ಕುಡಿದು ಬಂದು ತಾಯಿಗೆ ಈತ ಮಾಡಿದ್ದೇನು ಗೊತ್ತಾ?? ಇಂತಹ ಮಗ ಬೇಕೇ?? ಈತನಿಗೆ ಏನು ಮಾಡಬೇಕು ನೀವೇ ಹೇಳಿ.

ನಮಸ್ಕಾರ ಸ್ನೇಹಿತರೇ ಮಕ್ಕಳು ಹುಟ್ಟ ಬೇಕೆಂದು ತಂದೆ-ತಾಯಿಯರು ಎಷ್ಟೆಲ್ಲ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರೆ ಎಂಬುದನ್ನು ನೀವು ಕೇಳಿರುತ್ತೀರಿ. ಇನ್ನು ಮಕ್ಕಳ ಜೀವನಕ್ಕಾಗಿ ತಂದೆ-ತಾಯಿಯರು ಎಷ್ಟು ಕಷ್ಟವನ್ನು ಪಡುತ್ತಾರೆ ಮಕ್ಕಳ ಜೀವನ ಸುಖವಾಗಿರಲಿ ಎಂದು ಎಷ್ಟೆಲ್ಲಾ ತ್ಯಾಗವನ್ನು ಮಾಡುತ್ತಾರೆ ಎಂಬುದರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇಂದು ನಾವು ಹೇಳಹೊರಟಿರುವ ಮಗ ಯಾರಿಗೂ ಹುಟ್ಟಬಾರದು ಎಂದು ಹೇಳುತ್ತೇವೆ ಸ್ನೇಹಿತರೆ. ಹೌದು ಸ್ನೇಹಿತರೆ ಕುಡಿದ ಮತ್ತಿನಲ್ಲಿ ಈತ ತನ್ನ ತಾಯಿಗೆ ಮಾಡಿದ ಕೃತ್ಯವನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಇವನಿಗೆ ಶಾಪ ಹಾಕುತ್ತೀರಿ.

ಹೌದು ಸ್ನೇಹಿತರೆ ಇದು ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಬುಳ್ಳಾಪುರ ಎಂಬುವಲ್ಲಿ. 27 ವರ್ಷದ ದೇವರಾಜ ಎಂಬುವವನು ಪ್ರತಿನಿತ್ಯ ಕುಡಿದು ಕೊಂಡು ಬಂದು ಮನೆಯಲ್ಲಿ ತಂದೆ ಲೋಕೇಶ್ ನಾಯ್ಕ ಹಾಗೂ ತಾಯಿ ವನಜಾಕ್ಷಿ ಅವರ ಬಳಿ ಜಗಳವಾಡುತ್ತಿದ್ದ. ಅನಾವಶ್ಯಕವಾಗಿ ತಂದೆ ತಾಯಿಯ ಬಳಿ ಹೋಗಿ ಜಗಳ ಮಾಡುತ್ತಿದ್ದ ಇವನ ಬಳಿ ಮಾತನಾಡಲು ಕೂಡ ಆ ಇಬ್ಬರು ದಂಪತಿಗಳು ಹೋಗುತ್ತಿರಲಿಲ್ಲ ಆದರೂ ಕೂಡ ಇವನೇ ಮೈಮೇಲೆ ಎರಗಿ ಬರುತ್ತಿದ್ದ. ಇನ್ನು ಪ್ರತಿನಿತ್ಯವೂ ಕೂಡ ದೇವರಾಜ್ ಕುಡಿದು ಬಂದ ನೆಪದಲ್ಲಿ ತಂದೆ-ತಾಯಿಗೆ ಬೇಸರ ತರಿಸುವ ಮಾತುಗಳು ಹಾಗೂ ಮೈಮೇಲೆ ಎರಗಿ ಹೋಗುವುದನ್ನು ಮಾಡುತ್ತಿದ್ದ.

ತಂದೆ ತಾಯಿಗಳಿಬ್ಬರೂ ಕೂಡ ನಿನ್ನಂತ ಮಗ ಹುಟ್ಟುವ ಬದಲು ನೀನು ಹುಟ್ಟಿದ ತಕ್ಷಣವೇ ನಿನ್ನನ್ನು ಪರಲೋಕಕ್ಕೆ ಕಳಿಸುವಂತೆ ಮಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ಬೇಸರದಿಂದ ಮಾತನಾಡಿ ಕೊಳ್ಳುತ್ತಿದ್ದರು. ಇನ್ನು ಒಮ್ಮೆ ಕುಡಿದು ಬಂದ ನಶೆಯಲ್ಲಿ ದೇವರಾಜ್ ತನ್ನ ತಾಯಿಗೆ ಏನು ಮಾಡಿದ್ದಾನೆ ಗೊತ್ತಾ ಸ್ನೇಹಿತರೆ ಕೇಳಿದರೆ ನೀವು ಕೂಡ ಒಂದು ಕ್ಷಣ ಕಂಪಿಸುವುದು ಗ್ಯಾರಂಟಿ. ಇನ್ನು ಒಂದು ರಾತ್ರಿ ಕಂಠಪೂರ್ತಿ ಕುಡಿದು ಬಂದ ದೇವರಾಜ ತಾಯಿಯ ಬಳಿ ಹಣಕ್ಕಾಗಿ ಜಗಳವನ್ನು ತೆಗೆದಿದ್ದಾನೆ. ಜಗಳ ತಾರಕಕ್ಕೇರಿ ತಾಯಿಯ ಮೇಲೆ ಕೈ ಮಾಡಿದ್ದಾರೆ ದೇವರಾಜ್. ಇಷ್ಟಕ್ಕೆ ಮಾತ್ರ ನಿಲ್ಲದೆ ಬಿದ್ದ ತಾಯಿಯ ಕುತ್ತಿಗೆ ಮೇಲೆ ಕಾಲನ್ನು ಇಟ್ಟು ತಾಯಿ ಅಲ್ಲಿಯೇ ತನ್ನ ಕೊನೆಯ ಉಸಿರು ಎಳೆಯುವಂತೆ ಮಾಡಿದ್ದಾನೆ. ಇಂತಹ ನಾಲಾಯಕ್ ಮಕ್ಕಳನ್ನು ಸಾಕುವುದು ವ್ಯರ್ಥ ಅಲ್ಲವ ಸ್ನೇಹಿತರೆ. ಈ ಕುರಿತಂತೆ ನೀವು ಏನು ಹೇಳುತ್ತೀರಾ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.