Ram Mandir: ಅಯೋಧ್ಯೆ ರಾಮಮಂದಿರ ಬೇರೆ ದೇವಸ್ಥಾನಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತೇ?? ಹಣದ ಆಟ ನಡೆಯುವುದಿಲ್ಲವೇ? ಭಕ್ತಿಗಳಿಗೆ ಸಿಹಿ ಸುದ್ದಿ.

Ram Mandir: ಅಯೋಧ್ಯೆಯಲ್ಲಿ (Ayodhye) ರಾಮಮಂದಿರ (Ram Mandir) ದ ಸ್ಥಾಪನೆ ಆಗುತ್ತಿದೆ. ಇದು ಭಾರತ ದೇಶದ ಜನರಿಗೆ ಹೆಮ್ಮೆಯ ವಿಷಯ, ನಮ್ಮ ದೇಶ ರಾಮರಾಜ್ಯ ಆಗಬೇಕು ಎನ್ನುವುದು ಎಲ್ಲಾ ಹಿಂದೂ ಜನರ ಆಶಯವಾಗಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮಮಂದಿರದ (Ram Mandir) ಸ್ಥಾಪನೆ ಬಹಳ ಸಂತೋಷಕರವಾದ ವಿಚಾರ ಎಂದರೆ ತಪ್ಪಲ್ಲ. ರಾಮಮಂದಿರ ಬೇರೆ ದೇವಸ್ಥಾನಗಳ ರೀತಿ ಇರುವುದಿಲ್ಲ, ವಿಭಿನ್ನವಾಗಿ ಇರಲಿದೆ. ಅದು ಹೇಗೆ ಗೊತ್ತಾ?

ayodhya ram mandir seva details | Ram Mandir: ಅಯೋಧ್ಯೆ ರಾಮಮಂದಿರ ಬೇರೆ ದೇವಸ್ಥಾನಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತೇ?? ಹಣದ ಆಟ ನಡೆಯುವುದಿಲ್ಲವೇ? ಭಕ್ತಿಗಳಿಗೆ ಸಿಹಿ ಸುದ್ದಿ.
Ram Mandir: ಅಯೋಧ್ಯೆ ರಾಮಮಂದಿರ ಬೇರೆ ದೇವಸ್ಥಾನಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತೇ?? ಹಣದ ಆಟ ನಡೆಯುವುದಿಲ್ಲವೇ? ಭಕ್ತಿಗಳಿಗೆ ಸಿಹಿ ಸುದ್ದಿ. 2

ಪೇಜಾವರ ಶ್ರೀಗಳು(Pejavara Shri) ಮಾಧ್ಯಮದ ಎದುರು ಮಾತನಾಡಿ, ರಾಮಮಂದಿರದ (Ram mandir) ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ (Ram Mandir) ದೇವಸ್ಥಾನದಲ್ಲಿ ಸಾವಿರಗಟ್ಟಲೇ, ಲಕ್ಷಗಟ್ಟಲೇ ಹಣಕೊಟ್ಟು ಸೇವೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರು ಬಡವರಿಗೆ ಸೇವೆ ಸಲ್ಲಿಸಿದರೆ, ಅದೇ ಶ್ರೀರಾಮನಿಗೆ ನೀಡುವ ಕಾಣಿಕೆ..” ಎಂದಿದ್ದಾರೆ ಪೇಜಾವರ ಶ್ರೀಗಳು. ಮುಂದುವರೆದು ಮಾತನಾಡಿ. ಇದನ್ನು ಓದಿ..Ambani Car: ಅಂಬಾನಿ ಆ ಕಾರ್ ನ ಬಣ್ಣವನ್ನು ಬದಲಿಸಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ? ಇಂತವರು ಇರ್ತಾರ??

