ನರೇಶ್ ರವರ ಬಗ್ಗೆ ಮಾತನಾಡಿದ ನಟಿ ಪೂಜಿತ: ಹೇಳಿದ್ದೇನು ಗೊತ್ತೇ?? ನರೇಶ್ ನಿಜಕ್ಕೂ ಎಂತವರು ಗೊತ್ತೇ, ನರೇಶ್ ರವರ ಮತ್ತೊಂದು ಮುಖದ ಅನಾವರಣ.
ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ಎಲ್ಲಿ ನೋಡಿದ್ರು ಕೂಡ ತೆಲುಗು ನಟ ನರೇಶ್ ಹಾಗೂ ಕನ್ನಡ ಮೂಲದ ನಟಿ ಆಗಿರುವ ಪವಿತ್ರ ಲೋಕೇಶ್ ರವರ ಮದುವೆ ವಿವಾ’ದದ ಕುರಿತಂತಹ ಸುದ್ದಿಗಳೇ ಓಡಾಡುತ್ತಿವೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವ ಕುರಿತಂತೆ ಎರಡೂ ಕಡೆಗಳಿಂದ ಚರ್ಚೆ ನಡೆಯುತ್ತಲೇ ಇದೆ. ಹೌದು ಗೆಳೆಯರೇ ಒಂದು ಕಡೆಯಲ್ಲಿ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ರವರು ಇದ್ದರೆ ಇನ್ನೊಂದು ಕಡೆ ನರೇಶ್ ರವರ ಮೂರನೇ ಪತ್ನಿ ಆಗಿರುವ ರಮ್ಯಾ ರಘುಪತಿ ರವರು ಇದ್ದಾರೆ. ಈ ಹಿಂದೆಯಷ್ಟೇ ರಮ್ಯಾ ತಮ್ಮ ಪತಿ ನರೇಶ್ ರವರನ್ನು ಹೆಣ್ಣು ಬಾಕ ಎನ್ನುವುದಾಗಿ ಕರೆದು ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದರು.
ಈಗಾಗಲೇ ನರೇಶ್ ರವರ ಈ ಪ್ರಕರಣದ ಕುರಿತಂತೆ ಹಲವಾರು ಕಲಾವಿದರು ಕೂಡ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಪೂಜಿತಾ ರವರು ಕೂಡ ಪ್ರತಿಕ್ರಿಯಿಸಿದ್ದಾರೆ. ಹೌದು ಗೆಳೆಯರೆ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿರುವ ಪೂಜಿತಾ ರವರು ಈ ಪ್ರಕರಣದ ಕುರಿತಂತೆ ಹಾಗೂ ನರೇಶ್ ರವರ ಕುರಿತಂತೆ ಮಾತನಾಡಿದ್ದಾರೆ. ನಾನು ಹಾಗೂ ನರೇಶ್ ಹಲವಾರು ವರ್ಷಗಳ ಸ್ನೇಹಿತರು. ಅವರ ಸಿನಿಮಾಗಳಲ್ಲಿ ನಟಿಯಾಗಿ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ.
ನರೇಶ್ ಒಬ್ಬ ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಆತ ನನಗೂ ಸೇರಿದಂತೆ ಚಿತ್ರರಂಗದ ಹಲವಾರು ಜನರಿಗೆ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ ಆದರೆ ಇದುವರೆಗೂ ಅದರ ಬಗ್ಗೆ ಹೇಳಿಕೊಂಡಿಲ್ಲ. ನಾನು ಹಲವಾರು ಬಾರಿ ಅವರ ಮನೆಗೆ ಸಮಾರಂಭಗಳಲ್ಲಿ ಭಾಗಿಯಾಗಿದ್ದೇನೆ. ಯಾರೊಂದಿಗೂ ಅವರು ಹದ್ದು ಮೀರಿ ನಡೆದುಕೊಂಡಿರುವ ಉದಾಹರಣೆಗಳಿಲ್ಲ ಎಂಬುದಾಗಿ ನರೇಶ್ ರವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.
Comments are closed.