Gruhalakshmi scheme: ನಿನ್ನೆ ಕೊನೆಗೂ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಬಂತು. ನಿಮಗೆ ಹಣ ಬಂದಿಲ್ಲ ಅಂದ್ರೆ ಈ 2 ಕೆಲ್ಸ ಮಾಡಿ ಹಣ ಪಡಿಬಹುದು.
Gruhalakshmi scheme: ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯಗಳಲ್ಲಿ ಕೂಡ ಕೇಳಿ ಬರುತ್ತಿರುವಂತಹ ಒಂದೇ ಒಂದು ಯೋಜನೆ ಅಂದ್ರೆ ಅದು ಕಾಂಗ್ರೆಸ್ ರಾಜ್ಯ ಸರ್ಕಾರದಿಂದ ಆಗಸ್ಟ್30ರಂದು ಜಾರಿಗೆ ಬಂದಿರುವಂತಹ ಗೃಹಲಕ್ಷ್ಮಿ ಯೋಜನೆ(Gruhalakshmi scheme). ಎಲ್ಲಿ ನೋಡಿದ್ರು ಕೂಡ ಈ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
Gruhalakshmi scheme: If you didn’t get it, please follow the steps mentioned below.
ಈಗಾಗಲೇ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಸಾಕಷ್ಟು ಜನರಿಗೆ ಬಿಡುಗಡೆಯಾಗಿರುವಂತಹ ಎರಡು ಕಂತುಗಳು ಕೂಡ ಸಿಕ್ಕಿಲ್ಲ ಅನ್ನೋ ಮಾಹಿತಿ ಕೇಳಿ ಬರ್ತಾ ಇದೆ. ಇನ್ನು ಕೆಲವರಿಗೆ ಎರಡನೇ ತಿಂಗಳಿನ ಹಣ ಬಂದಿಲ್ಲ ಅನ್ನೋದಾಗಿ ಕೂಡ ಕೇಳಿ ಬರ್ತಾ ಇದೆ. ಈ ವಿಚಾರದ ಬಗ್ಗೆ ಸರ್ಕಾರದಿಂದಲೂ ಕೂಡ ಅಧಿಕೃತ ಅಧಿಕಾರಿಗಳ ಮೂಲಕ ಪ್ರತಿಯೊಂದು ಮಾಹಿತಿಗಳು ಕೂಡ ಹೊರ ಬರ್ತಾ ಇದ್ದು ಬನ್ನಿ ಈಗ ಸಿಕ್ಕಿರುವಂತಹ ಲೇಟೆಸ್ಟ್ ಅಪ್ಡೇಟ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಇನ್ನು ಅಧಿಕೃತವಾಗಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನಿನ್ನೆ ರಾಜ್ಯದ ಕೆಲವೊಂದು ಜಿಲ್ಲೆಗಳಿಗೆ ಹಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಆ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವಂತಹ ಜಿಲ್ಲೆಗಳು, ಗದಗ, ಶಿವಮೊಗ್ಗ, ಉತ್ತರ ಕನ್ನಡ, ಬೀದರ್, ಹಾವೇರಿ, ತುಮಕೂರು, ಕೋಲಾರ, ದಕ್ಷಿಣ ಕನ್ನಡ, ಕೊಪ್ಪಳ, ಧಾರವಾಡ, ವಿಜಯಪುರ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾಯಿಸಲಾಗಿದೆ ಎಂಬುದಾಗಿ ಅಧಿಕೃತವಾಗಿ ತಿಳಿದುಬಂದಿದೆ.
ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea
ಈ ವಿಚಾರದ ಬಗ್ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಅಧಿಕೃತವಾಗಿ ಸೂಚನೆ ಹೊರಬಂದಿದೆ. ಇನ್ನು ನೀವು ಕೂಡ ಈ ಮೇಲ್ ಹೇಳಿರುವಂತಹ ಜಿಲ್ಲೆಗಳಲ್ಲಿ ವಾಸ ಮಾಡುವಂತಹ ಮಹಿಳೆಯರಾಗಿದ್ದು ಈಗಾಗಲೇ ಗೃಹಲಕ್ಷ್ಮಿ ಯೋಜನೆ(Gruhalakshmi Yojane) ಅಡಿಯಲ್ಲಿ ನೋಂದಾವಣೆ ಕೂಡ ಮಾಡಿಕೊಂಡಿದ್ದು ಒಂದು ವೇಳೆ ಹಣ ಬಾರದೆ ಹೋದಲ್ಲಿ ಎರಡು ಪ್ರಮುಖ ಕೆಲಸಗಳನ್ನು ಮಾಡಲೇಬೇಕು ಎಂಬುದಾಗಿ ಹೇಳಲಾಗಿದೆ.
ಮೊದಲನೇದಾಗಿ ನೀವು ಮಾಡಬೇಕಾಗಿರುವಂತಹ ಕೆಲಸ ಏನೆಂದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಖಾತೆಯ ಸ್ಟೇಟಸ್ ಅನ್ನು ಹತ್ತಿರದ ಗ್ರಾಮ ವನ್, ಬೆಂಗಳೂರು ವನ್ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಹೋಗಿ ಪ್ರಮುಖವಾಗಿ ಪರಿಶೀಲನೆ ಮಾಡಬೇಕಾಗಿರುತ್ತದೆ. ಒಂದು ವೇಳೆ ಇಲ್ಲಿ ಎಲ್ಲಾ ಸರಿ ಇದೆ ಅಂತ ಖಾತ್ರಿ ಆದ ನಂತರ ನೀವು CDPO ಅಧಿಕಾರಿಗಳ ಬಳಿ ಹೋಗಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾಗಿರುತ್ತದೆ. ಇಲ್ಲಿ ಯಾರಿಗೆಲ್ಲ ಹಣ ಬಂದಿಲ್ಲ ಎನ್ನುವುದನ್ನು ಲಿಸ್ಟ್ ಮೂಲಕ ಗುರುತಿಸಿ ಅದಕ್ಕೆ ಬೇಕಾಗಿರುವಂತಹ ಪರಿಹಾರವನ್ನು ಒದಗಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
Comments are closed.