ಲು ತಾರಕರತ್ನ ಅವರ ಪತ್ನಿ ಅಲೇಖ್ಯ ರೆಡ್ಡಿ ಬಂದಿದ್ದರು. ತಾರಕರತ್ನ ಅವರ ಪತ್ನಿಗೆ ಪತಿ ಇಲ್ಲ ಎನ್ನುವ ನೋವನ್ನು ಜೀರ್ಣಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ.

ಫೆಬ್ರವರಿ 18ರಂದು ತಾರಕರತ್ನ ವಿಧಿವಶರಾದರು, ಫೆಬ್ರವರಿ 22ರಂದು ಅವರ ಹುಟ್ಟುಹಬ್ಬ ಇತ್ತು. ಹೀಗಾದದ್ದು ನಂದಮೂರಿ ಕುಟುಂಬಕ್ಕೆ ತೀವ್ರವಾದ ವಿಷಾದ ತಂದಿದೆ. ಅವರಿಗೆ ಎಂದು ಮಾಸದ ನೋವು ನೀಡಿದೆ ಎಂದೇ ಹೇಳಬಹುದು. ತಾರಕರತ್ನ ಅವರ ಪತ್ನಿ ಅಲೇಖ್ಯ ರೆಡ್ಡಿ ಅವರ ಪರಿಸ್ಥಿತಿಯನ್ನು ವಿಶೇಷವಾಗಿ ಹೇಳಬೇಕಿಲ್ಲ, ಮನೆಯವರ ವಿರೋಧದ ನಡುವೆ ತಾರಕರತ್ನ ಅವರು ಅಲೇಖ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಆಕೆಗೆ ಇನ್ನು ಹೆಚ್ಚಿನ ನೋವಿದೆ. ಈ ನೋವಿನಲ್ಲಿರುವ ಅಲೇಖ್ಯ ರೆಡ್ಡಿ ಅವರು, ಪತಿಯ ಹುಟ್ಟುಹಬ್ಬದ ದಿನ ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..Kannada News: ಮೆಗಾ ಸ್ಟಾರ್ ಚಿರು ಫ್ಯಾಮಿಲಿ ನಟ ವರುಣ್ ಮದುವೆಯಾಗುತ್ತಿರುವ ಬೆಣ್ಣೆಯಂತಹ ಹುಡುಗಿ ಯಾರು ಗೊತ್ತೇ?? ತಿಳಿದರೆ ಕುಂತಲ್ಲೇ ಎಗರಿ ಬೀಳ್ತಿರಾ.

kannada news tarakaratna wife wishes birthday | Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ?
Kannada News: ಎಲ್ಲರೂ ಗೊಳೋ ಎಂದು ಕಣ್ಣೀರು ಹಾಕುವಂತೆ ಪೋಸ್ಟ್ ಹಾಕಿದ ತಾರಕರತ್ನ ಪತ್ನಿ: ಗಂಡ ಕಳೆದುಕೊಂಡ ನಾಲ್ಕೇ ದಿನಕ್ಕೆ ಏನಾಗಿದೆ ಗೊತ್ತೆ? 2

“Happy Happy Birthday to Best Father, Best Husband and Best Human. So badly Miss You Naana. I love you so much.” ಎಂದು ಬರೆದುಕೊಂಡಿದ್ದಾರೆ. ಅಲೇಖ್ಯ ರೆಡ್ಡಿ ಅವರು ಶೇರ್ ಮಾಡಿರುವ ಈ ಪೋಸ್ಟ್ ನೋಡಿದರೆ, ಅವರು ಪತಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆ ಘಟನೆಯಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಈ ಸಾಲುಗಳನ್ನು ಬರೆದು, ತಾರಕರತ್ನ ಅವರು ಮಗಳು ನಿಷ್ಕಾ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಪ್ರಸ್ತುತ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಪ್ರೀತಿ ನೋಡಿ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಇಷ್ಟು ಬೇಗ ಹೀಗಾಗಬಾರದಿತ್ತು ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಕನ್ನಡ ಕಿರುತೆರೆಯಲ್ಲಿ ಎಲ್ಲರ ಮನಗೆದ್ದಿರುವ ತಾರಿಣಿ ಪಾತ್ರದಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.