Sneha Reddy: ಅಲ್ಲೂ ಅರ್ಜುನ್ ಸಂಸಾರದಲ್ಲಿ ಉಳಿ ಹಿಂಡಲು ಪ್ರಯತ್ನ ಪಟ್ಟ ಟಾಪ್ ನಟಿ ಯಾರು ಗೊತ್ತೇ? ಮದುವೆಯಾದ ನಟನ ಜೊತೆ ಏನಾಗಿತ್ತು ಗೊತ್ತೇ??
Sneha Reddy: ತೆಲುಗು ಚಿತ್ರರಂಗದಲ್ಲಿ ನಟ ಅಲ್ಲು ಅರ್ಜುನ್ (Allu Arjun) ಹಾಗೂ ಅವರ ಪತ್ನಿ ಸ್ನೇಹ ರೆಡ್ಡಿ ಬಹಳ ಕ್ಯೂಟ್ ಕಪಲ್ ಎಂದು ಹೆಸರು ಪಡೆದುಕೊಂಡಿದ್ದಾರೆ. ಈ ಜೋಡಿ ನೋಡಲು ಎಷ್ಟು ಮುದ್ದಾಗಿ ಕಾಣಿಸುತ್ತಾರೋ ಅಷ್ಟೇ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಸ್ನೇಹ ರೆಡ್ಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಅನೇಕ ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.. ಇದೀಗ ಈ ಜೋಡಿ ಬಗ್ಗೆ ಒಂದು ಹೊಸ ವಿಷಯ ಹರಿದಾಡುತ್ತಿದೆ.
![Sneha Reddy: ಅಲ್ಲೂ ಅರ್ಜುನ್ ಸಂಸಾರದಲ್ಲಿ ಉಳಿ ಹಿಂಡಲು ಪ್ರಯತ್ನ ಪಟ್ಟ ಟಾಪ್ ನಟಿ ಯಾರು ಗೊತ್ತೇ? ಮದುವೆಯಾದ ನಟನ ಜೊತೆ ಏನಾಗಿತ್ತು ಗೊತ್ತೇ?? 1 allu arjun rakul gossip went viral on internet | Sneha Reddy: ಅಲ್ಲೂ ಅರ್ಜುನ್ ಸಂಸಾರದಲ್ಲಿ ಉಳಿ ಹಿಂಡಲು ಪ್ರಯತ್ನ ಪಟ್ಟ ಟಾಪ್ ನಟಿ ಯಾರು ಗೊತ್ತೇ? ಮದುವೆಯಾದ ನಟನ ಜೊತೆ ಏನಾಗಿತ್ತು ಗೊತ್ತೇ??](http://kankaionline.com/wp-content/uploads/2023/04/allu-arjun-rakul-gossip-went-viral-on-internet-1024x536.jpg)
ಅದೇನೆಂದರೆ, ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರಿಗೆ ಸ್ನೇಹ ರೆಡ್ಡಿ ವಾರ್ನಿಂಗ್ ಕೊಟ್ಟಿದ್ದರಂತೆ. ಇತ್ತೀಚೆಗೆ ರಾಕುಲ್ ಪ್ರೀತ್ ಸಿಂಗ್ ಅವರು ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ನನಗೆ ಮತ್ತೊಂದು ಸಾರಿ ಅಲ್ಲು ಅರ್ಜುನ್ ಅವರೊಡನೆ ನಟಿಸಬೇಕು ಎಂದು ಆಸೆ ಇದೆ ಎಂದು ಹೇಳಿದ್ದರು. ಆ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ನೇಹಾ ರೆಡ್ಡಿ ಅವರು ನಿನಗೆ ವಾರ್ನಿಂಗ್ ಕೊಟ್ಟಿದ್ದರು ಈ ರೀತಿ ಹೇಳ್ತಿದ್ದೀಯಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಷ್ಟಕ್ಕೂ ಸ್ನೇಹ ರೆಡ್ಡಿ ಅವರು ರಾಕುಲ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದೇಕೆ? ಈ ಹಿಂದೆ ರಾಕುಲ್ ಅವರು ಅಲ್ಲು ಅರ್ಜುನ್ ಅವರ ಜೊತೆಗೆ ಸರೈನೋಡು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ಮುಗಿದು ಅಲ್ಲು ಅರ್ಜುನ್ ಅವರು ಮನೆಗೆ ಬಂದಮೇಲು ಕೂಡ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರಂತೆ. ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಎಲ್ಲೇ ಹೋಗಲಿ ಪದೇ ಪದೇ ಫೋನ್ ಮಾಡುತ್ತಿದ್ದರಂತೆ ರಾಕುಲ್ ಪ್ರೀತ್ ಸಿಂಗ್..
ಬೇರೆ ಊರಿಗೆ ಹೋದರು ಫೋನ್ ಮಾಡಲು ತಪ್ಪಿಸುತ್ತಿರಲಿಲ್ಲವಂತೆ, ಫೋನ್ ಮಾಡಿ ಅಲ್ಲು ಅರ್ಜುನ ಅವರ ಜೊತೆಗೆ ಗಂಟೆಗಟ್ಟಲೇ ಮಾತನಾಡುತ್ತಾ ಇದ್ದರಂತೆ. ಅದರಿಂದ ಸ್ನೇಹಾ ರೆಡ್ಡಿ ಅವರಿಗೆ ಕೋಪ ಬಂದು, ಅಲ್ಲು ಅರ್ಜುನ್ ಅವರಿಗೆ ಮತ್ತು ರಾಕುಲ್ ಅವರಿಗೆ ಇಬ್ಬರಿಗೂ ಚೆನ್ನಾಗಿ ಬೈದಿದ್ದರಂತೆ. ಇನ್ನೊಂದುಸಲ ನನ್ನ ಗಂಡನಿಗೆ ಕಾಲ್ ಮಾಡಿ ಹೀಗೆ ಮಾಡಬಾರದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರಂತೆ. ಇಷ್ಟೆಲ್ಲಾ ಆಗಿದ್ದರು ರಾಕುಲ್ ಅವರು ಅಲ್ಲು ಅರ್ಜುನ್ ಅವರೊಡನೆ ನಟಿಸಬೇಕು ಎಂದಿರುವುದಕ್ಕೆ ನೆಟ್ಟಿಗರು ಈ ಹಳೆಯ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
Comments are closed.