Kannada Astrology: ಹೆಚ್ಚು ದಿನ ಇಲ್ಲ, ಇನ್ನು 9 ದಿನ ನಂತರ ಈ ರಾಶಿಗಳ ಅದೃಷ್ಟವೇ ಬದಲಾಗಿದೆ ಜೀವನದ ಎಲ್ಲ ಕಷ್ಟಗಳು ಮುಗಿಯುತ್ತವೆ. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಈ ಬಾರಿ ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ನವೆಂಬರ್ 24ರಂದು ದೇವತೆಗಳ ಗುರುವೆಂದು ಪರಿಗಣಿತವಾದ ಗುರುಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಪ್ರತಿ ತಿಂಗಳು ಕೂಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಬದಲಾವಣೆ ಗ್ರಹಗಳ ರಾಶಿ ಸಂಚಾರದಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಇದರ ಪ್ರಭಾವ ಬೀಳುತ್ತದೆ. ಎಲ್ಲಾ ಗ್ರಹಗಳ ಪೈಕಿ ಗುರು ಗ್ರಹವು ಅತ್ಯಂತ ಶುಭ ಎಂದು ನಂಬಲಾಗಿದೆ. ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸರಿಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಜ್ಯೋತಿಷ್ಯದ ನಂಬಿಕೆಗಳ ಅನುಸಾರ ಇದೆ ಜುಲೈ 29ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈಗ ಈ ಚಲನೆ ನವೆಂಬರ್ 24ರಂದು ಬದಲಾಗಲಿದೆ. ಗುರು ಗ್ರಹವನ್ನು ಶುಭ, ವಿವಾಹ, ಸಂಪತ್ತು, ಯಶಸ್ಸು, ಪ್ರಗತಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಏಳಿಗೆ ಇತ್ಯಾದಿಗಳ ಸೂಚಕ ಎಂದು ನಂಬಲಾಗಿದೆ. ಗುರು ಗ್ರಹದ ಕೃಪೆಯಿಂದಾಗಿ ಒಳ್ಳೆಯ ಫಲಾಫಲಗಳು ಲಭಿಸುತ್ತದೆ. ಗುರು ಗ್ರಹದ ಈ ರಾಶಿ ಸಂಚಾರದಿಂದಾಗಿ ಯಾವ ಗ್ರಹದ ರಾಷ್ಟ್ರೀಯ ಜನರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಿರಿ
ಮೇಷ ರಾಶಿ: ಈ ರಾಶಿಯವರಿಗೆ ಗುರು ಗ್ರಹದ ರಾಶಿ ಸಂಚಾರವು ಒಳ್ಳೆಯ ಫಲಿತಾಂಶಗಳನ್ನು ನೀಡುವುದಿಲ್ಲ. ಆತಂಕದ ವಾತಾವರಣ ಸೃಷ್ಟಿಯಾಗುವುದಲ್ಲದೆ ಮನಸ್ಸಿನಲ್ಲಿ ಉದ್ವೇಗ ಉಂಟಾಗುತ್ತದೆ. ಸಮಾಧಾನದಿಂದ ಇರುವ ಪ್ರಯತ್ನ ಪಡಿ. ಆದರೂ ಈ ಸಮಯದಲ್ಲಿ ಉದ್ಯೋಗದಲ್ಲಿ ಒಳ್ಳೆಯ ಫಲಿತಾಂಶ ಸಿಗಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಒಳ್ಳೆಯ ಫಲಗಳು ದೊರೆಯಲಿವೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ನಿಮ್ಮ ಜೀವನದ ಅದೆಷ್ಟೋ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಪ್ರಗತಿ.
ಮಿಥುನ ರಾಶಿ: ಈ ಸಮಯದಲ್ಲಿ ನಿಮಗೆ ಸಾಕಷ್ಟು ತೊಂದರೆಗಳು ಉಂಟಾಗಬಹುದು. ಮನಸ್ಸಿನ ನೆಮ್ಮದಿ ಹಾಳಾಗಬಹುದು. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ವ್ಯಾಪಾರದ ಉದ್ದೇಶದಿಂದ ಪ್ರವಾಸ ಕೈಗೊಳ್ಳಬೇಕಾಗಬಹುದು.
