Kannada Astrology: ಜೀವನ ಪೂರ್ತಿ ಈ ರಾಶಿಯವರಿಗೆ ಇರುತ್ತದೆ ಲಕ್ಷ್ಮಿ ಕೃಪೆ: ಇನ್ನು ಐಷಾರಾಮಿ ಜೀವನ ಮಾಡುವವರು ಯಾವ ರಾಶಿಯವರು ಗೊತ್ತೇ?

Kannada Astrology; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ 12 ರಾಶಿಯ ಜನರು ಕಾಲ ಕಾಲಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ಫಲಗಳನ್ನು ಅನುಭವಿಸುತ್ತಾರೆ. ಗ್ರಹಗತಿ, ಜಾತಕದ ಅನುಸಾರ ಅವರ ಅದೃಷ್ಟ ಬದಲಾಗುತ್ತಿರುತ್ತದೆ. ಗ್ರಹ ಸಂಚಾರ ಎಲ್ಲಾ ರಾಶಿಯ ಜನರ ಮೇಲೆ ನೇರ ಪರಿಣಾಮವನ್ನು ಹೊಂದಿರುತ್ತದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಪ್ರತಿ ರಾಶಿಯ ಮೇಲೆ ಶುಭ ಇಲ್ಲವೇ ಅಶುಭ ಪರಿಣಾಮಗಳು ಉಂಟಾಗುತ್ತದೆ. ಇಷ್ಟು ಮಾತ್ರವಲ್ಲದೆ ಪ್ರತಿ ರಾಶಿಗಳಿಗೂ ಕೂಡ ಅದರದೇ ಆದ ಮಹತ್ವದ ದೇವತೆಗಳು ಕೂಡ ಇರುತ್ತಾರೆ. ಆ ದೇವತೆಗಳ ಅನುಗ್ರಹ ಇರುವವರು ಯಾವುದೇ ಸಂಕಷ್ಟದಿಂದ ದೂರವಾಗುತ್ತಾರೆ. ಅವರಿಗೆ ಉತ್ತಮ ಫಲಾಫಲಗಳು, ಅದೃಷ್ಟ ಫಲಗಳು ದೊರೆಯುತ್ತವೆ. ಅದರಲ್ಲೂ ಎಲ್ಲಾ ರಾಶಿಯ ಜನರು ತಮ್ಮ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರಲಿ ಎಂದು ಬಯಸುತ್ತಾರೆ. ಆದರೆ ಸದಾ ಕಾಲಕ್ಕೂ ಲಕ್ಷ್ಮಿ ಅನುಗ್ರಹ ತೋರುವ ಆ ಮೂರು ರಾಶಿಗಳು ಯಾವ್ಯಾವು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

libra tula horo astro | Kannada Astrology: ಜೀವನ ಪೂರ್ತಿ ಈ ರಾಶಿಯವರಿಗೆ ಇರುತ್ತದೆ ಲಕ್ಷ್ಮಿ ಕೃಪೆ: ಇನ್ನು ಐಷಾರಾಮಿ ಜೀವನ ಮಾಡುವವರು ಯಾವ ರಾಶಿಯವರು ಗೊತ್ತೇ?
Kannada Astrology: ಜೀವನ ಪೂರ್ತಿ ಈ ರಾಶಿಯವರಿಗೆ ಇರುತ್ತದೆ ಲಕ್ಷ್ಮಿ ಕೃಪೆ: ಇನ್ನು ಐಷಾರಾಮಿ ಜೀವನ ಮಾಡುವವರು ಯಾವ ರಾಶಿಯವರು ಗೊತ್ತೇ? 2

