ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರು ಕೂಡ ಮಾಸ್ಟರ್ ಮಂಜುನಾಥ್ ಸಿನೆಮಾಗಳಿಂದ ದೂರವಾಗಿದ್ದು ಯಾಕೆ ಗೊತ್ತೇ?? ನಿಜಕ್ಕೂ ತಿಳಿದರೆ ಕಣ್ಣೀರು ಬರುತ್ತದೆ

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನೀವು ಸ್ಟಾರ್ ನಟರ ಕುರಿತಂತೆ ಜನಪ್ರಿಯತೆಯನ್ನು ನೋಡಿರಬಹುದು. ಆದರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲನಟರು ಜನಪ್ರಿಯತೆ ಎಷ್ಟು ದೊಡ್ಡದಾಗಿತ್ತು ಎಂಬುದಕ್ಕೆ ಮಾಸ್ಟರ್ ಮಂಜುನಾಥ ರವರೇ ಸಾಕ್ಷಿ. ಅವರಿಗೆ ನಟಿಸಲು ಚಿತ್ರಗಳ ಮೇಲೆ ಚಿತ್ರಗಳ ಆಫರ್ ಕೂಡ ಸಾಲುಸಾಲಾಗಿ ಬರುತ್ತಿತ್ತು.

ಆ ಕಾಲದಲ್ಲಿ ಬಾಲನಟ ರ ಬೇಡಿಕೆ ಹೆಚ್ಚಾಗಿತ್ತು. ಅತೀ ಕಡಿಮೆ ಸಮಯದಲ್ಲಿ 60ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ತೆಲುಗು ಗಳಂತಹ ಪರಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಮಾಸ್ಟರ್ ಮಂಜುನಾಥ್ ಎಂದಾಗ ನಮಗೆ ಮೊದಲಿಗೆ ನೆನಪಾಗುವುದು ನಮ್ಮೆಲ್ಲರ ನೆಚ್ಚಿನ ಶಂಕ್ರಣ್ಣ. ಶಂಕರ್ ನಾಗ್ ಹಾಗೂ ಮಾಸ್ಟರ್ ಮಂಜುನಾಥ್ ರವರ ಜೋಡಿ ಅಂದಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು.

master manjunaath 1 | ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರು ಕೂಡ ಮಾಸ್ಟರ್ ಮಂಜುನಾಥ್ ಸಿನೆಮಾಗಳಿಂದ ದೂರವಾಗಿದ್ದು ಯಾಕೆ ಗೊತ್ತೇ?? ನಿಜಕ್ಕೂ ತಿಳಿದರೆ ಕಣ್ಣೀರು ಬರುತ್ತದೆ
ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರು ಕೂಡ ಮಾಸ್ಟರ್ ಮಂಜುನಾಥ್ ಸಿನೆಮಾಗಳಿಂದ ದೂರವಾಗಿದ್ದು ಯಾಕೆ ಗೊತ್ತೇ?? ನಿಜಕ್ಕೂ ತಿಳಿದರೆ ಕಣ್ಣೀರು ಬರುತ್ತದೆ 3

ಬಾಲನಟನಾಗಿ ಇಷ್ಟೊಂದು ಯಶಸ್ಸನ್ನು ಸಾಧಿಸಿದ್ದರು ಕೂಡ ಮತ್ತೆ ಚಿತ್ರರಂಗದಲ್ಲಿ ಯಾಕೆ ಮುಂದುವರಿಯಲಿಲ್ಲ ನಂತರ ಅವರು ಏನಾಗಿದ್ದಾರೆ ಈಗ ಏನು ಮಾಡುತ್ತಿದ್ದಾರೆ ಎಂಬುದರ ಕುರಿತಂತೆ ವಿವರವಾಗಿ ತಿಳಿಯೋಣ ಬನ್ನಿ. ಮಾಸ್ಟರ್ ಮಂಜುನಾಥ್ ರವರು ಸಿನಿಮಾರಂಗಕ್ಕೆ ಬೇಕು ಎಂದು ಕಾಲು ಇಟ್ಟವರಲ್ಲ. ಮೂರು ವರ್ಷದವರೆಗೆ ಬೇಕಾದರೆ ಚಿತ್ರರಂಗಕ್ಕೆ ಬಾಲನಟನಾಗಿ ಕಾಲಿಡುತ್ತಾರೆ. ಹೌದು ಅದು ಕೂಡ ಟೈಗರ್ ಪ್ರಭಾಕರ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರಂತಹ ಘಟಾನುಘಟಿಗಳು ನಟಿಸಿರುವ ಅಜಿತ್ ಎನ್ನುವ ಚಿತ್ರದ ಮೂಲಕ.