“ದೇವರ ದರ್ಶನ ಮಾಡಲು ಖಾಲಿ ಕೈಯಲ್ಲಿ ಹೋಗಬಾರದು, ದಾನ ಮಾಡಲು ಅನುಕೂಲ ಇದ್ದರೆ. ನಮ್ಮ ಜೊತೆ ಇರುವ ಬಡವರಿಗೆ ಸಹಾಯ ಮಾಡೋಣ, ಮನೆ ನಿರ್ಮಿಸಿಕೊಟ್ಟು ಅದನ್ನು ಶ್ರೀರಾಮ ದೇವರಿಗೆ ಅರ್ಪಿಸೋಣ..” ಎಂದಿದ್ದಾರೆ. “ರಾಮರಾಜ್ಯ ಎನ್ನುವುದು ನಮ್ಮ ಕನಸು, ನಮ್ಮ ಸಮಾಜದಲ್ಲಿ ಸಾಕಷ್ಟು ಸಂಸ್ಥೆಗಳಿವೆ, ಅವರೆಲ್ಲ ಸಾಮಾಜಿಕ ಕಾರ್ಯ ಮಾಡಿದರೆ ಅದುವೇ ದೇವರ ಸೇವೆ, ಅವರವರ ಕೆಲಸದಲ್ಲಿ ಏನು ಸಾಧ್ಯವೋ ಆ ರೀತಿ ಸೇವೆ ಸಹಾಯ ಮಾಡಿದರೆ, ಅದರಿಂದ ರಾಮರಾಜ್ಯ ಆಗುತ್ತದೆ.

ಶ್ರೀರಾಮನ ಹೆಸರಿನಲ್ಲಿ ದೇಶಸೇವೆ ನಡೆಯಬೇಕು. ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ, ಮುಂದಿನ ಸಂಕ್ರಾಂತಿ ಹಬ್ಬದ ಮುಗಿದ ಬಳಿಕ ರಾಮಮಂದಿರದಲ್ಲಿ ದೇವರ ಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಅದ್ಭುತವಾದ ಪ್ರತಿಮೆಯ ನಿರ್ಮಾಣವಾಗುತ್ತಿದೆ. ಮನುಷ್ಯರು ಎಲ್ಲಾ ಜೀವಿಗಳು ಜೀವಿಸುವುದಕ್ಕೆ ಪ್ರಾಣವಾಯು ಅಗತ್ಯ, ಕೋವಿಡ್ ವೇಳೆ ಆಕ್ಸಿಜನ್ ಕೊರತೆ ಎಷ್ಟರ ಮಟ್ಟಕ್ಕೆ ಇತ್ತು ಎಂದು ನೋಡಿದ್ದೇವೆ.. ಇದನ್ನು ಓದಿ..Kannada News: ಸಾಲ ಮಾಡಿ, ಪತ್ನಿಯನ್ನು ಓದಿಸಿದ- ಆಕೆ ಕೂಡ ಚೆನ್ನಾಗಿ ಓದಿ ಅಧಿಕಾರಿ ಆಡಲು, ಆದರೆ ಬಡ ಗಂಡನನ್ನು ಬಿಟ್ಟು, ಏನು ಮಾಡಿದ್ದಾಳೆ ಗೊತ್ತೇ?

ಈ ಪ್ರಕೃತಿಯನ್ನು ನಾವೆ ನಮ್ಮ ಕೈಯಾರೆ ಹಾಳು ಮಾಡುತ್ತಿದ್ದೇವೆ, ಎಲ್ಲರೂ ಗಿಡ ನೀಡಬೇಕು, ದ್ವಿಚಕ್ರ ವಾಹನ ಇರುವವರು 2 ಗಿಡ, ನಾಲ್ಕು ಚಕ್ರದ ವಾಹನ ಇರುವವರು 4 ಗಿಡ, ಎಸಿ ಇರುವವರು ಇನ್ನು ಹೆಚ್ಚಿನ ಗಿಡ ನೆಡಬಹುದು. ಮರಗಿಡಗಳನ್ನ ಬೆಳೆಸಬೇಕು, ಬೆಳೆಸದೆ ಇರುವವರಿಗೆ ಈ ಪ್ರಕೃತಿಯಲ್ಲಿ ಬದುಕುವ ಹಕ್ಕು ಇರುವುದಿಲ್ಲ, ಪರಿಸರ ರಕ್ಷಣೆಯನ್ನು ಒಂದು ವ್ರತ ಮಾಡುವ ಹಾಗೆ ಮಾಡಬೇಕು..” ಎಂದಿದ್ದಾರೆ ಪೇಜಾವರ ಶ್ರೀಗಳು. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.

Comments are closed.