ಐಪಿಎಲ್ ನಲ್ಲಿ ಹಾಗೆ ಉಳಿದ ಬಳಿಕ ಭಾವುಕರಾಗಿ ಮನವಿ ಮಾಡಿದ ರೈನಾ, ತೆಗೆದುಕೊಂಡ ನಿರ್ಧಾರ ಏನು ಗೊತ್ತೇ?? ಈತನಿಗೆ ಇಂತ ಪರಿಸ್ಥಿತಿಯೇ ಎಂದು ಫ್ಯಾನ್ಸ್ ಕಣ್ಣೀರಿಟ್ಟಿದ್ದು ಯಾಕೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ರ ಬಹು ನಿರೀಕ್ಷಿತ ಮೆಗಾ ಹರಾಜು ಪ್ರಕ್ರಿಯೆ ಈಗಾಗಲೇ ಯಶಸ್ವಿಯಾಗಿ ಮುಗಿದಿರುವುದು ಎಲ್ಲರಿಗೂ ತಿಳಿದಿದೆ. ಇನ್ನು ಈ ಬಾರಿಯ ಐಪಿಎಲ್ ಸಾಕಷ್ಟು ಕಾರಣಗಳಿಗಾಗಿ ನಿರಾಶೆಯನ್ನು ಕೂಡ ತಂದುಕೊಡಲಿದೆ. ಅದರಲ್ಲಿ ಪ್ರಮುಖ ಕಾರಣವೆಂದರೆ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳು ಕೂಡ ಖರೀದಿಸದೆ ಇರುವುದು. ಹೌದು ಒಂದು ಕಾಲದಲ್ಲಿ ಐಪಿಎಲ್ ಎಂದರೆ ಸುರೇಶ್ ರೈನಾ ಸುರೇಶ್ ರೈನಾ ಎಂದರೆ ಐಪಿಎಲ್ ಎಂಬಷ್ಟರ ಮಟ್ಟಿಗೆ ಜನಪ್ರಿಯತೆ ಇತ್ತು.
ಆದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅವರು ಮಾರಾಟವಾಗಿದೆ ಉಳಿದುಕೊಂಡಿರುವುದು ಸಾಕಷ್ಟು ಬೇಸರಕ್ಕೆ ಕಾರಣವಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಅವರ ಮೂಲ ಬೆಲೆ 2 ಕೋಟಿ ಆಗಿತ್ತು. ಅವರು 12 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಟವಾಡಿದ್ದ ರಿಂದ ಕನಿಷ್ಠಪಕ್ಷ ಅವರಾದರೂ ಖರೀದಿಸಬಹುದು ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ ತಂಡದವರು ಒಮ್ಮೆಯೂ ಕೂಡ ಸುರೇಶ್ ಅವರವರಿಗೆ ಬಿಡ್ ಮಾಡಲಿಲ್ಲ. ಇದಾದನಂತರ ಸುರೇಶ್ ರೈನಾ ಅವರು ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದರು. ಈ ಸಂದರ್ಭದಲ್ಲಿ ಬಿಸಿಸಿಐಗೆ ಒಂದು ವಿಶೇಷ ಕೋರಿಕೆಯನ್ನು ನೀಡಿದ್ದಾರೆ.
ಅದೇನೆಂದರೆ ಒಂದುವೇಳೆ ಐಪಿಎಲ್ನಲ್ಲಿ ಮಾರಾಟವಾಗದೆ ಉಳಿದುಕೊಂಡರೆ ಅಥವಾ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕೂಡ ಸ್ಥಾನ ಪಡೆದಿದ್ದ ಆಟಗಾರರನ್ನು, ವಿದೇಶಿ ಕ್ರಿಕೆಟ್ ಲೀಗ್ ಗಳಾಗಿರುವ ಸಿಪಿಎಲ್ ಅಥವಾ ಬಿಗ್ ಬಾಸ್ ನಲ್ಲಿ ಆಡಲು ಬಿಸಿಸಿಐ ಅನುವು ಮಾಡಿಕೊಡಬೇಕು ಎನ್ನುವುದನ್ನು. ಅಲ್ಲಿ ಆಟಗಾರರು ಆಟವಾಡಿದ ನಂತರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಂತಹ ಅವಕಾಶ ದೊರೆತಂತಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.