ಕನ್ನಡದ ಚಿತ್ರಗಳಿಗೆ ಹಾಡನ್ನು ಹಾಡಲು ಬಂದ ಇತರ ಸೌತ್ ಇಂಡಿಯಾದ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೇ?? ಇವರೆಲ್ಲ ಹಾಡನ್ನು ಹಾಡಿದ್ದಾರೆ.

ನಮಸ್ಕಾರ ಸ್ನೇಹಿತರೇ ಬೇರೆ ಭಾಷೆಯ ನಟ ಹಾಗೂ ನಟಿಯರು ತಮ್ಮ ತಮ್ಮ ಚಿತ್ರಗಳಿಗೆ ಹಾಗೂ ತಮ್ಮ ತಮ್ಮ ಭಾಷೆಯ ಚಿತ್ರಗಳಿಗೆ ಹಾಡನ್ನು ಹಾಡುವುದು ತುಂಬಾನೇ ಕಾಮನ್. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ಹಾಗೂ ನಟಿಯರು ಕನ್ನಡ ಚಿತ್ರರಂಗದ ಹಾಡುಗಳಿಗೆ ಧ್ವನಿಯಾಗಿರುವ ವಿಚಾರದ ಕುರಿತಂತೆ. ಹಾಗಿದ್ದರೆ ಯಾವೆಲ್ಲ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಕನ್ನಡ ಚಿತ್ರರಂಗದ ಹಾಡಿಗೆ ಧ್ವನಿಯಾಗಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

jr ntr kannada song kajal agarval | ಕನ್ನಡದ ಚಿತ್ರಗಳಿಗೆ ಹಾಡನ್ನು ಹಾಡಲು ಬಂದ ಇತರ ಸೌತ್ ಇಂಡಿಯಾದ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೇ?? ಇವರೆಲ್ಲ ಹಾಡನ್ನು ಹಾಡಿದ್ದಾರೆ.
ಕನ್ನಡದ ಚಿತ್ರಗಳಿಗೆ ಹಾಡನ್ನು ಹಾಡಲು ಬಂದ ಇತರ ಸೌತ್ ಇಂಡಿಯಾದ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೇ?? ಇವರೆಲ್ಲ ಹಾಡನ್ನು ಹಾಡಿದ್ದಾರೆ. 3

ಜೂನಿಯರ್ ಎನ್ಟಿಆರ್ ಹಾಗೂ ಕಾಜಲ್ ಅಗರ್ವಾಲ್; ಮೊದಲಿಗೆ ತೆಲುಗು ಚಿತ್ರರಂಗದ ಯಂಗ್ ಟೈಗರ್ ಎಂದೇ ಖ್ಯಾತರಾಗಿರುವ ಜೂನಿಯರ್ ಎನ್ಟಿಆರ್ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಾಗೂ ರಚಿತರಾಮ್ ನಟಿಸಿರುವ ಚಕ್ರವ್ಯೂಹ ಚಿತ್ರದಲ್ಲಿ ಗೆಳೆಯ ಗೆಳೆಯ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಇಂದಿಗೂ ಕೂಡ ಎಲ್ಲಾ ಅಪ್ಪು ಅಭಿಮಾನಿಗಳಿಗೆ ಅಚ್ಚುಮೆಚ್ಚು. ನಟಿ ಕಾಜಲ್ ಅಗರ್ವಾಲ್ ರವರು ಕೂಡ ಇದೇ ಚಿತ್ರದ ಅರೆ ಅರೆ ಏನಾಯಿತು ಹಾಡಿಗೆ ಧ್ವನಿಯಾಗಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕಾಜಲ್ ಅಗರವಾಲ್ ರವರು ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರಗಳಲ್ಲಿ ಕೂಡ ಸ್ಟಾರ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಸಿಲಂಬರಸನ್; ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ನಟ ಸಿಲಂಬರಸನ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಾಡುಗಾರಿಕೆಯಲ್ಲಿ ಕೂಡ ಸಿದ್ಧಹಸ್ತರು. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಮೇಘನಾರಾಜ್ ಹಾಗೂ ತಿಲಕ್ ನಟನೆಯ ಇರುವುದೆಲ್ಲವ ಬಿಟ್ಟು ಚಿತ್ರದ ಕುಣಿರಿ ತಕಥೈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು.

