Loan Agents: ನೀವು ಸಾಲ ತೆಗೆದುಕೊಂಡು ತೀರಿಸಿಲ್ಲ ಎಂದು ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆ, ಇದೊಂದು ಕಾನೂನು ಹೇಳಿ ಸಾಕು, ಅವರೇ ಕೈ ಮುಗಿದು ಓಡಿ ಹೋಗ್ತಾರೆ.

Loan Agents: ಬ್ಯಾಂಕ್ ನಲ್ಲಿ ಲೋನ್ ಪಡೆದ ಗ್ರಾಹಕರು ಕೆಲವೊಮ್ಮೆ ಬೇರೆ ಸಮಸ್ಯೆಗಳಿಂದ ಲೋನ್ ಪಾವತಿ ಮಾಡಲು ಸಾಧ್ಯ ಆಗಿರುವುದಿಲ್ಲ. ಹಾಗಿದ್ದಾಗ ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳನ್ನು ಗೊತ್ತುಪಡಿಸಿ, ಅವರುಗಳಿಗೆ ಲೋನ್ ವಸೂಲಿ ಮಾಡುವ ಕೆಲಸ ಕೊಟ್ಟಿರುತ್ತಾರೆ. ಹೇಗಾದರು ಮಾಡಿ ಲೋನ್ ವಸೂಲಿ ಮಾಡಬೇಕು ಎಂದು ಈ ಏಜೆನ್ಟ್ ಗಳು ಗ್ರಾಹಕರಿಗೆ ಮರಿಯಾದೆ ಕೊಡದೆ, ಹೇಗೆಂದರೆ ಹಾಗೆ ವರ್ತಿಸಿ ಅವಮಾನ ಮಾಡಿ, ತೊಂದರೆ ಕೊಡುವುದುಂಟು. ಆದರೆ ಇದೆಲ್ಲವೂ ಕಾನೂನಿಗೆ ವಿರುದ್ಧವಾದದ್ದು ಎನ್ನುವ ವಿಷಯ ನಿಮಗೆ ಗೊತ್ತಿರಲಿ. ಹಾಗೇನಾದರೂ ನಿಮಗೆ ತೊಂದರೆ ಕೊಟ್ಟರೆ, ಈ ಕಾನೂನಿನ ಬಗ್ಗೆ ದೂರು ಕೊಡಬಹುದು. ಆರ್.ಬಿ.ಐ ನಲ್ಲಿರುವ ಈ ರೂಲ್ಸ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

loan recovery agents limitations rules | Loan Agents: ನೀವು ಸಾಲ ತೆಗೆದುಕೊಂಡು ತೀರಿಸಿಲ್ಲ ಎಂದು ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆ, ಇದೊಂದು ಕಾನೂನು ಹೇಳಿ ಸಾಕು, ಅವರೇ ಕೈ ಮುಗಿದು ಓಡಿ ಹೋಗ್ತಾರೆ.
Loan Agents: ನೀವು ಸಾಲ ತೆಗೆದುಕೊಂಡು ತೀರಿಸಿಲ್ಲ ಎಂದು ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆ, ಇದೊಂದು ಕಾನೂನು ಹೇಳಿ ಸಾಕು, ಅವರೇ ಕೈ ಮುಗಿದು ಓಡಿ ಹೋಗ್ತಾರೆ. 2

*ಸಾಲ ಹಿಂಪಡೆಯಲು ಬರುವ ರಿಕವರಿ ಏಜೆನ್ಟ್ ಗಳು ಬೆಳಗ್ಗೆ 7 ರಿಂದ ಸಂಜೆ 8 ಗಂಟೆ ಸುಮಯದ ಒಳಗೆ ಬಂದು, ಈ ವಿಷಯದ ಬಗ್ಗೆ ಮಾತನಾಡಬೇಕು.
*ಈ ಏಜೆನ್ಟ್ ಗಳು ಸಾಲಗಾರರಿಗೆ ಅವಮರಿಯಾದೆ ಆಗುವ ಹಾಗೆ ಮೆಸೇಜ್ ಮಾಡುವುದು, ಬಯ್ಯುವುದು, ದೈಹಿಕವಾಗಿ ಅಥವಾ ಮಾನಸಿಕವಾಗಿ ಹಲ್ಲೆ ಮಾಡುವುದು ತಪ್ಪು, ಒಂದು ವೇಳೆ ಹೀಗೇನಾದರು ನಡೆದರೆ, ಗ್ರಾಹಕರು ಕೂಡಲೇ ಅವರ ಮೇಲೆ ದೂರು ಕೊಡಬಹುದು.
*ಒಂದು ವೇಳೆ ಹೀಗೆ ನಡೆದರೆ ಏಜೆನ್ಟ್ ಇಂದ ಬಂದಿರುವ ಕಾಲ್ ನ ರೆಕಾರ್ಡಿಂಗ್, ಇಮೇಲ್, ಮೆಸೇಜ್ ಇದೆಲ್ಲವನ್ನು ಇಟ್ಟುಕೊಂಡರೆ, ದೂರು ಕೊಡುವಾಗ ಸಾಕ್ಷಿಯಾಗುತ್ತದೆ.