ಹೀಗೆ ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನು ನೋಡಿ ತಾವು ನಿರ್ಮಿಸುತ್ತಿದ್ದ ನೋಡಿ ಸ್ವಾಮಿ ನಾವು ಇರೋದೆ ಹೀಗೆ ಎಂಬ ಸಿನಿಮಾಗೆ ಹಾಕಿಕೊಳ್ಳುತ್ತಾರೆ ಶಂಕರನಾಗ್ ರವರು. ಇದರ ಯಶಸ್ಸಿನ ನಂತರ ಹಿಂದಿನಲ್ಲಿ ಉತ್ಸವ್ ಎನ್ನುವ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಕೇವಲ ಶಂಕರ್ನಾಗ್ ರವರೊಂದಿಗೆ ಮಾತ್ರವಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಾಶಿನಾಥ ರವರ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಹೇಗೆ ಹಲವಾರು ಖ್ಯಾತನಾಮರ ಜೊತೆಗೆ ಬಾಲನಟನಾಗಿ ತೆರೆಯನ್ನು ಹಂಚಿಕೊಳ್ಳುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾಸ್ಟರ್ ಮಂಜುನಾಥ್ ರವರಿಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾಲ್ಗುಡಿ ಡೇಸ್. ಇದಾದ ನಂತರ ಕನ್ನಡ ತೆಲುಗು ಹಿಂದಿ ಹೀಗೆ ಪ್ರತಿಯೊಂದು ಭಾಷೆಗಳಲ್ಲಿಯೂ ಕೂಡ ತನ್ನ ನಟನೆಯನ್ನು ತೋರಿಸುವ ಮೂಲಕ ತಾನೆಂತಹ ಮಹಾನ್ ಕಲಾವಿದ ಎನ್ನುವುದನ್ನು ಚಿಕ್ಕವಯಸ್ಸಿನಲ್ಲಿಯೇ ಸಾಬೀತುಪಡಿಸುತ್ತಾರೆ.

master manjunaath 1 1 | ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರು ಕೂಡ ಮಾಸ್ಟರ್ ಮಂಜುನಾಥ್ ಸಿನೆಮಾಗಳಿಂದ ದೂರವಾಗಿದ್ದು ಯಾಕೆ ಗೊತ್ತೇ?? ನಿಜಕ್ಕೂ ತಿಳಿದರೆ ಕಣ್ಣೀರು ಬರುತ್ತದೆ
ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದರು ಕೂಡ ಮಾಸ್ಟರ್ ಮಂಜುನಾಥ್ ಸಿನೆಮಾಗಳಿಂದ ದೂರವಾಗಿದ್ದು ಯಾಕೆ ಗೊತ್ತೇ?? ನಿಜಕ್ಕೂ ತಿಳಿದರೆ ಕಣ್ಣೀರು ಬರುತ್ತದೆ 4

ಇಷ್ಟೆಲ್ಲ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದ ಮಾಸ್ಟರ್ ಮಂಜುನಾಥ್ ರವರು ಸಡನ್ನಾಗಿ ಚಿತ್ರರಂಗದಿಂದ ಕಾಣೆಯಾಗುತ್ತಾರೆ. ಎಲ್ಲರೂ ಈ ಕುರಿತಂತೆ ಚಿಂತಿತರಾಗುತ್ತಾರೆ. ಸ್ವತಃ ಮಾಸ್ಟರ್ ಮಂಜುನಾಥ್ ರವರೆ ಹೇಳುವಂತೆ ಈ ಸಂದರ್ಭದಲ್ಲಿ ತಮ್ಮ ಶಿಕ್ಷಣದ ಕುರಿತಂತೆ ಮಾಸ್ಟರ್ ಮಂಜುನಾಥ್ ರವರು ಗಮನ ವಹಿಸಬೇಕಾಗಿತ್ತು. ಸ್ಕೂಲ್ ರಜೆ ಮಾಡಿ ಚಿತ್ರೀಕರಣದಲ್ಲಿ ಭಾಗವಹಿಸ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟು ಮಾತ್ರವಲ್ಲದೆ ಅವರ ನೆಚ್ಚಿನ ಗುರುವಾಗಿದ್ದ ಶಂಕರ್ ನಾಗ್ ರವರು ಕೂಡ ಅಕಾಲಿಕವಾಗಿ ಮರಣವನ್ನು ಹೊಂದಿದರು. ಈ ಎಲ್ಲಾ ವಿಚಾರಗಳು ಮಾಸ್ಟರ್ ಮಂಜುನಾಥ್ ರವರನ್ನು ಚಿತ್ರರಂಗದಿಂದ ಹೊರಬರುವಂತೆ ಮಾಡಿತು ಎಂದರೆ ತಪ್ಪಾಗಲಾರದು.

