Kannada Astrology: ಸಾವಿಗೂ ಮುನ್ನ ಬರು ಸೂಚನೆಗಳು ಯಾವುವು ಗೊತ್ತೇ?? ಸಾಕ್ಷಾತ್ ಶಿವನೇ ಕುದ್ದು ಪಾರ್ವತಿಗೆ ತಿಳಿಸಿದ ವಿಷಯ ಏನು ಗೊತ್ತೇ??

Kannada Astrology: ಈ ಸೃಷ್ಟಿಯಲ್ಲಿ ಎಲ್ಲರಿಗೂ ಮರಣ ಎನ್ನುವುದು ಬಂದೆ ಬರುತ್ತದೆ. ಅಷ್ಟೇ ಅಲ್ಲದೆ, ಈ ಸೃಷ್ಟಿಯಲ್ಲಿ ಕರ್ಮ ಎನ್ನುವುದು ಬಹಳ ಮುಖ್ಯ. ನಾವು ಮಾಡುವ ಕರ್ಮಗಳ ಫಲವನ್ನು ನಾವು ಅನುಭವಿಸಲೇಬೇಕು, ಕರ್ಮಗಳ ಅನುಸಾರ ನಮಗೆ ಸಾವು ಬಂದೆ ಬರುತ್ತದೆ. ಶಿವಪುರಾಣದಲ್ಲಿ ಹೇಳಿರುವ ಹಾಗೆ, ಪಾರ್ವತಿ ದೇವಿಯು ಒಂದು ಸಾರಿ ಶಿವನ ಬಳಿ ಒಂದು ಪ್ರಶ್ನೆ ಕೇಳಿದರು, ಅದೇನೆಂದರೆ, ಮನುಷ್ಯರಿಗೆ ಮರಣ ಬರುತ್ತಿದೆ ಎಂದರೆ, ಅದಕ್ಕೆ ಸಿಗುವ ಮುನ್ಸೂಚನೆಗಳು ಏನೇನು ಎಂದು ಕೇಳುತ್ತಾರೆ. ಅದಕ್ಕೆ ಶಿವ ಉತ್ತರ ಕೊಟ್ಟಿದ್ದು ಹೀಗೆ..

ಒಬ್ಬ ವ್ಯಕ್ತಿಯ ದೇಹದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದರೆ, ಆ ವ್ಯಕ್ತಿಗೆ ಆರು ತಿಂಗಳುಗಳ ಒಳಗೆ ಸಾವು ಸಂಭವಿಸುತ್ತದೆ ಎಂದು ಅರ್ಥ. ಇನ್ನು ಆ ವ್ಯಕ್ತಿಯ ದೇಹದ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದರೆ, ಆದಷ್ಟು ಬೇಗ ಸಾವನ್ನಪ್ಪುತ್ತಾನೆ ಎಂದು ಅರ್ಥ ಎಂದು ಮುನ್ಸೂಚನೆಗಳ ಬಗ್ಗೆ ಶಿವ ತಿಳಿಸುತ್ತಾರೆ. ಒಬ್ಬ ವ್ಯಕ್ತಿಯ ಎಡಗೈ, ಸರಿಯಾಗಿ ಕೆಲಸ ಮಾಡದೆ ತಿರುಗುತ್ತದೆ ಎಂದರೆ, ಅದು ಕೂಡ ಶೀಘ್ರದಲ್ಲೇ ಸಾವು ಬರುವ ಮುನ್ಸೂಚನೆ ಆಗಿದೆ. ಒಬ್ಬ ವ್ಯಕ್ತಿಯ ನಾಲಿಗೆ, ಬಾಯಿ, ಕಿವಿ, ಕಣ್ಣುಗಳು ಮತ್ತು ಮೂರು ಕಲ್ಲಿನ ಹಾಗೆ ಗಟ್ಟಿಯಾಗಿ ಹೋದರೆ, ಆರು ತಿಂಗಳ ಒಳಗೆ ಆ ವ್ಯಕ್ತಿ ಸತ್ತು ಹೋಗುತ್ತಾರೆ ಎಂದು ಅರ್ಥ. ಹಾಗೆಯೇ, ಸೂರ್ಯ, ಚಂದ್ರ ಬೆಂಕಿ ಇವುಗಳು ನಿಮ್ಮ ಕಣ್ಣಿಗೆ ಕಾಣಿಸದೆ ಇದ್ದಾಗ ಇನ್ನು ಆರು ತಿಂಗಳು ಮಾತ್ರ ಬದುಕುತ್ತಾನೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದನ್ನು ಓದಿ..Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ.

