Nikhil Kumaraswamy: ರಾಮನಗರದಲ್ಲಿ ಹೀನಾಯವಾಗಿ ಸೋತ ಮೇಲೆ ಕಠಿಣ ನಿರ್ಧಾರ ತೆಗೆದುಕೊಂಡು ನಿಖಿಲ್ ಏನು ಮಾಡಲು ಹೊರಟಿದ್ದಾರೆ ಗೊತ್ತೆ??

Nikhil Kumaraswamy: ನಿಖಿಲ್ ಕುಮಾರಸ್ವಾಮಿ ಅವರು ಕರ್ನಾಟಕದ ಖ್ಯಾತ ರಾಜಕಾರಣಿ ಮಾಜಿ ಸಿಎಂ. ಕುಮಾರಸ್ವಾಮಿ ಅವರ ಮಗ. ಇವರು ತಂದೆಯ ಹಾಗೆ, ತಾತನ ಹಾಗೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ, ಸಿನಿಮಾದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಮೂಲಕ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದ್ದರು. ಆದರೆ ಅಂದುಕೊಂಡ ಫಲಿತಾಂಶ ಸಿಗಲಿಲ್ಲ.

nikhil kumaraswamy back to cinema | Nikhil Kumaraswamy: ರಾಮನಗರದಲ್ಲಿ ಹೀನಾಯವಾಗಿ ಸೋತ ಮೇಲೆ ಕಠಿಣ ನಿರ್ಧಾರ ತೆಗೆದುಕೊಂಡು ನಿಖಿಲ್ ಏನು ಮಾಡಲು ಹೊರಟಿದ್ದಾರೆ ಗೊತ್ತೆ??
Nikhil Kumaraswamy: ರಾಮನಗರದಲ್ಲಿ ಹೀನಾಯವಾಗಿ ಸೋತ ಮೇಲೆ ಕಠಿಣ ನಿರ್ಧಾರ ತೆಗೆದುಕೊಂಡು ನಿಖಿಲ್ ಏನು ಮಾಡಲು ಹೊರಟಿದ್ದಾರೆ ಗೊತ್ತೆ?? 2

ಭರವಸೆ ಮೂಡಿಸಿರುವ ಯುವ ರಾಜಕಾರಣಿ ನಿಖಿಲ್, ಗೆಲ್ಲುವ ನಿರೀಕ್ಷೆಯನ್ನು ಸಹ ಮೂಡಿಸಿದ್ದರು. ಆದರೆ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಸೋತಿದ್ದಾರೆ. ಈ ಕಡೆ ಕುಮಾರಸ್ವಾಮಿ ಅವರು ತಾವು ಸ್ಪರ್ಧಿಸಿದ್ದ ಕ್ಷೇತ್ರದಿಂದ ಗೆದ್ದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಈ ಮೊದಲು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಅದರಲ್ಲು ಸೋತಿದ್ದರು. ಹಾಗಾಗಿ ನಿಖಿಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಓದಿ..Naga Chaitanya: ಎಲ್ಲವನ್ನು ಬಿಟ್ಟ ನಾಗ ಚೈತನ್ಯ- ಸಮಂತಾ ಳಲ್ಲಿ ನನಗೆ ಅದೊಂದು ತುಂಬಾ ಇಷ್ಟ ಎಂದ ನಾಗ ಚೈತನ್ಯ- ಅದಕ್ಕೆ ಇಷ್ಟ ಪಟ್ಟೆ ಎಂದು ಹೇಳಿದ್ದೇನು ಗೊತ್ತೇ??

ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ಜೀವನ ಸರಿಹೊಂದುವ ಹಾಗೆ ತೋರುತ್ತಿಲ್ಲ. ಹಾಗಾಗಿ ಅವರು ಈ ವಿಚಾರದ ಬಗ್ಗೆ ಚಿಂತೆ ಮಾಡಿ, ನಿರ್ಧಾರ ಮಾಡಿದ್ದು, 3 ವರ್ಷಗಳ ಕಾಲ ರಾಜಕೀಯದಿಂದ ಬ್ರೇಕ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹೌದು, ಇನ್ನು ಮೂರು ವರ್ಷ ನಿಖಿಲ್ ಅವರು ರಾಜಕೀಯದಿಂದ ದೂರವೇ ಇರಲಿದ್ದಾರೆ..

ಸಿನಿಮಾ ಕ್ಷೇತ್ರದಲ್ಲೂ ಇರುವ ನಿಖಿಲ್ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿ, ಸಿನಿಮಾ ಮೂಲಕ ಜನರ ಪ್ರೀತಿ ಗಳಿಸಿ, ಜನರನ್ನು ರಂಜಿಸುವ ನಿರ್ಧಾರ ಮಾಡಿದ್ದಾರಂತೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅದೆಲ್ಲವನ್ನು ಮುಗಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ.. ಹಾಗಾಗಿ ರಾಜಕೀಯದಿಂದ ಮೂರು ವರ್ಷ ಬ್ರೇಕ್ ಪಡೆಯುತ್ತಾರಂತೆ. ಇದನ್ನು ಓದಿ..Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??

Comments are closed.