Tirupati: ತಿರುಪತಿ ತಿಮ್ಮಪ್ಪನ ದುಡ್ಡಿನ ಮೇಲೆ ಕಾಣುಹಾಕಿದ ಎಣಿಕೆ ಮಾಡುವವನು. ಆದರೆ ಆತನ ಪರಿಸ್ಥಿತಿ ಏನಾಗಿದೆ ಗೊತ್ತೇ?? ದೇವರು ಇದ್ದಾನೆ, ಅದಕ್ಕೆ ಹೀಗೆ ಆಗಿರೋದು ಎಂದ ನೆಟ್ಟಿಗರು.
Tirupati: ನಮ್ಮ ದೇಶದಲ್ಲಿ ಅತಿಹೆಚ್ಚು ಜನರು ಭೇಟಿ ಕೊಡುವ ಪುಣ್ಯಕ್ಷೇತ್ರಗಳಲ್ಲಿ ತಿರುಪತಿ ಕ್ಷೇತ್ರ ಕೂಡ ಒಂದು. ಆಂಧ್ರಪ್ರದೇಶದಲ್ಲಿ ಇರುವ ಈ ಜಾಗಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ, ದೇವರ ದರ್ಶನ ಪಡೆಯುತ್ತಾರೆ. ತಮ್ಮ ಕಷ್ಟಗಳನ್ನು ತಿರುಪತಿ ವೆಂಕಟರಮಣ ಸ್ವಾಮಿ ಪರಿಹಾರ ಮಾಡುತ್ತಾನೆ ಎಂದು ನಂಬಿಕೆಯಿಂದ ಬರುತ್ತಾರೆ. ಹಾಗೆಯೇ ದೇವರಿಗೆ ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಹಾಕುತ್ತಾರೆ. ಒಂದು ವೇಳೆ ಈ ಕಾಣಿಕೆ ಹಣದ ಮೇಲೆ ಯಾರಾದರೂ ದುರಾಸೆ ಪಟ್ಟರೆ ಅವರ ಸ್ಥಿತಿ ಏನಾಗುತ್ತೆ ಗೊತ್ತಾ?
ಈ ದೇವರು ಭಕ್ತರ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡುತ್ತಾರೆ ಎಂದು ಎಲ್ಲಾ ಭಕ್ತವರ್ಗದಲ್ಲಿ ನಂಬಿಕೆ ಇದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಹಾಕುವ ಕಾಣಿಕೆ ಬಗ್ಗೆ ನಮಗೆಲ್ಲ ಗೊತ್ತಿದೆ, ಕೋಟಿಗಟ್ಟಲೇ ಹಣ ಈ ದೇವಸ್ಥಾನಕ್ಕೆ ಕಾಣಿಕೆಯ ರೂಪದಲ್ಲಿ ಬರುತ್ತದೆ. ಈ ಹಣವನ್ನು ಲೆಕ್ಕ ಮಾಡುವುದಕ್ಕೆ ದೇವಸ್ಥಾನದ ಆಡಳಿತ ಕೆಲವು ಕೆಲಸಗಾರರನ್ನು ನೇಮಕ ಮಾಡಿಕೊಂಡಿರುತ್ತದೆ ಎನ್ನುವುದು ಹಲವರಿಗೆ ಗೊತ್ತಿರುವ ವಿಷಯವೆ ಆಗಿದೆ..
ತಿರುಪತಿ ತಿಮ್ಮಪ್ಪನಿಗೆ ಭಕ್ತರ ಕಡೆಯಿಂದ ಬರುವ ಈ ಕಾಣಿಕೆಗಳನ್ನು ಗುತ್ತಿಗೆ ನೌಕರರು ಎಣಿಕೆ ಮಾಡುತ್ತಾರೆ. ಇಲ್ಲಿಗೆ ವಿದೇಶದಿಂದಲೂ ಭಕ್ತರು ಬರುವುದರಿಂದ ಅವರ ಕರೆನ್ಸಿಯನ್ನು ಸಹ ಕಾಣಿಕೆ ಹುಂಡಿಗೆ ಹಾಕಿರುತ್ತಾರೆ. ಕಾಣಿಕೆ ಹಣ ಎಣಿಕೆ ಮಾಡುವ ಗುತ್ತಿಗೆದಾರ ನೌಕರನೋಬ್ಬ ಇತ್ತೀಚೆಗೆ ಕಾಣಿಕೆ ಜೊತೆಯಿದ್ದ ಡಾಲರ್ ಅನ್ನು ಕದ್ದು ಸ್ವಂತ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಕೂಡಲೇ ಪೊಲೀಸರ ಗಮನಕ್ಕೆ ತಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ, ಆ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಅವನ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಟಿಟಿಡಿಯಲ್ಲಿ ಹೀಗೆ ಹಣ ಎಣಿಸುವ ಇನ್ನಿತರ ಕೆಲಸಗಾರರು ಈ ವ್ಯಕ್ತಿ ಮಾಡಿದ ಕೆಲಸಕ್ಕೆ ಶಾಕ್ ಆಗಿದ್ದಾರೆ. ದೇವರ ಹಣವನ್ನೇ ಕದಿಯಲು ಪ್ರಯತ್ನ ಪಟ್ಟ ಈ ವ್ಯಕ್ತಿ ಈಗ ಪೊಲೀಸರ ಅತಿಥಿ ಆಗಿದ್ದಾನೆ.
Comments are closed.