kannada astrology shiva | Kannada Astrology: ಸಾವಿಗೂ ಮುನ್ನ ಬರು ಸೂಚನೆಗಳು ಯಾವುವು ಗೊತ್ತೇ?? ಸಾಕ್ಷಾತ್ ಶಿವನೇ ಕುದ್ದು ಪಾರ್ವತಿಗೆ ತಿಳಿಸಿದ ವಿಷಯ ಏನು ಗೊತ್ತೇ??
Kannada Astrology: ಸಾವಿಗೂ ಮುನ್ನ ಬರು ಸೂಚನೆಗಳು ಯಾವುವು ಗೊತ್ತೇ?? ಸಾಕ್ಷಾತ್ ಶಿವನೇ ಕುದ್ದು ಪಾರ್ವತಿಗೆ ತಿಳಿಸಿದ ವಿಷಯ ಏನು ಗೊತ್ತೇ?? 2

ಅಷ್ಟೇ ಅಲ್ಲದೆ, ವ್ಯಕ್ತಿಯ ನಾಲಿಗೆ ಇದ್ದಕ್ಕಿದ್ದ ಹಾಗೆ ಊದಿಕೊಂಡು, ಹಲ್ಲಿನಲ್ಲಿ ಕೀವು ಬಂದರೆ, ಆ ವ್ಯಕ್ತಿ ಆರು ತಿಂಗಳಿಗಿಂತ ಹೆಚ್ಚು ಸಮಯ ಬದುಕುವುದು ಕಷ್ಟ ಎಂದು ಹೇಳುತ್ತಾರೆ. ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರ ಇದೆಲ್ಲವು ಕೂಡ ನಿಮ್ಮ ಕಣ್ಣಿಗೆ ಕೆಂಪಾಗಿ ಕಾಣಿಸಿಕೊಂಡರೆ, ಬೇಗ ಸಾಯುವ ಮುನ್ಸೂಚನೆ ಆಗಿದೆ. ವ್ಯಕ್ತಿಯ ಕನಸ್ಸಿನಲ್ಲಿ ಗೂಬೆ, ನಾಶ ಆಗಿರುವ ಹಳ್ಳಿ ಇವುಗಳು ಕಾಣಿಸಿಕೊಂಡರೆ, ಸಾವು ಹತ್ತಿರ ಬಂದಿದೆ ಎಂದು ಅರ್ಥ. ಅಷ್ಟೇ ಅಲ್ಲದೆ ಗಿಡುಗದ ತಲೆಯ ಮೇಲೆ ಒಂದು ಕಾಗೆ ಕುಳಿತಿದ್ದರೆ, ಅದು ಕೂಡ ಸಾವಿನ ಸಂಕೇತ ಆಗಿದೆ. ಸಾವಿನ ಹಿಂದಿನ ದಿನ ಪಾರ್ವತಿ ಹಾಗೂ ಪರಮೇಶ್ವರನ ದರ್ಶನ ಕೂಡ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಎರಡು ಗುಬ್ಬಚ್ಚಿಗಳು ನೀರಿನಲ್ಲಿ ಮುಳುಗುವುದನ್ನು ಕಂಡರೆ ಕೂಡ ಅದು ಸಾವು ಸಮೀಪ ಬಂದ ಹಾಗೆ ಎಂದು ಹೇಳಲಾಗುತ್ತದೆ. ಇದನ್ನು ಓದಿ.. Kannada Astrology: ತುಳಸಿ, ಮನಿ ಪ್ಲಾಂಟ್ ಇಡದೇ ಇದ್ದರೂ ಪರವಾಗಿಲ್ಲಾ, ಆದರೆ ಈ ದಿಕ್ಕಿನಲ್ಲಿ ಇಡಬೇಡಿ. ಇಟ್ಟರೆ ಎಲ್ಲಿ ಇಡಬೇಕು ಗೊತ್ತೇ??

Comments are closed.