ವರ್ಷದ ಮೊದಲ ಸೂರ್ಯಗ್ರಹಣ, ಯಾವ್ಯಾವ ರಾಶಿಯ ಮೇಲೆ ಯಾವ ರೀತಿಯ ಮೇಲೆ ಪರಿಣಾಮ ಬೀರಲಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ವಿಚಾರಗಳಿಗೆ ಕೂಡ ಅದರಲ್ಲೂ ಹಿಂದೂ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ ಪ್ರತಿಯೊಂದು ವಿಚಾರಗಳು ಕೂಡ ಜ್ಯೋತಿಷ್ಯಶಾಸ್ತ್ರದಲ್ಲಿ ಗಣನೆಗೆ ಬರುತ್ತದೆ. ಇನ್ನು ಈ ವರ್ಷದ ಮೊದಲ ಸೂರ್ಯಗ್ರಹಣ ಇದೇ ಏಪ್ರಿಲ್ ತಿಂಗಳಲ್ಲಿ ಬರಲಿದೆ. ಹೀಗಾಗಿ ಇದು ಹಲವು ರಾಶಿಚಕ್ರಗಳು ಮೇಲೆ ಪರಿಣಾಮ ಬೀರಲಿದೆ ಎಂಬ ಉಲ್ಲೇಖ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.
ಏಪ್ರಿಲ್ 30ರಿಂದ ಮಧ್ಯರಾತ್ರಿ 12.15 ರಿಂದ ಪ್ರಾರಂಭವಾಗುವಂತಹ ಸೂರ್ಯಗ್ರಹಣ ಬೆಳಗ್ಗೆ 4.07 ರವರೆಗೆ ಇರಲಿದೆ ಎನ್ನುವುದಾಗಿ ತಿಳಿದುಬಂದಿದೆ. ಆದರೆ ಈಗ ತಿಳಿದುಬಂದಿರುವ ಮತ್ತೊಂದು ವಿಚಾರದ ಪ್ರಕಾರ ಈ ವರ್ಷದ ಮೊದಲ ಸೂರ್ಯಗ್ರಹಣ ಎನ್ನುವುದು ಭಾರತದಲ್ಲಿ ಗೋಚರಿಸುತ್ತಿಲ್ಲ ಬದಲಾಗಿ ದಕ್ಷಿಣ ಅಮೇರಿಕಾದ ಅಂಟಾರ್ಟಿಕಾ ಹಾಗೂ ಅಂಟಾರ್ಟಿಕಾ ಭಾಗದಲ್ಲಿ ಗೋಚರಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇರುವ ಕಾರಣದಿಂದಾಗಿ ಸೂತಕದ ಅವಧಿ ಎನ್ನುವುದು ಭಾರತದಲ್ಲಿ ಇರುವುದಿಲ್ಲ. ಸೂತಕದ ಅವಧಿ ಕಾಣಿಸಿಕೊಳ್ಳುತ್ತಿದ್ದಾರೆ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಮಾನ್ಯತೆ ಇರುವುದಿಲ್ಲ.
ಇನ್ನು ಪ್ರಮುಖವಾಗಿ ಸೂರ್ಯಗ್ರಹಣದ ಸಂದರ್ಭದಲ್ಲಿ ಮಹಿಳೆಯರು ಅದರಲ್ಲೂ ಕೂಡ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಲೇಬಾರದು ಇದರಿಂದಾಗಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾದಂತಹ ಎಲ್ಲಾ ಸಾಧ್ಯತೆಗಳು ಕೂಡ ದಟ್ಟವಾಗಿರುತ್ತದೆ. ಇನ್ನು ಸಾಮಾನ್ಯವಾಗಿ ಗ್ರಹಣ ಸಂಭವಿಸಿದ ದಿನದಂದು ಅಂದರೆ ಸಮಯದವರೆಗೆ ಮನೆಯಿಂದ ಹೊರಗೆ ಯಾರು ಕೂಡ ಹೋಗುವುದನ್ನು ತಪ್ಪಿಸಿಕೊಳ್ಳುತ್ತಾರೆ. ಇದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸರಿಯಾದ ಕ್ರಿಯೆ ಕೂಡ ಹೌದು.