ಶ್ರುತಿ ಹಾಸನ್; ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಮಲ್ ಹಾಸನ್ ಅವರ ಪುತ್ರಿ ಆಗಿರುವ ಶ್ರುತಿ ಹಾಸನ್ ಅವರು ಈಗಾಗಲೇ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಯಶಸ್ವಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಪಾರ್ವತಿ ಮೆನನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪೃಥ್ವಿ ಚಿತ್ರದ ನೆನಪಿದು ನೆನಪಿದು ಹಾಡನ್ನು ಹಾಡುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ.

ಧನುಷ್; ತಮಿಳು ಚಿತ್ರರಂಗದ ಖ್ಯಾತ ನಟ ನಿರ್ದೇಶಕ ನಿರ್ಮಾಪಕ ಆಗಿರುವ ಸವ್ಯಸಾಚಿ ನಟ ಧನುಷ್ ರವರು ಹಾಡುಗಾರಿಕೆಯಲ್ಲಿ ಕೂಡ ತಮ್ಮ ಚಾತುರ್ಯತೆ ಹಾಗೂ ಛಾಪನ್ನು ಮೂಡಿಸಿದ್ದಾರೆ. ಈಗಾಗಲೇ ನಟ ಧನುಷ್ ಅವರು ಹಾಡಿರುವಂತಹ ಹಲವಾರು ತಮಿಳು ಹಾಡುಗಳು ನೂರಾರು ಮಿಲಿಯನ್ ವೀಕ್ಷಣೆಯನ್ನು ಪಡೆದಿರುವುದನ್ನು ನೀವು ಕೂಡ ನೋಡಿದ್ದೀರಾ. ನಟ ಧನುಷ್ ರವರು ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ವಜ್ರಕಾಯ ಚಿತ್ರದ ಯಾಕಮ್ಮ ನಗ್ತೀಯ ಹಾಡನ್ನು ಕೂಡ ಹಾಡಿದ್ದಾರೆ ಇದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

dhanush nithya menen | ಕನ್ನಡದ ಚಿತ್ರಗಳಿಗೆ ಹಾಡನ್ನು ಹಾಡಲು ಬಂದ ಇತರ ಸೌತ್ ಇಂಡಿಯಾದ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೇ?? ಇವರೆಲ್ಲ ಹಾಡನ್ನು ಹಾಡಿದ್ದಾರೆ.
ಕನ್ನಡದ ಚಿತ್ರಗಳಿಗೆ ಹಾಡನ್ನು ಹಾಡಲು ಬಂದ ಇತರ ಸೌತ್ ಇಂಡಿಯಾದ ಸೆಲೆಬ್ರಿಟಿಗಳು ಯಾರ್ಯಾರು ಗೊತ್ತೇ?? ಇವರೆಲ್ಲ ಹಾಡನ್ನು ಹಾಡಿದ್ದಾರೆ. 4

ನಿತ್ಯ ಮೆನನ್; ಮೂಲತಹ ನಟಿ ನಿತ್ಯ ಮೆನನ್ ರವರು ಕನ್ನಡದವರು ಆಗಿದ್ದರೂ ಕೂಡ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿದ್ದಾರೆ. ತಾವೇ ನಟಿಸಿರುವ ಮೈನಾ ಚಿತ್ರದಲ್ಲಿ ಮೊದಲ ಮಳೆಯಂತೆ ಹಾಡನ್ನು ಹಾಡಿದ್ದಾರೆ. ಇದನ್ನು ನೀವು ಸಿನಿಮಾದಲ್ಲಿ ಅಥವಾ ಯೂಟ್ಯೂಬ್ನಲ್ಲಿ ಕೇಳಿದಾಗ ಶ್ರೇಯಾ ಘೋಷಲ್ ಹಾಗೂ ಸೋನು ನಿಗಮ್ ರವರ ಧ್ವನಿಯನ್ನು ನೀವು ಕೇಳಬಹುದು. ಆದರೆ ಇದರ ಸೋಲೋ ಹಾಡನ್ನು ಸ್ವತಹ ನಿತ್ಯಾ ಮೆನನ್ ರವರು ಹಾಡಿದ್ದಾರೆ. ನೀವು ಕೂಡ ಈ ಹಾಡುಗಳನ್ನು ಕೇಳಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.