T20 World Cup: ನಂಬರ್ ಒನ್ ಆಗಿ ಸೆಮಿನಿಫೈನಲ್ ತಲುಪಿರುವ ಭಾರತಕ್ಕೆ ಸಿಕ್ತು ಸಿಹಿ ಸುದ್ದಿ. ಇನ್ನು ಮುಂದೆ ಭಾರತದ್ದೇ ಕಪ್. ಏನಾಗಿದೆ ಗೊತ್ತೇ??

ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ತಂಡವು ಜಿಂಬಾಂಬೆಯನ್ನು ಸೋಲಿಸಿ ಈಗಾಗಲೇ ವಿಜಯದ ನಗೆ ಬೀರಿದೆ. ಈ ಮೂಲಕ ಟೀಮ್ ಇಂಡಿಯಾ ಗುಂಪು ಎರಡರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟೀಮ್ ಇಂಡಿಯಾ ಜಿಂಬಾಂಬೆ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಸುಲಭವಾಗಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರು ಒಬ್ಬರು ತಮ್ಮ ಫಾರ್ಮ್ ಗೆ ಮರಳಲು ಯಶಸ್ವಿಯಾದರು. ಈ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯರ್ಸ್ ಜಿಂಬಾಂಬೆಯ ಇನ್ನಿಂಗ್ಸ್ ಅನ್ನು 115 ರನ್ಗಳಿಗೆ ಪೇರಿಸಲು ಯಶಸ್ವಿಯಾದರು. ಈ ಅಮೋಘ ಪ್ರದರ್ಶನಕ್ಕೆ ಒಬ್ಬರು ಮೂಲ ರೂವಾರಿ ಎಂದರೆ ಅದು ಹಿರಿಯ ಸ್ಪಿನ್ನರಾದ ರವಿಚಂದ್ರನ್ ಅಶ್ವಿನ್.

ಹಿಂದಿನ ಪಂದ್ಯಗಳಲ್ಲಿ ಅಶ್ವಿನ್ ತಮ್ಮ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದರು. ಆದರೆ ಈ ಪಂದ್ಯದಲ್ಲಿ ಅವರು ಮತ್ತೆ ಫಾರ್ಮ್ ಗೆ ಮರಳಿದರು. ಜೊತೆಗೆ ಅದ್ಬುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಟಿ ಟ್ವೆಂಟಿ ವಿಶ್ವಕಪ್ ನ ಕಳೆದ ಪಂದ್ಯಗಳಲ್ಲಿ ಅವರು ಅಂತಹ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ತೋರಿರಲಿಲ್ಲ. ಈ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ ಮೂರು ವಿಕೆಟ್ಗಳನ್ನು ಕಬಳಿಸಲು ಮಾತ್ರವೇ ಶಕ್ತರಾಗಿದ್ದರು. ಆದರೆ ಈ ಬಾರಿಯ ಜಿಂಬಾಂಬೆ ವಿರುದ್ಧದ ಟೀಮ್ ಇಂಡಿಯಾ ಪಂದ್ಯದಲ್ಲಿ ಅವರು ಭರ್ಜರಿ ಪ್ರದರ್ಶನ ತೋರಿದರು. ನಾಲ್ಕು ಓವರ್ ಗಳ ಬೌಲಿಂಗ್ ಮಾಡಿದ ಅಶ್ವಿನ್ 5.50 ಆರ್ಥಿಕತೆಯಲ್ಲಿ 22 ರನ್ ಮಾತ್ರ ಬಿಟ್ಟುಕೊಟ್ಟರು. ಇದಲ್ಲದೆ ಭರ್ಜರಿ ಮೂರು ವಿಕೆಟ್ಗಳ ಬೇಟೆಯಾಡಿದರು.

team ind good news | T20 World Cup: ನಂಬರ್ ಒನ್ ಆಗಿ ಸೆಮಿನಿಫೈನಲ್ ತಲುಪಿರುವ ಭಾರತಕ್ಕೆ ಸಿಕ್ತು ಸಿಹಿ ಸುದ್ದಿ. ಇನ್ನು ಮುಂದೆ ಭಾರತದ್ದೇ ಕಪ್. ಏನಾಗಿದೆ ಗೊತ್ತೇ??
T20 World Cup: ನಂಬರ್ ಒನ್ ಆಗಿ ಸೆಮಿನಿಫೈನಲ್ ತಲುಪಿರುವ ಭಾರತಕ್ಕೆ ಸಿಕ್ತು ಸಿಹಿ ಸುದ್ದಿ. ಇನ್ನು ಮುಂದೆ ಭಾರತದ್ದೇ ಕಪ್. ಏನಾಗಿದೆ ಗೊತ್ತೇ?? 2

ರಯಾನ್ ಬರ್ಲೆ, ವೆಲ್ಲಿಂಗ್ಟನ್ ಮಸಕಡ್ಜಾ ಮತ್ತು ರಿಚರ್ಡ್ ನಗರ್ವಾ ಅವರ ವಿಕೆಟ್ ಉರುಳಿಸಿದರು. ಕಳೆದ ಜುಲೈ ತಿಂಗಳಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದ ವೇಳೆ ಟಿ ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಗೆ ಅಶ್ವಿನ್ ಮತ್ತೆ ಪುನರಾಗಮನ ಮಾಡಿದ್ದರು. ಅವರು 2022ರ ಏಷ್ಯಾಕಪ್ ನಲ್ಲಿಯೂ ಕೂಡ ಆಡಿದ್ದರೂ, ಇದೀಗ ಅವರು 2022 ರ ಟಿ – 20 ವಿಶ್ವಕಪ್ ನಲ್ಲೂ ಕೂಡ ಆಡುತ್ತಿದ್ದು ಭಾರತದ ತಂಡದ ಗೆಲುವಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರು ಇದುವರೆಗಿನ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿದ್ದು ಅದರಲ್ಲಿ 72 ವಿಕೆಟ್ಗಳನ್ನು ಪಡೆದಿದ್ದಾರೆ.

Comments are closed.