ಕಟಕ ರಾಶಿ: ಈ ಅವಧಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ಒಳ್ಳೆಯ ಉದ್ಯೋಗದ ಅವಕಾಶಗಳು ಕೇಳಿ ಬರಲಿವೆ. ಹಣದ ಮೂಲ ಬಲಗೊಳ್ಳಲಿದೆ.
ಸಿಂಹ ರಾಶಿ: ನಿಮ್ಮ ಮಾತಿಗೆ ಬೆಲೆ ಹೆಚ್ಚುತ್ತದೆ. ನೀವು ಹೇಳಿದ ಕೆಲಸ ಕೈಗೂಡುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣಲಿದ್ದೀರಿ. ನಿಮ್ಮ ಕೈಗೆ ಸೇರಬೇಕಿದ್ದ ಹಣ ಬಂದು ತಲುಪುತ್ತದೆ.
ಕನ್ಯಾ ರಾಶಿ: ವ್ಯಾಪಾರದಲ್ಲಿ ಅಭಿವೃದ್ಧಿ ಸಿಗಲಿದೆ. ಮನೆಯಲ್ಲಿ ನಿಮ್ಮ ಮೇಲೆ ಎಲ್ಲರಿಗೂ ಗೌರವ ಪ್ರೀತಿ ಹೆಚ್ಚಾಗಲಿದೆ. ಕೆಲಸದ ಜಾಗದಲ್ಲಿ ಎಚ್ಚರಿಕೆಯಿಂದ ಇರಬೇಕು.
ತುಲಾ ರಾಶಿ: ನಿಮ್ಮ ಜೀವನ ಸಂತೋಷದಿಂದ ಕೂಡಿರಲಿದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಉದ್ಯೋಗದ ವಿಷಯದಲ್ಲಿ ನಿಮಗೆ ಪ್ರಗತಿ ದಕ್ಕಲಿದೆ.
ವೃಶ್ಚಿಕ ರಾಶಿ: ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ಉದ್ವೇಗಕ್ಕೆ ಒಳಗಾಗಬೇಡಿ, ಸಮಾಧಾನದಿಂದ ಎಲ್ಲದಕ್ಕೂ ಪ್ರತಿಕ್ರಿಯಿಸಿ.
ಧನು ರಾಶಿ: ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳು ಸಿಗಲಿವೆ. ಆದರೆ ತಾಳ್ಮೆಯಿಂದ ವರ್ತಿಸಬೇಕಾದದ್ದು ಬಹಳ ಮುಖ್ಯ. ಉದ್ಯೋಗದಲ್ಲಿ ಪ್ರಗತಿ ಸಾಧಿಸಲಿದ್ದೀರಿ, ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶಗಳು ಸಿಗಲಿದೆ.
ಮಕರ ರಾಶಿ: ಈ ರಾಶಿಯವರಿಗೆ ಮಿಶ್ರ ಫಲಿತಾಂಶಗಳು ದೊರೆಯಲಿವೆ. ಸಾಕಷ್ಟು ಆತ್ಮವಿಶ್ವಾಸ ಇರುತ್ತದೆ ಆದರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆ ಕಳೆದುಕೊಳ್ಳಬೇಡಿ.
ಕುಂಭ ರಾಶಿ: ಧಾರ್ಮಿಕ ಕಾರ್ಯದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಲಿದೆ. ನಿಮಗೆ ಹಣಕಾಸಿನ ನೆರವು ದೊರೆಯಲಿದೆ. ವ್ಯಾಪಾರದಲ್ಲಿ ಆಸಕ್ತಿ ಮತ್ತು ಪ್ರಗತಿಯ ವೃದ್ಧಿಯಾಗಲಿದ್ದು, ಆರೋಗ್ಯದಲ್ಲಿ ಚೇತರಿಕೆ.
ಮೀನ ರಾಶಿ: ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಮಾಧಾನವಾಗಿ ಎಲ್ಲದಕ್ಕೂ ಪ್ರತಿಕ್ರಿಯಿಸಿ. ಅನಗತ್ಯವಾಗಿ ಯಾರೊಂದಿಗೂ ವಾದಕ್ಕೆ ಅಳಿಯಬೇಡಿ, ಸುಮ್ಮನಿದ್ದು ಬಿಡಿ. ವಿಶ್ವಾಸ ಕಡಿಮೆಯಾಗಬಹುದು, ತಾಳ್ಮೆ ಇರಲಿ. ವೈವಾಹಿಕ ಜೀವನ ಸುಖಕರವಾಗಿರಲಿದೆ.
Comments are closed.