ಇದನ್ನು ಓದಿ: BBMP: ಬಿಬಿಎಂಪಿ ಅಧಿಕಾರಿ ಮನೆ ಮೇಲೆ ರೇಡ್ ಮಾಡಿದ ಲೋಕಾಯುಕ್ತ ಅಧಿಕಾರಿಗೆ ಶಾಕ್: ಈತನ ಆಸ್ತಿ ಕಂಡು ಬೆಚ್ಚಿ ಬಿದ್ದದ್ದು ಯಾಕೆ ಗೊತ್ತೇ? ಎಷ್ಟಿದೆ ಗೊತ್ತೇ?

*ಈ ದಾಖಲೆಗಳ ಜೊತೆಗೆ ಬ್ಯಾಂಕ್ ಅಧಿಕಾರಿಗಳು ಅಥವಾ ಲೋನ್ ಆಫೀಸರ್ ಅನ್ನು ಭೇಟಿಯಾಗಿ, ಅವರ ವಿರುದ್ಧ ದೂರು ಕೊಡಬಹುದು.
*ಬ್ಯಾಂಕ್ ನಲ್ಲಿ ಮಾತ್ರವಲ್ಲದೆ ಪೊಲೀಸರ ಹತ್ತಿರ ಹೋಗಿ ರಿಕವರಿ ಏಜೆನ್ಟ್ ಗಳ ಬಗ್ಗೆ ದೂರು ಕೊಡಬಹುದು.
*ಅಕಸ್ಮಾತ್ ಪೊಲೀಸರು ಕೂಡ ಸರಿಯಾದ ಸಹಾಯ ಮಾಡದೆ ಇದ್ದರೆ, ಆ ಸಾಲಗಾರ ಕೋರ್ಟ್ ಮೊರೆ ಹೋಗಬಹುದು. ಅಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಬಹುದು, ಇದರಿಂದ ಸಾಲಗಾರನಿಗೆ ಬ್ಯಾಂಕ್ ಇಂದ ನಿರಾಳತೆ ಸಿಗುತ್ತದೆ. ಹಾಗೆಯೇ ತಮಗೆ ಆದ ತೊಂದರೆಗೆ ಪರಿಹಾರ ಕೂಡ ಪಡೆಯಬಹುದು.

*ರಿಕವರಿ ಏಜೆನ್ಟ್ ಸಾಲಗಾರನ ಗೌರವ, ಪ್ರತಿಷ್ಠೆಗೆ ಧಕ್ಕೆ ತಂದರೆ, ಆತನ ವಿರುದ್ಧ ಹಾಗೂ ಬ್ಯಾಂಕ್ ವಿರುದ್ಧ ದೂರು ದಾಖಲಿಸಿ, ಮಾನನಷ್ಟ ಮೊದಕ್ಕಮೆ ಹೂಡಬಹುದು.
*ಇದರಿಂದಲು ಪ್ರಯೋಜನ ಸಿಗದೆ ಹೋದರೆ, ಆರ್.ಬಿ.ಐ ಗೆ ನೇರವಾಗಿ ದೂರು ಕೊಡಬಹುದು. ಆ ಸಮಯಕ್ಕೆ, ಆ ಪ್ರದೇಶಕ್ಕೆ, ರಿಕವರಿ ಏಜೆನ್ಟ್ ಗಳನ್ನು ನೇಮಕ ಮಾಡದ ಹಾಗೆ ಆರ್.ಬಿ.ಐ ತಡೆ ಹಿಡಿಯುತ್ತದೆ.
ರಿಕವರಿ ಏಜೆನ್ಟ್ ಗಳ ವಿಚಾರದಲ್ಲಿ ಇರುವಂತ ಈ ನಿಯಮಗಳನ್ನು ಪ್ರತಿಯೊಂದು ಬ್ಯಾಂಕ್ ಕೂಡ ಪಾಲಿಸಬೇಕು. ಎಲ್ಲಾ ಥರದ ಬ್ಯಾಂಕ್ ಗಳಿಗೂ ಆರ್.ಬಿ.ಐ ನ ಈ ಗೈಡ್ ಲೈನ್ಸ್ ಅನ್ವಯಿಸುತ್ತದೆ.

ಇದನ್ನು ಓದಿ: Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.