ಇನ್ನು ಈ ಬಾರಿ ಸಂಭವಿಸುತ್ತಿರುವ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸುತ್ತಿರುವುದು. ಪ್ರತಿಯೊಂದು ರಾಶಿಯ ಜನರ ಮೇಲೆ ಇದು ಅಗಾಧವಾದ ಪರಿಣಾಮ ಬೀರುತ್ತದೆ. ಜ್ಯೋತಿಷಿ ಶಾಸ್ತ್ರಗಳ ಉಲ್ಲೇಖದ ಪ್ರಕಾರ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯ ಸುಸ್ತಾಗುತ್ತಾನೆ. ಇದೇ ಕಾರಣಕ್ಕಾಗಿ ರಾಶಿಚಕ್ರದ ಜನರು ಶುಭ ಫಲಕ್ಕಿಂತ ಜಾಸ್ತಿಯಾಗಿ ಅಶುಭ ವಿಚಾರವನ್ನು ಹೆಚ್ಚಾಗಿ ಪಡೆಯುತ್ತಾರೆ ಎಂದು ಉಲ್ಲೇಖವಾಗಿದೆ ಆಗುವುದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಾಬೀತಾಗಿರುವ ಅಂಶ.
ಈ ಬಾರಿಯ ಸೂರ್ಯಗ್ರಹಣ ಎನ್ನುವುದು ಕೆಲವು ರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದ್ದು ಅವರ ಆರ್ಥಿಕ ಪರಿಸ್ಥಿತಿಯನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ವೃಷಭ ಕರ್ಕ ತುಲಾ ಧನು ರಾಶಿಯವರು ಆರ್ಥಿಕತೆ ಕುರಿತಂತೆ ಜಾಗೃತರಾಗಿ ಕಾಳಜಿವಹಿಸಬೇಕು. ಯಾವುದೇ ವಿಚಾರಕ್ಕೆ ಕೂಡ ಖರ್ಚು ಮಾಡುವುದಾದರೆ ನೂರಾರು ಬಾರಿ ಯೋಚಿಸುವುದು ಉತ್ತಮ. ಯಾಕೆಂದರೆ ಈಗ ಸೂರ್ಯಗ್ರಹಣದ ವಿಚಾರವಾಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ವುದು ಅದೋಗತಿಗೆ ತಲುಪುತ್ತಿರುವುದರಿಂದಾಗಿ ನೀವು ಖರ್ಚು ಮಾಡುತ್ತಿರುವ ಹಣ ನಿಮಗೆ ಲಾಭಕ್ಕಿಂತ ಹೆಚ್ಚಾಗಿ ನಷ್ಟವನ್ನೇ ತಂದುಕೊಡುವುದು ಸಿದ್ಧವಾಗಿದೆ. ಹೀಗಾಗಿ ಈ ವಿಚಾರದ ಕುರಿತಂತೆ ಅಂದರೆ ಹಣವನ್ನು ಖರ್ಚು ಮಾಡುವ ಕುರಿತಂತೆ ಸಾಕಷ್ಟು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.
ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಈ ನಿಯಮಗಳನ್ನು ಚೆನ್ನಾಗಿ ಪಾಲಿಸಿ ಹಾಗೂ ಗ್ರಹಣದಿಂದ ನಿಮ್ಮ ಜೀವನವನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡುತ್ತೇವೆ. ಆದಷ್ಟು ಜೀವನದ ದೈನಂದಿನ ಕ್ರಮವನ್ನು ಸರಳವಾಗಿಸಿ ಕೊಳ್ಳಿ ಹಾಗೂ ದೇವರ ಧ್ಯಾನ ಹಾಗೂ ಧಾರ್ಮಿಕ ಆಚರಣೆಗಳನ್ನು ಹೆಚ್ಚಿಸಿಕೊಳ್ಳಿ. ಇಂತಹ ಸಂಕಷ್ಟಗಳಿಂದ ಖಂಡಿತವಾಗಿ ನೀವು ಯಾವುದೇ ಕಷ್ಟಗಳಿಲ್ಲದ ಯಾವುದೇ ನಷ್ಟ ಗಳಿಲ್ಲದೆ ಹೊರಬರ ಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.