ಹಿರಿಯ ನಟ ರಾಜೇಶ್ ರವರು ಇದ್ದಕ್ಕಿದ್ದ ಹಾಗೆ ಖ್ಯಾತ ನಟ ದರ್ಶನ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಒಮ್ಮೆ ಶಾಕ್ ಆದ ಜನರು.
ನಟ ದರ್ಶನ್ ಅವರೆಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ, ಯಾರಿಗೆ ತಾನೇ ಅವರ ಸ್ವಭಾವ ಗೊತ್ತಿಲ್ಲ.. ಎಲ್ಲರನ್ನು ತಮ್ಮ ಸರಳತೆಯಿಂದಲೇ ಮೆಚ್ಚಿಸುವವರು ನಟ ದರ್ಶನ್. ಇದುವರೆಗೂ ಅದೆಷ್ಟು ಜನರಿಗೆ ಇವರಿಂದ ಸಹಾಯ ಆಗಿದ್ಯೋ ಲೆಕ್ಕ ಇಲ್ಲ, ಪ್ರತಿವರ್ಷ ಹಲವು ಮಕ್ಕಳಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಅನೇಕ ಕುಟುಂಬಗಳಿಗೆ ಸಹಾಯ ಮಾಡ್ತಾರೆ. ಆದರೆ ತಾವು ಮಾಡಿರುವ ಕೆಲಸಗಳ ಬಗ್ಗೆ ಎಂದಿಗೂ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಡಿಬಾಸ್. ಅದೇ ಅವರ ದೊಡ್ಡ ಗುಣ. ಆದರೆ ದರ್ಶನ್ ಅವರ ಬಗ್ಗೆ ಸಾಕಷ್ಟು ಕಲಾವಿದರು ಮಾತನಾಡುವುದನ್ನು ನೋಡಿದ್ದೇವೆ..
ದರ್ಶನ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿಯ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗಾಗಿ ಮತ್ತು ಹೊಸ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ಅವರ ಈ ಸಿನಿಮಾ ಅಕ್ಷರ ಕ್ರಾಂತಿ ಮೇಲೆ ಕೇಂದ್ರೀಕರಿಸಿರುವ ಕಥೆ ಆಗಿದೆ, ಬರೋಬ್ಬರಿ 75 ಕೋಟಿ ಬಜೆಟ್ ನಲ್ಲಿ ಕ್ರಾಂತಿ ಸಿನಿಮಾ ತಯಾರಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಹ ದರ್ಶನ್ ಅವರು ನಟಿಸಲಿದ್ದು, ಮಾಲಾಶ್ರೀ ಅವರ ಮಗಳು ರಾಧನಾ ಈ ಸಿನಿಮಾ ನಾಯಕಿ ಆಗಿದ್ದಾರೆ.
ಇತ್ತೀಚೆಗೆ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಖ್ಯಾತ ನಟ ರಾಜೇಶ್ ನಟರಂಗ ಅವರು ಡಿಬಾಸ್ ದರ್ಶನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ದರ್ಶನ್ ಅವರು ಒಬ್ಬ ಅದ್ಭುತವಾದ ಮನುಷ್ಯ, ಸೆಟ್ ನಲ್ಲಿ ಬಹಳ ಸರಳವಾಗಿ ಇರುತ್ತಾರೆ. ಎಲ್ಲರೂ ಕಂಫರ್ಟಬಲ್ ಆಗಿರುವ ಜಾಗೆ ಮಾಡುತ್ತಾರೆ. ಅವರಿಗೆ ಯಾವುದೇ ಹ್ಯಾಂಗ್ ಓವರ್ ಇಲ್ಲ, ಅದು ನನಗೂ ತುಂಬಾ ಸಂತೋಷ ಕೊಟ್ಟ ವಿಷಯ. ತಲೆ ಮೇಲೆ ಕಿರೀಟ ಇಟ್ಟುಕೊಂಡು ಬಂದು ಎಲ್ಲರಿಗೂ ತೊಂದರೆ ಕೊಡುವ ಮನುಷ್ಯ ಅಲ್ಲ ಅವರು. ಅವರು ಎಷ್ಟು ಸಿಂಪಲ್ ಆಗಿದ್ದಾರೋ, ಅವರ ಜೊತೆಯಲ್ಲಿ ಇರುವವರನ್ನು ಕೂಡ ಅಷ್ಟೇ ಸಿಂಪಲ್ ಆಗಿರುವ ಹಾಗೆ ನೋಡಿಕೊಳ್ಳುತ್ತಾರೆ. ಅಂಥವರ ಜೊತೆಗೆ ಕೆಲಸ ಮಾಡೋದಕ್ಕೆ ತುಂಬಾ ಖುಷಿ ಆಗುತ್ತೆ..” ಎಂದಿದ್ದಾರೆ ಡಿಬಾಸ್.
Comments are closed.