ನಾನು ಮಂಜು ಜಗತ್ತಿನ ಸರ್ವ ಶ್ರೇಷ್ಟ ಪ್ರೇಮಿಗಳ ತರ ಎಂದ ದಿವ್ಯ, ರೊಚ್ಚಿಗೆದ್ದ ಮಂಜು ಫ್ಯಾನ್ಸ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತೂ ಕೊನೆಗೆ ದೊಡ್ಡಮನೆಯ ದೊಡ್ಡ ಆಟ ಬಿಗ್ ಬಾಸ್ ಮುಕ್ತಾಯ ಕಂಡಿದೆ. ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯ ನಂಬರ್ ಒನ್ ಪಟ್ಟವನ್ನು ಗೆದ್ದು ಸರಿಸುಮಾರು ಎಲ್ಲಾ ಸೇರಿ 60 ಲಕ್ಷ ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಎಲ್ಲರೂ ಈಗ ಸುದ್ದಿಮಾಧ್ಯಮಗಳಲ್ಲಿ ಸಂದರ್ಶ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರ್ಗಿ ಅವರ ನಡುವಿನ ನಿಜಜೀವನದ ಕಿತ್ತಾಟ ಮುಂದುವರಿದಿದೆ. ಮತ್ತೊಂದು ಕಡೆ ದಿವ್ಯ ಉರುಡುಗ ರವರು ಅರವಿಂದ್ ಕೆಪಿ ರವರು ಸೋತಿರುವ ದುಃಖದಲ್ಲಿ ಇದ್ದಾರೆ. ಇನ್ನು ಇತ್ತ ಮಂಜು ಪಾವಗಡ ರವರು ಗೆದ್ದಿರುವ ಖುಷಿಯಲ್ಲಿದ್ದಾರೆ ಹಾಗೂ ಅದಕ್ಕಿಂತ ಹೆಚ್ಚಿನ ಖುಷಿಯನ್ನು ದಿವ್ಯ ಸುರೇಶ್ ಅವರು ಅನುಭವಿಸುತ್ತಿದ್ದಾರೆ.

ದಿವ್ಯ ಸುರೇಶ್ ರವರು ತಮ್ಮನ್ನು ಹಾಗೂ ಮಂಜು ಪಾವಗಡ ರವರನ್ನು ವಿಶ್ವದ ಶ್ರೇಷ್ಠ ಪ್ರೇಮಿಗಳಾದ ಕೃಷ್ಣ ಹಾಗೂ ರಾಧೆಗೆ ಹೋಲಿಸಿಕೊಂಡು ಸಂದರ್ಶನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಮಂಜು ಪಾವಗಡ ರವರು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮದುವೆಗೆ ತಯಾರಿ ಮಾಡಿಕೊಳ್ಳಬೇಕು ಎಂಬುದಾಗಿ ಕೂಡ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇನ್ನು ದಿವ್ಯ ಸುರೇಶ್ ಅವರು ಸಂದರ್ಶನಗಳಲ್ಲಿ ನಾನು ಎಲಿಮಿನೇಟ್ ಆಗಿ ಬರುವ ದಿನದ ರಾತ್ರಿಯಲ್ಲಿ ನಾನು ಮತ್ತು ಮಂಜು ಭುಜಕ್ಕೆ ಭುಜ ಕೊಟ್ಟು ಕೂತಿದ್ದೆವು. ಅವತ್ತು ಅವನನ್ನು ಬಿಟ್ಟು ಬರುವಾಗ ಬ್ರೇಕಪ್ ಗಿಂತಲೂ ಹೆಚ್ಚಿನ ಬೇಸರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ನಾನು ಮಂಜು ಪಾವಗಡ ರವರ ತಂದೆ ತಾಯಿಯ ಬಳಿ ಮಂಜುವಿನ ಮದುವೆ ಕುರಿತಂತೆ ಮಾತನಾಡಿದ್ದು ಬೇಗ ಮದುವೆ ಮಾಡಿಬಿಡಿ ಎಂದು ಹೇಳಿದ್ದೇನೆ ಅದಕ್ಕೆ ಅವರ ತಂದೆ-ತಾಯಿ ಕೂಡ ಒಪ್ಪಿ ಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಏನು ಹೇಳುತ್ತಿದ್ದಾರೆ ಗೊತ್ತಾ. ಹೌದು ಇದೆಲ್ಲ ಮಂಜು ಪಾವಗಡ ರವರು ಗೆದ್ದಿರುವ ಲಕ್ಷಾಂತರ ರೂಪಾಯಿ ಹಣದ ಮಹಿಮೆ ಎಂದು ದಿವ್ಯ ಸುರೇಶ್ ರವರನ್ನು ಛೇಡಿಸಿದ್ದಾರೆ. ದಿವ್ಯ ಸುರೇಶ್ ರವರು ಗೌರವ ಹಾಗೂ ಪ್ರೀತಿ ಕೊಡುತ್ತಿರುವುದು ಮಂಜು ಪಾವಗಡ ರವರಿಗೆ ಅಲ್ಲ ಅವರು ಗೆದ್ದಿರುವ 53 ಲಕ್ಷ ರೂಪಾಯಿ ಬಹುಮಾನಕ್ಕೆ ಎಂದು ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಮಂಜು ಪಾವಗಡ ರವರು ದಿವ್ಯ ಸುರೇಶ ರವರನ್ನೇ ಮದುವೆಯಾಗುತ್ತಾರಾ ಅಥವಾ ಯಾರನ್ನು ಮದುವೆಯಾಗುತ್ತಾರೆ ಕಾದುನೋಡಬೇಕಾಗಿದೆ.

Comments are closed.