Electricity Bill: ಬಿಟ್ಟಿ ಯೋಜನೆ ಘೋಷಣೆ ಬಳಿಕ ನೀವು ಪವರ್ ಬಿಲ್ ಕಟ್ಟಬೇಕೇ?? ನಿಮ್ಮ ಮನೆ ಮುಂದೆ ಅಧಿಕಾರಿಗಳು ಬಂದಾಗ ಏನು ಮಾಡಬೇಕು ಗೊತ್ತೇ??
Electricity Bill: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಬಹುಮತ ಪಡೆದು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ. ಈಗ ರಾಜ್ಯದ ಮುಂದಿನ ಸಿಎಂ ಯಾರಾಗಬಹುದು ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರ ನಡುವೆ ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಕಾಂಗ್ರೆಸ್ ಪಕ್ಷ ಗೆದ್ದು, ಅಧಿಕಾರಕ್ಕೆ ಬರೋದಂತೂ ಖಚಿತವಾಗಿದೆ. ಈಗ ಜನರಿಗೆ ಕರೆಂಟ್ ಬಿಲ್ ವಿಚಾರಕ್ಕೆ ಪ್ರಶ್ನೆಗಳು ಶುರುವಾಗಿದೆ.

ಕಾಂಗ್ರೆಸ್ ಸರ್ಕಾರ ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಫ್ರೀ ಎಂದು ಘೋಷಣೆ ನೀಡಿದ್ದಾಗಿದೆ, ಆದರೆ ಇದಕ್ಕೆ ಷರತ್ತುಗಳು, ನಿಯಮಗಳ ಬಗ್ಗೆ ತಿಳಿಸಿಲ್ಲ. 200 ಯೂನಿಟ್ ಕರೆಂಟ್ ಬಳಸಿದ ನಂತರ ಪಾವತಿ ಹೇಗೆ..ಯಾವ ವರ್ಗದ ಜನರಿಗೆ ವಿದ್ಯುತ್ ಉಚಿತ? ಇದ್ಯಾವುದರ ಬಗ್ಗೆ ಕೂಡ ತಿಳಿಸಿಲ್ಲ. ಮತ್ತೊಂದು ವಿಷಯ ಏನೆಂದರೆ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ಮಂಡನೆ ವೇಳೆ, ಬಿಪಿಎಲ್ ಕಾರ್ಡ್ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ. ಇದನ್ನು ಓದಿ..Surya Nutan: ಇದಪ್ಪ ಹಬ್ಬ ಅಂದ್ರೆ- ಒಮ್ಮೆ ಖರೀದಿ ಮಾಡಿದರೇ, ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬೇಡ. ಈ ಸ್ಟೌವ್ ಬೆಲೆ ಎಷ್ಟು ಗೊತ್ತೇ??
ತಿಂಗಳಿಗೆ 75 ಯೂನಿಟ್ ಉಚಿತ ಕರೆಂಟ್ ಘೋಷಣೆ ಮಾಡಿದ್ದರು. ಇತ್ತ ಡಿಕೆ ಶಿವಕುಮಾರ್ ಅವರು ಜನರಿಗೆ ಘೋಷಣೆಯನ್ನೇ ಮಾಡಿದರು, ಮಳವಳ್ಳಿಯಲ್ಲಿ ಎಲೆಕ್ಷನ್ ಪ್ರಚಾರದ ವೇಳೆ, ಜೂನ್ 1ರಿಂದ ನೀವು ಕರೆಂಟ್ ಬಿಲ್ ಕಟ್ಟುವುದೇ ಬೇಡ ಎಂದು ಹೇಳಿದ್ದರು. ಮೇ 13ರಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ, ಜೂನ್ 1 ರಿಂದ ನೀವೆಲ್ಲರು ಕರೆಂಟ್ ಬಿಲ್ ಕಟ್ಟುವುದೇ ಬೇಡ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು.
ಡಿಕೆ ಶಿವಕುಮಾರ್ ಅವರು ಹಾಗೂ ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ವಿಡಿಯೋ ಒಂದನ್ನು ಕೆಪಿಸಿಸಿ ಶೇರ್ ಮಾಡಿತ್ತು, ಅದರಲ್ಲಿ ಇಬ್ಬರು ಕೂಡ ಸರ್ಕಾರ ರಚನೆಯಾಗಿ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲೇ ಉಚಿಯ್ ಭರವಸೆಗಳನ್ನು ಪೂರ್ತಿಗೊಳಿಸಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಮಾತು ನಿಜವೇ ಆದರೆ ಜುಲೈ ಇಂದ ಕರೆಂಟ್ ಬಿಲ್ ಕಟ್ಟುವ ಹಾಗೆ ಇರುವುದಿಲ್ಲ. ಸರ್ಕಾರ ಹೀಗೆ ಯೋಜನೆ ಹಾಕಿರುವಾಗ ಒಂದು ವೇಳೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಕರೆಂಟ್ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಟ್ ಮಾಡಿದರೆ, ನೀವು ಅವರನ್ನು ಧೈರ್ಯವಾಗಿ ಎದುರಿಸಬಹುದು. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.
Comments are closed.