ಕೇವಲ ಇಷ್ಟೇ ಆಗಿದ್ದರೆ ಸರಿ ಇರುತ್ತಿತ್ತು ಆದರೆ ಅವರ ತಂದೆ ಕೂಡ ಇದೇ ಸಂದರ್ಭದಲ್ಲಿ ಅವರನ್ನು ಆಗಲಿ ಹೋಗುತ್ತಾರೆ. ಹೀಗಾಗಿ ವಿದ್ಯಾಭ್ಯಾಸವೇ ತರಂಗ ಉಳಿದಿರುವ ಕೊನೆಯ ದಾರಿಯನ್ನು ವುದಾಗಿ ಬರುತ್ತಿದ್ದ ಆಫರ್ ಗಳನ್ನೆಲ್ಲ ತಿರಸ್ಕರಿಸಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ತನ್ನ ವಯಸ್ಸಿಗೆ ಹೀರೋ ಗಳಿಗಿಂತ ಹೆಚ್ಚಾಗಿ ಸಿನಿಮಾದಲ್ಲಿ ಪ್ರೇಕ್ಷಕರಿಂದ ಚಪ್ಪಾಳೆ ಹಾಗೂ ಶಿಳ್ಳೆಗಳನ್ನು ಗಿಟ್ಟಿಸಿ ಕೊಳ್ಳುತ್ತಿದ್ದರು. ಒಂದು ಕಾಲದಲ್ಲಿ ಸ್ಟಾರ್ ನಟರಷ್ಟೇ ಜನಪ್ರಿಯತೆಯನ್ನು ಹೊಂದಿರುವಂತಹ ಸ್ಟಾರ್ ನಟ ಆಗಿದ್ದರು. ವಿದ್ಯಾಭ್ಯಾಸವನ್ನು ಮುಂದುವರಿಸಿ ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಪಿಆರ್ ಕನ್ಸಲ್ಟೆನ್ಸಿ ಯಲ್ಲಿ ಕೆಲಸ ಪ್ರಾರಂಭಿಸುತ್ತಾರೆ.

ಜೀವನದಲ್ಲಿ ಮಾಸ್ಟರ್ ಮಂಜುನಾಥ್ ರವರು ಸೆಟಲ್ ಆದ ನಂತರವೂ ಕೂಡ ಅವರಿಗೆ ಕನ್ನಡ ಚಿತ್ರರಂಗದಿಂದ ಹಲವಾರು ಅವಕಾಶಗಳು ಹುಡುಕಿ ಬಂದಿದ್ದವು. ಆದ್ರೆ ಕನ್ನಡ ಚಿತ್ರರಂಗದಲ್ಲಿ ಅವರು ನಟಿಸುತ್ತಿದ್ದ ಸಂದರ್ಭದಲ್ಲಿ ಇದ್ದಂತಹ ಕಥೆಯ ವಿಧ ಹಾಗೂ ಆಸೆಗಳು ಇಂದಿನ ಸಿನಿಮಾದಲ್ಲಿ ಇಲ್ಲದಿದ್ದ ಕಾರಣ ಮತ್ತು ತಮ್ಮ ಗುರುವಾಗಿ ಇರುವಂತಹ ಶಂಕರ್ ನಾಗ್ ಅವರನ್ನು ಕಳೆದುಕೊಂಡ ನಂತರ ಮತ್ತೆ ಸಿನಿಮಾದಲ್ಲಿ ನಟಿಸಬಾರದು ಎಂದುಕೊಂಡು ಅವರು ತೆಗೆದುಕೊಂಡಿದ್ದ ನಿರ್ಧಾರ ಮತ್ತೆ ಮಾಸ್ಟರ್ ಮಂಜುನಾಥ್ ರವರು ನಟನೆ ಅವಕಾಶ ಸಿಕ್ಕರೆ ಕೂಡ ಮಾಡಲು ಹೋಗಲಿಲ್ಲ. ಅದೇನೇ ಇರಲಿ ಒಂದು ಕಾಲದಲ್ಲಿ ಮಾಸ್ಟರ್ ಆಗಿ ಮಿಂಚಿದವರು ಎಂದು ಫ್ಯಾಮಿಲಿ ಮ್ಯಾನ್ ಆಗಿ ಮಿಂಚುತ್ತಿದ್ದಾರೆ. ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಾಡಲಿ ಎಂದು ಹಾರೈಸೋಣ. ಹಾಗೂ ಒಮ್ಮೆ ಇವರನ್ನು ಸಿನಿಮಾದಲ್ಲಿ ನೋಡಬೇಕು ಎಂದು ಕಾದು ಕುಳಿರಿತುವ ನಮ್ಮಂತಹ ಅಭಿಮಾನಿಗಳಿಗೆ ಒಮ್ಮೆ ನಟನೆ ಮಾಡಿ ನನ್ನ ಆಸೆ ಈಡೇರಿಸಿ ಎಂದು ಈ ಸಮಯದಲ್ಲಿ ಮನವಿ ಮಾಡುತ್ತಿದ್ದೇವೆ.

Comments are closed.