ನಾನು ಗೆದಿದ್ದು ತಂದೆ ತಾಯಿಯ ಆಶೀರ್ವಾದ ದಿಂದಲ್ಲ! ಗೆದ್ದಮೇಲೆ ಮಂಜು ಪಾವಗಡ ಹೇಳಿದ್ದೇನು ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಎಲ್ಲರ ನಿರೀಕ್ಷೆಯಂತೆ ಅಂತೂ ಇಂತೂ ಮಂಜು ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಹೊರಬಂದಿದ್ದಾರೆ. ತಂದೆತಾಯಿಯನ್ನು ಸಾಕುವ ನಿಟ್ಟಿನಲ್ಲಿ ಉತ್ತಮ ಜೀವನದ ಕನಸು ಕಂಡು ಮಂಜು ಪಾವಗಡ ರವರು ಪಾವಗಡದಿಂದ ಬೆಂಗಳೂರಿನ ಜೆಪಿ ನಗರದ ಪೆಟ್ರೋಲ್ ಬಂಕಿಗೆ ಬರುತ್ತಾರೆ.

ನಂತರ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಾ ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾರೆ. ನಂತರ ಆ ಕಾರ್ಯಕ್ರಮದ ಮೂಲಕ ಕನ್ನಡ ಪ್ರೇಕ್ಷಕರ ಪ್ರೀತಿಯನ್ನು ಗೆಲ್ಲುತ್ತಾರೆ ಮಂಜು ಪಾವಗಡ ರವರು. ಈಗ ಅದೇ ಪ್ರೀತಿಯಿಂದಾಗಿ ಮಂಜು ಪಾವಗಡ ರವರು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿಜೇತರಾಗಿ ಮೂಡಿಬಂದಿದ್ದಾರೆ. ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಗೆದ್ದ ಮೇಲೆ ಸಂದರ್ಶನವೊಂದರಲ್ಲಿ ನನ್ನ ತಂದೆ ತಾಯಿಗಳಿಂದಲ್ಲ ಎಂದು ಹೇಳಿದ್ದಾರೆ.

ಹೌದು ಸ್ನೇಹಿತರೆ ಹೀಗೆ ಹೇಳಿದ್ದಾರೆ ಎಂದಮಾತ್ರಕ್ಕೆ ತಪ್ಪು ತಿಳಿಯಬೇಡಿ. ಗೆದ್ದಾಗ ಎಲ್ಲರಿಗೂ ಧನ್ಯವಾದ ಹೇಳುವ ಸಂದರ್ಭದಲ್ಲಿ ಮಂಜು ಪಾವಗಡ ರವರು ಮೊದಲು ನನಗೆ ಈ ವೇದಿಕೆಗೆ ಹತ್ತಲು ಉತ್ತಮ ಅವಕಾಶ ಸಿಕ್ಕಿದ್ದು ಮಜಾಭಾರತ ತಂಡದಿಂದ.ಹೀಗಾಗಿ ನಾನು ನನ್ನ ಮೊದಲ ಧನ್ಯವಾದವನ್ನು ಮಜಾ ಭಾರತ ತಂಡಕ್ಕೆ ನೀಡುತ್ತೇನೆ ಎಂದಿದ್ದಾರೆ. ಇನ್ನು ನನ್ನ ತಂದೆ ತಾಯಿಯ ಹೆಸರನ್ನು ಹೇಳಲಿಲ್ಲ ಎಂದ ಮಾತ್ರಕ್ಕೆ ಅವರ ಮೇಲೆ ಪ್ರೀತಿ ಇಲ್ಲ ಎಂದಲ್ಲ. ಅವರು ಕೂಡ ನನ್ನ ಗೆಲುವಿಗೆ ಸಾಕಷ್ಟು ದೇವರಲ್ಲಿ ಪ್ರಾರ್ಥಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರ ಹೆಸರುಗಳನ್ನು ಹೇಳದಿದ್ದರೂ ಸಹ ಅವರು ಕೂಡ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ಹೇಳಿಕೊಂಡಿದ್ದಾರೆ.

Comments are closed.