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರೆಂದರೆ ಲಕ್ಷ್ಮೀದೇವಿಗೆ ಅಚ್ಚುಮೆಚ್ಚು ಎಂದು ಹೇಳಲಾಗುತ್ತದೆ. ಈ ರಾಶಿಯವರಿಗೆ ದೇವಿ ಲಕ್ಷ್ಮಿಯ ಅನುಗ್ರಹ ಇರುವುದರಿಂದಾಗಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಅಲ್ಲದೆ ಇವರು ಜೀವನದಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಕೂಡ ತಾಯಿಯ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆ. ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆಗಳನ್ನು ಎದುರಿಸುವುದಿಲ್ಲ. ಎಂತಹದೇ ಆರ್ಥಿಕ ಸಮಸ್ಯೆ ಎದುರಾದರೂ ಕೂಡ ಅದು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ. ಅಲ್ಲದೆ ಇವರ ಜೀವನದ ಎಲ್ಲಾ ಕಷ್ಟದ ಸನ್ನಿವೇಶಗಳಲ್ಲಿಯೂ ಕೂಡ ತಾಯಿ ಲಕ್ಷ್ಮಿಯ ಕೃಪೆ ಇವರಿಗೆ ಇದ್ದೇ ಇರುತ್ತದೆ. ಇದನ್ನು ಓದಿ..Kannada Astrology: ಈ ಐದು ರಾಶಿಗಳಿಗೆ ಕಷ್ಟ ಮುಗಿಯುವ ಕಾಲ ಬಂದೆ ಬಿಡ್ತು: ಫೆಬ್ರವರಿ ತಿಂಗಳಿನಲ್ಲಿ ಅದೃಷ್ಟ ಬಂದು ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ??

ವೃಷಭ ರಾಶಿಯವರ ಮೇಲು ಕೂಡ ತಾಯಿ ಲಕ್ಷ್ಮಿಯ ಅನುಗ್ರಹ ಇದ್ದೇ ಇದೆ. ಇವರ ಜೀವನದಲ್ಲಿ ಸದಾ ಲಕ್ಷ್ಮಿ ಅನುಗ್ರಹ ತೋರುತ್ತಾಳೆ. ಇವರ ಜೀವನ ಯಾವುದೇ ಸಂಕಷ್ಟಗಳಿಂದ ಕೂಡಿರುವುದಿಲ್ಲ. ಹಣಕಾಸಿನ ಎಂತದೆ ಸಮಸ್ಯೆಯು ಎದುರಾಗುವುದಿಲ್ಲ. ಈ ರಾಶಿಯವರು ಬುದ್ಧಿವಂತರು ಮತ್ತು ಶ್ರಮಜೀವಿಗಳಾಗಿದ್ದು ಆರ್ಥಿಕವಾಗಿ ಸದೃಢ ಆಗಿರುತ್ತಾರೆ. ಜೊತೆಗೆ ಸಿಂಹ ರಾಶಿಯ ಜನರ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಹೆಚ್ಚಾಗಿಯೇ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಲಕ್ಷ್ಮಿ ಅನುಗ್ರಹ ಇರುವುದರಿಂದಾಗಿ ಈ ರಾಶಿಯ ಜನರಿಗೆ ಹಣಕಾಸಿನ ವಿಚಾರವಾಗಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆರ್ಥಿಕವಾಗಿ ಇವರು ಸಬಲರಾಗಿರುತ್ತಾರೆ. ಯಾವುದೇ ಹೊಸ ಕೆಲಸ ಮಾಡಿದರು ಅದರಲ್ಲಿ ಇವರು ಯಶಸ್ವಿಯಾಗುತ್ತಾರೆ. ಹಣಕಾಸಿನ ವಿಷಯದಲ್ಲಿ ಇವರು ಸದಾ ಲಕ್ಷ್ಮಿಯ ಅನುಗ್ರಹದಿಂದ ಸಿರಿವಂತರಾಗಿರುತ್ತಾರೆ. ಜೀವನಪೂರ್ತಿ ಲಕ್ಷ್ಮಿ ಕಟಾಕ್ಷ ಇರುವುದರಿಂದಾಗಿ ಇವರ ಬದುಕು ಸಮೃದ್ಧವಾಗಿರುತ್ತದೆ. ಇದನ್ನು ಓದಿ..Kannada Astrology: ನಿಮ್ಮ ಮನೆಯಲಿ ತುಳಸಿ ಕಟ್ಟೆ ಇದ್ದರೇ, ಈ ರೀತಿ ದೀಪ ಹಚ್ಚಿ: ಲಕ್ಷ್ಮಿ ದೇವಿ ಹುಡುಕಿಕೊಂಡು ಬಂದು ಮನೆಯಲ್ಲಿಯೇ ಇದ್ದು ಬಿಡುತ್ತಾರೆ.

Comments are closed.