Pragathi Badigar: ಸರಿಗಮಪ ಗೆದ್ದ ಪ್ರಗತಿ ಬಡಿಗೇರ್ ರವರಿಗೆ ಕುಲಾಯಿಸಿದ ಮತ್ತೊಂದು ಅದೃಷ್ಟ: ದಿಡೀರ್ ಎಂದು ಬಂದ ಅದೃಷ್ಟ ಏನು ಗೊತ್ತೇ?? ತಿಳಿದರೆ ಖುಷಿ ಆಗ್ತೀರಾ.
Pragathi Badigar: ಜೀಕನ್ನಡ (Zee Kannada) ವಾಹಿನಿಯ ಸರಿಗಮಪ ಕಾರ್ಯಕ್ರಮದ 19ನೇ ಸೀಸನ್ ಕಳೆದ ವಾರವಷ್ಟೇ ಮುಗಿಯಿತು. ಈ ಕಾರ್ಯಕ್ರಮ ಹಲವು ಮಕ್ಕಳಿಗೆ ದೊಡ್ಡವರಿಗೆ ಒಳ್ಳೆಯ ವೇದಿಕೆಯಾಗಿ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ಸರಿಗಮಪ ಇಂದ ಚಂದನವನಕ್ಕೆ ಸಾಕಷ್ಟು ಪ್ರತಿಭೆಗಳು ಸಿಕ್ಕಿದ್ದಾರೆ. ಇದೀಗ ಈ ಕಾರ್ಯಕ್ರಮ 19ನೇ ಸೀಸನ್ ಮೂಲಕ ಇನ್ನಷ್ಟು ಪ್ರತಿಭೆಗಳು ಹೊರಬಂದಿದ್ದಾರೆ.
![Pragathi Badigar: ಸರಿಗಮಪ ಗೆದ್ದ ಪ್ರಗತಿ ಬಡಿಗೇರ್ ರವರಿಗೆ ಕುಲಾಯಿಸಿದ ಮತ್ತೊಂದು ಅದೃಷ್ಟ: ದಿಡೀರ್ ಎಂದು ಬಂದ ಅದೃಷ್ಟ ಏನು ಗೊತ್ತೇ?? ತಿಳಿದರೆ ಖುಷಿ ಆಗ್ತೀರಾ. 1 pragati badiger latest updates | Pragathi Badigar: ಸರಿಗಮಪ ಗೆದ್ದ ಪ್ರಗತಿ ಬಡಿಗೇರ್ ರವರಿಗೆ ಕುಲಾಯಿಸಿದ ಮತ್ತೊಂದು ಅದೃಷ್ಟ: ದಿಡೀರ್ ಎಂದು ಬಂದ ಅದೃಷ್ಟ ಏನು ಗೊತ್ತೇ?? ತಿಳಿದರೆ ಖುಷಿ ಆಗ್ತೀರಾ.](http://kankaionline.com/wp-content/uploads/2023/04/pragati-badiger-latest-updates-1024x536.jpg)
ಸರಿಗಮಪ ಸೀಸನ್19ರ ವಿನ್ನರ್ ಆದವರು ಪ್ರಗತಿ ಬಡಿಗೇರ್ (Pragathi Badiger). ಇವರು ವಿನ್ನರ್ ಆಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಪ್ರಗತಿ ಅವರು ಬಹಳ ಬಡ ಕುಟುಂಬದಲ್ಲಿ ಹುಟ್ಟಿ, ಸಂಗೀತವನ್ನು ಕಲಿಯಲು ಸಾಧ್ಯವಾಗದೆ ರೇಡಿಯೋದಲ್ಲಿ ಹಾಡು ಕೇಳುತ್ತಾ, ಹಾಡುವುದನ್ನು ಕಲಿತ ಹುಡುಗಿ. ಸರಿಗಮಪ ಶೋ ಈ ಗ್ರಾಮೀಣ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಆಯಿತು. ಇಂದು ಅವರು ಮೆಂಟರ್ ಆಗಿ, ಪ್ರಗತಿ ಅವರನ್ನು ಸರಿಯಾದ ಕಡೆಗೆ ನಡೆಸಿದರು.
ಈ ಪ್ರತಿಭೆ ಗೆದ್ದು ಜನರ ಮನಸ್ಸಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ. ಇನ್ನು ನಮ್ಮ ಚಿತ್ರರಂಗದಲ್ಲಿ ಎಲ್ಲರ ಪಾಲಿನ ಬಾಸ್ ಅಂದ್ರೆ ನಮ್ಮ ಡಿಬಾಸ್ ದರ್ಶನ್ (DBoss Darshan) ಅವರ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಡಿಬಾಸ್ ದರ್ಶನ್ ಅವರು ಎಲ್ಲರಿಗೂ ಗೊತ್ತು, ಪ್ರತಿಭೆ ಇದ್ದವರಿಗೆ ಕಷ್ಟದಲ್ಲಿ ಇರುವವರಿಗೆ ಡಿಬಾಸ್ ಪ್ರೋತ್ಸಾಹ ಯಾವಾಗಲೂ ಕೂಡ ಇರುತ್ತದೆ. ಮಕ್ಕಳೇ ಆಗಲಿ, ಎಲ್ಲರಿಗೂ ಸಾಥ್ ಕೊಡುವ ಡಿಬಾಸ್ ಇದೀಗ ಪ್ರಗತಿ ಬಡಿಗೇರ್ ಅವರ ಜೊತೆಗೂ ನಿಂತಿದ್ದಾರೆ..
ಕಾರ್ಯಕ್ರಮದಲ್ಲಿ ಪ್ರಗತಿ ವಿನ್ನರ್ ಆದ ನಂತರ ಡಿಬಾಸ್ ಅವರು ಕಾಲ್ ಮಾಡಿ ಮಾತನಾಡಿದ್ದು, ಪ್ರಗತಿ ಅವರು ಹಾಡುವುದು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ, ಮುಂದೆ ಏನೇ ಸಹಾಯ ಬೇಕಿದ್ದರು ತಾವು ಮಾಡುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದು, ಹಾಡುವುದನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದಿದ್ದಾರೆ. ಜೊತೆಗೆ ತಮ್ಮ ಮುಂಬರುವ ಸಿನಿಮಾದಲ್ಲಿ ಪ್ರಗತಿ ಅವರಿಗೆ ಹಾಡುವುದಕ್ಕೆ ಅವಕಾಶ ಕೊಡುವ ಭರವಸೆಯನ್ನು ನೀಡಿದ್ದಾರೆ ಡಿಬಾಸ್.
Comments are closed.