ಒಂದರಲ್ಲ ಎರಡಲ್ಲ ಆರು ವರ್ಷಗಳ ಕಾಲ ಪ್ರೀತಿ ಮಾಡಿದ್ರು, ಎಲ್ಲಾ ಚೆನ್ನಾಗಿತ್ತು,ಆದರೆ ಯುವತಿಯ ಮೊಬೈಲ್ ನೋಡಿದ ತಕ್ಷಣ ಆಕೆಯನ್ನು ಮುಗಿಸಿದ. ಅಂತದ್ದು ಏನಿತ್ತು ಗೊತ್ತೇ??
ನಮಸ್ಕಾರ ಸ್ನೇಹಿತರೆ ಪ್ರೀತಿ ಎನ್ನುವುದು ಅತ್ಯಂತ ಪವಿತ್ರವಾದ ಸಂಬಂಧ. ಒಬ್ಬರಿಗೊಬ್ಬರು ಪ್ರಾಣ ಬೇಕಾದರೂ ನೀಡುತ್ತೇವೆ ಎಂಬುದಾಗಿ ಆಣೆ ಮಾಡಿ ಈ ಸಂಬಂಧಕ್ಕೆ ಒಳಗಾಗಿರುತ್ತಾರೆ ಆದರೆ ಇದೇ ಪ್ರೀತಿಯಲ್ಲಿ ಒಬ್ಬರ ಪ್ರಾಣವನ್ನು ಕೂಡ ತೆಗೆಯುತ್ತಾರೆ ಎಂಬುದು ನಿಜಕ್ಕೂ ಕೂಡ ಶೋಚನೀಯ ವಿಚಾರ. ಇನ್ನೊಬ್ಬ ಪ್ರಿಯಕರ ತನ್ನ ಪ್ರಿಯತಮೆಯ ಮೊಬೈಲ್ ಫೋನ್ ಅನ್ನು ನೋಡಿ ಆಕೆಯ ಕತ್ತು ಹಿಸುಕಿ ಮುಗಿಸಿ ಬಿಟ್ಟಿದ್ದಾನೆ. ನಂತರ ಪೊಲೀಸರಿಗೆ ಹೋಗಿ ಕೂಡ ತಾನೇ ಸ್ವಯಂ ಶರಣಾಗಿದ್ದಾನೆ.
ಕೇಳಲು ವಿಚಿತ್ರ ಎಂದನಿಸಿದರೂ ಕೂಡ ಇದು ದೇವರನಾಡಾಗಿರುವ ಕೇರಳದಲ್ಲಿ ನಡೆದಿರುವ ಒಂದು ಘಟನೆಯಾಗಿದೆ. 27 ವರ್ಷದ ಸುಜೇಶ್ ಹಾಗೂ 24 ವರ್ಷದ ಸೂರ್ಯ ಪ್ರಿಯ ಎನ್ನುವ ಇಬ್ಬರೂ ಕೂಡ ಕಾಲೇಜು ದಿನಗಳಿಂದಲೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಷ್ಟೊಂದು ಗಾಢವಾಗಿ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರ ನಡುವೆ ಏನಾಯ್ತು ಎಂಬುದು ತಿಳಿದು ಬಂದಿಲ್ಲ ಆದರೂ ಕೂಡ ಕಳೆದ ಕೆಲವು ದಿನಗಳ ಹಿಂದೆ ಸೂರ್ಯ ಪ್ರಿಯಾ ಸುಜೇಶ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಳು. ಇದು ಸುಜೇಶ್ ನನ್ನು ಬಹುವಾಗಿ ಕಾಡಿತ್ತು ಎಂಬುದಾಗಿ ತಿಳಿದು ಬಂದಿದೆ. ಇದಾದ ನಂತರ ಕೆಲವೇ ದಿನಗಳಲ್ಲಿ ಸುಜೇಶ್ ನಿಗೆ ಸೂರ್ಯ ಪ್ರಿಯ ಬೇರೆ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂಬ ವಿಷಯ ತಿಳಿದು ಬಂದಿದೆ.
![ಒಂದರಲ್ಲ ಎರಡಲ್ಲ ಆರು ವರ್ಷಗಳ ಕಾಲ ಪ್ರೀತಿ ಮಾಡಿದ್ರು, ಎಲ್ಲಾ ಚೆನ್ನಾಗಿತ್ತು,ಆದರೆ ಯುವತಿಯ ಮೊಬೈಲ್ ನೋಡಿದ ತಕ್ಷಣ ಆಕೆಯನ್ನು ಮುಗಿಸಿದ. ಅಂತದ್ದು ಏನಿತ್ತು ಗೊತ್ತೇ?? 1 Sujish surya | ಒಂದರಲ್ಲ ಎರಡಲ್ಲ ಆರು ವರ್ಷಗಳ ಕಾಲ ಪ್ರೀತಿ ಮಾಡಿದ್ರು, ಎಲ್ಲಾ ಚೆನ್ನಾಗಿತ್ತು,ಆದರೆ ಯುವತಿಯ ಮೊಬೈಲ್ ನೋಡಿದ ತಕ್ಷಣ ಆಕೆಯನ್ನು ಮುಗಿಸಿದ. ಅಂತದ್ದು ಏನಿತ್ತು ಗೊತ್ತೇ??](http://kankaionline.com/wp-content/uploads/2022/09/Sujish-surya-1024x508.jpg)
ಇದೇ ವಿಚಾರಕ್ಕಾಗಿ ಮನೆಯಲ್ಲಿ ಯಾರು ಇಲ್ಲದಿದ್ದ ಸಂದರ್ಭದಲ್ಲಿ ಸೂರ್ಯ ಪ್ರಿಯಾಳ ಮನೆಗೆ ಸುಜೇಶ್ ಹೋಗಿದ್ದಾನೆ. ಆಕೆ ಜೊತೆಗೆ ಇದರ ಬಗ್ಗೆ ಮಾತನಾಡಬೇಕು ಎಂದು ಹೋಗಿದ್ದ ಆದರೆ ಅಲ್ಲಿ ಆಕೆಯ ಮೊಬೈಲ್ನಲ್ಲಿ ಇರುವ ಮೆಸೇಜುಗಳನ್ನು ನೋಡಿ ಕೋಪೋದ್ರಿಕ್ತನಾಗಿ ಆಕೆಯ ಕತ್ತುಹಿಸಿಕಿ ಮುಗಿಸಿ ಬಿಟ್ಟಿದ್ದಾನೆ. ನಂತರ ಫೋನನ್ನು ಪೊಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ತಾನು ಈ ಕೆಲಸ ಮಾಡಿದ್ದೇನೆ ಎಂಬುದಾಗಿ ಹೇಳಿಕೊಂಡು ಶರಣಾಗಿದ್ದಾನೆ. ಪ್ರೀತಿಯಲ್ಲಿ ಇಷ್ಟೊಂದು ವಿಕೃತ ಮನೋಭಾವನೆಯನ್ನು ಹೊಂದಿರುವುದು ಎಷ್ಟರಮಟ್ಟಿಗೆ ಸರಿ? ಬಾಳಿ ಬದುಕಬೇಕಾಗಿದ್ದ ಒಂದು ಜೀವ ಈಗ ಅರ್ಧದಲ್ಲಿಯೇ ತನ್ನ ಬಾಳ ಪಯಣವನ್ನು ಮುಗಿಸಬೇಕಾಗಿದೆ.
Comments are closed.